<p><strong>ಅಡಿಲೇಡ್ (ಪಿಟಿಐ):</strong> `ಭಾರತದ ಬ್ಯಾಟ್ಸ್ಮನ್ಗಳಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಫಾರ್ಮ್ ನಲ್ಲಿದ್ದಾರೆ. ಉಳಿದವರು ತಡಬಡಾಯಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಾದರೂ ಈ ತಂಡದವರು ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಹೇಳಿದ್ದಾರೆ.<br /> <br /> `ವಿಶ್ವ ದರ್ಜೆಯ ಆಟಗಾರರು ಭಾರತ ತಂಡದಲ್ಲಿದ್ದಾರೆ. ಅಗ್ರ ಕ್ರಮಾಂಕ ಆರು ಮಂದಿ ಆಟಗಾರರು ಟೆಸ್ಟ್ನಲ್ಲಿ ಕಲೆಹಾಕಿರುವ ರನ್ಗಳ ರಾಶಿಯನ್ನೇ ನೋಡಿ. ಇದೊಂದು ಅದ್ಭುತ ಸಾಧನೆ. ಆದರೆ ಅವರೆಲ್ಲಾ ಈ ಸರಣಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಸಚಿನ್ ಕೆಲ ಅರ್ಧ ಶತಕಗಳ ಮೂಲಕ ಮಿಂಚಿದ್ದಾರೆ. ಹಾಗಾಗಿ ಉಳಿದ ಬ್ಯಾಟ್ಸ್ ಮನ್ಗಳು ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಾದರೂ ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಅವರು ತಿಳಿಸಿದ್ದಾರೆ.<br /> <br /> ಆದರೆ 4-0ರಲ್ಲಿ ಟೆಸ್ಟ್ ಸರಣಿ ಗೆಲ್ಲುವುದೇ ನಮ್ಮ ಗುರಿ ಎಂದು ವಾರ್ನರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. `ಪರ್ತ್ ಟೆಸ್ಟ್ ಮುಗಿದ ಬಳಿಕ ನಮ್ಮ ನಾಯಕ ಮೈಕಲ್ ಕ್ಲಾರ್ಕ್ ಇದನ್ನು ನಮಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. <br /> <br /> ಪರ್ತ್ ಗೆಲುವನ್ನು ಸಂಭ್ರಮಿಸಿ, ಆದರೆ 4-0 ಗೆಲುವು ನಿಮ್ಮ ಮನದಲ್ಲಿರಲಿ ಎಂದು ಅವರು ಹೇಳಿದ್ದಾರೆ. ಹಾಗಾಗಿ 24ರಂದು ಅಡಿಲೇಡ್ನಲ್ಲಿ ಆರಂಭವಾಗಲಿರುವ ಟೆಸ್ಟ್ನಲ್ಲೂ ಭಾರತ ತಂಡವನ್ನು ಕಾಡಲು ನಾವು ಸಿದ್ಧ~ ಎಂದು ವಾರ್ನರ್ ವಿವರಿಸಿದ್ದಾರೆ.<br /> <br /> `ನಾವು ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರಪಟ್ಟ ಪಡೆಯಬೇಕು. 2013ರಲ್ಲಿ ನಡೆಯಲಿರುವ ಆ್ಯಷಸ್ ಸರಣಿ ವೇಳೆಗೆ ಈ ಸಾಧನೆ ಮಾಡಬೇಕು. ಈ ಸಾಧನೆ ಮಾಡುವ ವಿಶ್ವಾಸ ನಮ್ಮಲ್ಲಿದೆ. ಅದಕ್ಕೆ ಈಗಿನ ಕಠಿಣ ಪ್ರಯತ್ನ ಮುಂದುವರಿಸಬೇಕು~ ಎಂದರು.<br /> <br /> ವಾರ್ನರ್ ಪರ್ತ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಅಬ್ಬರದ ಶತಕ (180) ಗಳಿಸಿದ್ದರು. ಹಾಗಾಗಿ ಅವರು `ಪಂದ್ಯ ಶ್ರೇಷ್ಠ~ ಗೌರವಕ್ಕೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಉಮೇಶ್ ಯಾದವ್ ಎಸೆತವೊಂದು ವಾರ್ನರ್ ತಲೆಗೆ ಬಡಿದಿತ್ತು. ಹಾಗಾಗಿ ತಲೆಸುತ್ತಿನ ಸಮಸ್ಯೆಗೆ ಒಳಗಾಗಿದ್ದರು. ಆದರೆ ಇದೀಗ ಅವರು ಅಡಿಲೇಡ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ. ಕಾಂಗರೂ ಪಡೆ ಈಗ 3-0ರಲ್ಲಿ ಮುನ್ನಡೆ ಹೊಂದಿದೆ.<br /> <br /> <strong>ನನ್ನನ್ನು ಕೈಬಿಡಬೇಡಿ:</strong> ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಡಲು ಕಣಕ್ಕಿಳಿಯುವ ತಂಡದಿಂದ ತಮ್ಮನ್ನು ಕೈಬಿಡದಿರುವಂತೆ ಆಸ್ಟ್ರೇಲಿಯಾದ ವೇಗದ ಬೌಲರ್ ರ್ಯಾನ್ ಹ್ಯಾರಿಸ್ ತಂಡದ ಆಡಳಿತಕ್ಕೆ ಮನವಿ ಮಾಡಿದ್ದಾರೆ.<br /> <br /> ಅಡಿಲೇಡ್ ಪಂದ್ಯಕ್ಕೆ ಒಬ್ಬ ವೇಗಿಯನ್ನು ಕೈಬಿಟ್ಟು ಆಫ್ ಸ್ಪಿನ್ನರ್ ನೇಥನ್ ಲಿಯೊನ್ ಅವರನ್ನು ಆಡಿಸುವ ಯೋಜನೆಯನ್ನು ತಂಡದ ಆಡಳಿತ ಹೊಂದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವೇಗಿಗಳಾದ ಬೆನ್ ಹಿಲ್ಫೆನ್ಹಾಸ್ ಹಾಗೂ ಪೀಟರ್ ಸಿಡ್ಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಗಾಗಿ ಮತ್ತೊಬ್ಬ ವೇಗಿಯ ಸ್ಥಾನಕ್ಕೆ ಹ್ಯಾರಿಸ್ ಹಾಗೂ ಮಿಷೆಲ್ ಸ್ಟಾರ್ಕ್ ನಡುವೆ ಪೈಪೋಟಿ ಏರ್ಪಟ್ಟಿದೆ.<br /> <br /> ಆದರೆ ಗಾಯದ ಸಮಸ್ಯೆಗೆ ಒಳಗಾಗಿದ್ದ ಹ್ಯಾರಿಸ್ ಕೆಲವು ದಿನಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹಿಂತಿರುಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಡಿಲೇಡ್ (ಪಿಟಿಐ):</strong> `ಭಾರತದ ಬ್ಯಾಟ್ಸ್ಮನ್ಗಳಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಫಾರ್ಮ್ ನಲ್ಲಿದ್ದಾರೆ. ಉಳಿದವರು ತಡಬಡಾಯಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಾದರೂ ಈ ತಂಡದವರು ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಹೇಳಿದ್ದಾರೆ.<br /> <br /> `ವಿಶ್ವ ದರ್ಜೆಯ ಆಟಗಾರರು ಭಾರತ ತಂಡದಲ್ಲಿದ್ದಾರೆ. ಅಗ್ರ ಕ್ರಮಾಂಕ ಆರು ಮಂದಿ ಆಟಗಾರರು ಟೆಸ್ಟ್ನಲ್ಲಿ ಕಲೆಹಾಕಿರುವ ರನ್ಗಳ ರಾಶಿಯನ್ನೇ ನೋಡಿ. ಇದೊಂದು ಅದ್ಭುತ ಸಾಧನೆ. ಆದರೆ ಅವರೆಲ್ಲಾ ಈ ಸರಣಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಸಚಿನ್ ಕೆಲ ಅರ್ಧ ಶತಕಗಳ ಮೂಲಕ ಮಿಂಚಿದ್ದಾರೆ. ಹಾಗಾಗಿ ಉಳಿದ ಬ್ಯಾಟ್ಸ್ ಮನ್ಗಳು ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಾದರೂ ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಅವರು ತಿಳಿಸಿದ್ದಾರೆ.<br /> <br /> ಆದರೆ 4-0ರಲ್ಲಿ ಟೆಸ್ಟ್ ಸರಣಿ ಗೆಲ್ಲುವುದೇ ನಮ್ಮ ಗುರಿ ಎಂದು ವಾರ್ನರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. `ಪರ್ತ್ ಟೆಸ್ಟ್ ಮುಗಿದ ಬಳಿಕ ನಮ್ಮ ನಾಯಕ ಮೈಕಲ್ ಕ್ಲಾರ್ಕ್ ಇದನ್ನು ನಮಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. <br /> <br /> ಪರ್ತ್ ಗೆಲುವನ್ನು ಸಂಭ್ರಮಿಸಿ, ಆದರೆ 4-0 ಗೆಲುವು ನಿಮ್ಮ ಮನದಲ್ಲಿರಲಿ ಎಂದು ಅವರು ಹೇಳಿದ್ದಾರೆ. ಹಾಗಾಗಿ 24ರಂದು ಅಡಿಲೇಡ್ನಲ್ಲಿ ಆರಂಭವಾಗಲಿರುವ ಟೆಸ್ಟ್ನಲ್ಲೂ ಭಾರತ ತಂಡವನ್ನು ಕಾಡಲು ನಾವು ಸಿದ್ಧ~ ಎಂದು ವಾರ್ನರ್ ವಿವರಿಸಿದ್ದಾರೆ.<br /> <br /> `ನಾವು ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರಪಟ್ಟ ಪಡೆಯಬೇಕು. 2013ರಲ್ಲಿ ನಡೆಯಲಿರುವ ಆ್ಯಷಸ್ ಸರಣಿ ವೇಳೆಗೆ ಈ ಸಾಧನೆ ಮಾಡಬೇಕು. ಈ ಸಾಧನೆ ಮಾಡುವ ವಿಶ್ವಾಸ ನಮ್ಮಲ್ಲಿದೆ. ಅದಕ್ಕೆ ಈಗಿನ ಕಠಿಣ ಪ್ರಯತ್ನ ಮುಂದುವರಿಸಬೇಕು~ ಎಂದರು.<br /> <br /> ವಾರ್ನರ್ ಪರ್ತ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಅಬ್ಬರದ ಶತಕ (180) ಗಳಿಸಿದ್ದರು. ಹಾಗಾಗಿ ಅವರು `ಪಂದ್ಯ ಶ್ರೇಷ್ಠ~ ಗೌರವಕ್ಕೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಉಮೇಶ್ ಯಾದವ್ ಎಸೆತವೊಂದು ವಾರ್ನರ್ ತಲೆಗೆ ಬಡಿದಿತ್ತು. ಹಾಗಾಗಿ ತಲೆಸುತ್ತಿನ ಸಮಸ್ಯೆಗೆ ಒಳಗಾಗಿದ್ದರು. ಆದರೆ ಇದೀಗ ಅವರು ಅಡಿಲೇಡ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ. ಕಾಂಗರೂ ಪಡೆ ಈಗ 3-0ರಲ್ಲಿ ಮುನ್ನಡೆ ಹೊಂದಿದೆ.<br /> <br /> <strong>ನನ್ನನ್ನು ಕೈಬಿಡಬೇಡಿ:</strong> ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಡಲು ಕಣಕ್ಕಿಳಿಯುವ ತಂಡದಿಂದ ತಮ್ಮನ್ನು ಕೈಬಿಡದಿರುವಂತೆ ಆಸ್ಟ್ರೇಲಿಯಾದ ವೇಗದ ಬೌಲರ್ ರ್ಯಾನ್ ಹ್ಯಾರಿಸ್ ತಂಡದ ಆಡಳಿತಕ್ಕೆ ಮನವಿ ಮಾಡಿದ್ದಾರೆ.<br /> <br /> ಅಡಿಲೇಡ್ ಪಂದ್ಯಕ್ಕೆ ಒಬ್ಬ ವೇಗಿಯನ್ನು ಕೈಬಿಟ್ಟು ಆಫ್ ಸ್ಪಿನ್ನರ್ ನೇಥನ್ ಲಿಯೊನ್ ಅವರನ್ನು ಆಡಿಸುವ ಯೋಜನೆಯನ್ನು ತಂಡದ ಆಡಳಿತ ಹೊಂದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವೇಗಿಗಳಾದ ಬೆನ್ ಹಿಲ್ಫೆನ್ಹಾಸ್ ಹಾಗೂ ಪೀಟರ್ ಸಿಡ್ಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಗಾಗಿ ಮತ್ತೊಬ್ಬ ವೇಗಿಯ ಸ್ಥಾನಕ್ಕೆ ಹ್ಯಾರಿಸ್ ಹಾಗೂ ಮಿಷೆಲ್ ಸ್ಟಾರ್ಕ್ ನಡುವೆ ಪೈಪೋಟಿ ಏರ್ಪಟ್ಟಿದೆ.<br /> <br /> ಆದರೆ ಗಾಯದ ಸಮಸ್ಯೆಗೆ ಒಳಗಾಗಿದ್ದ ಹ್ಯಾರಿಸ್ ಕೆಲವು ದಿನಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹಿಂತಿರುಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>