<p><strong>ಧಾರವಾಡ: </strong>ಇಲ್ಲಿಗೆ ಸಮೀಪದ ಹೈಕೋರ್ಟ್ ಸಂಚಾರಿ ಪೀಠದ ಆವರಣದಲ್ಲಿರುವ ಸಿಬ್ಬಂದಿಯ ವಸತಿಗೃಹಗಳಿಗೆ ಗುರುವಾರ ಮಧ್ಯರಾತ್ರಿ ನುಗ್ಗಿದ ಕಳ್ಳರು ಐದು ಮನೆಗಳ ಬಾಗಿಲು ಚಿಲಕ ಮುರಿದು ಸುಮಾರು ಆರು ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. <br /> <br /> ಆ ಮನೆಗಳಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಅಕ್ಕಪಕ್ಕದ ಮನೆಗಳ ಚಿಲಕವನ್ನು ಭದ್ರಪಡಿಸಿಕೊಂಡು ಮನೆ ಬಾಗಿಲುಗಳ ಸ್ಕ್ರೂಗಳನ್ನು ಮುರಿದು ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. <br /> ಈ ಘಟನೆ ರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. <br /> <br /> ಘಟನೆ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕುಮಾರ್ ವೈ.ಎಸ್., ಡಿಎಸ್ಪಿ ರಾಜೇಶ ಬನಹಟ್ಟಿ, ಗರಗ ಠಾಣೆಯ ಪಿಎಸ್ಐ ಎಂ.ಬಿ. ಗೊರವನಕೊಳ್ಳ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. <br /> <br /> ಒಟ್ಟು 21 ತೊಲಿ ಚಿನ್ನ, ಎರಡು ಕೆ.ಜಿ. ಬೆಳ್ಳಿ ಹಾಗೂ ರೂ 10 ಸಾವಿರ ನಗದು ಲೂಟಿಯಾಗಿದೆ. ಬಿ2 ವಸತಿಗೃಹದ ಮನೆ ಸಂಖ್ಯೆ 14, 24, ಬಿ1ನ 14, ಸಿ2 ಮನೆ ಸಂಖ್ಯೆ 7 ಸೇರಿದಂತೆ ಒಟ್ಟು ಐದು ಮನೆಗಳಲ್ಲಿ ಕಳ್ಳತನ ನಡೆದಿದೆ. ಈ ಮನೆಗಳಲ್ಲಿ ಪ್ರಥಮ (ಎಫ್ಡಿಎ) ಹಾಗೂ ದ್ವಿತೀಯ ದರ್ಜೆ (ಎಸ್ಡಿಎ) ಹಂತದ ಉದ್ಯೋಗಿಗಳು ವಾಸವಾಗಿದ್ದಾರೆ. <br /> <br /> ವಿ.ಎನ್.ಪಾಟೀಲ ಎಂಬುವವರು ತಮ್ಮ ಸಂಬಂಧಿಕರ ಮದುವೆಗೆಂದು ರಾಮದುರ್ಗ ತಾಲ್ಲೂಕಿನ ಕಡಕೋಳಕ್ಕೆ ಹೋಗಿದ್ದರು. ಸುಚಿತ್ರಾ ಎಂಬುವವರು ಹೆರಿಗೆಗೆಂದು ತವರು ಜಿಲ್ಲೆ ವಿಜಾಪುರಕ್ಕೆ ಹೋಗಿದ್ದರೆ, ಉಳಿದ ನಿವಾಸಿಗಳಾದ ಪ್ರೇಮಾ ಜಡಿಮಠ ಹಾಗೂ ಯಶವಂತ ಪ್ರಭು ಅವರೂ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ. <br /> <br /> ಇನ್ನೊಬ್ಬರ ಮನೆಯ ಗುರುತು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> ಚಿನ್ನ, ಬೆಳ್ಳಿ, ನಗದು ಹಣ ಹೊರತುಪಡಿಸಿದರೆ ಇನ್ನಿತರ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಒಯ್ದಿಲ್ಲ. ನಗ-ನಾಣ್ಯ ದೋಚಿದ ಬಳಿಕ ಸೂಟ್ಕೇಸ್, ಬೀರುಗಳನ್ನು ಯಥಾಸ್ಥಿತಿಯಲ್ಲಿಯೇ ಬಿಟ್ಟು ಪಲಾಯನ ಮಾಡಿದ್ದಾರೆ.<br /> <br /> ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪಿಎಸ್ಐ ಗೊರವನಕೊಳ್ಳ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಇಲ್ಲಿಗೆ ಸಮೀಪದ ಹೈಕೋರ್ಟ್ ಸಂಚಾರಿ ಪೀಠದ ಆವರಣದಲ್ಲಿರುವ ಸಿಬ್ಬಂದಿಯ ವಸತಿಗೃಹಗಳಿಗೆ ಗುರುವಾರ ಮಧ್ಯರಾತ್ರಿ ನುಗ್ಗಿದ ಕಳ್ಳರು ಐದು ಮನೆಗಳ ಬಾಗಿಲು ಚಿಲಕ ಮುರಿದು ಸುಮಾರು ಆರು ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. <br /> <br /> ಆ ಮನೆಗಳಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಅಕ್ಕಪಕ್ಕದ ಮನೆಗಳ ಚಿಲಕವನ್ನು ಭದ್ರಪಡಿಸಿಕೊಂಡು ಮನೆ ಬಾಗಿಲುಗಳ ಸ್ಕ್ರೂಗಳನ್ನು ಮುರಿದು ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. <br /> ಈ ಘಟನೆ ರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. <br /> <br /> ಘಟನೆ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕುಮಾರ್ ವೈ.ಎಸ್., ಡಿಎಸ್ಪಿ ರಾಜೇಶ ಬನಹಟ್ಟಿ, ಗರಗ ಠಾಣೆಯ ಪಿಎಸ್ಐ ಎಂ.ಬಿ. ಗೊರವನಕೊಳ್ಳ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. <br /> <br /> ಒಟ್ಟು 21 ತೊಲಿ ಚಿನ್ನ, ಎರಡು ಕೆ.ಜಿ. ಬೆಳ್ಳಿ ಹಾಗೂ ರೂ 10 ಸಾವಿರ ನಗದು ಲೂಟಿಯಾಗಿದೆ. ಬಿ2 ವಸತಿಗೃಹದ ಮನೆ ಸಂಖ್ಯೆ 14, 24, ಬಿ1ನ 14, ಸಿ2 ಮನೆ ಸಂಖ್ಯೆ 7 ಸೇರಿದಂತೆ ಒಟ್ಟು ಐದು ಮನೆಗಳಲ್ಲಿ ಕಳ್ಳತನ ನಡೆದಿದೆ. ಈ ಮನೆಗಳಲ್ಲಿ ಪ್ರಥಮ (ಎಫ್ಡಿಎ) ಹಾಗೂ ದ್ವಿತೀಯ ದರ್ಜೆ (ಎಸ್ಡಿಎ) ಹಂತದ ಉದ್ಯೋಗಿಗಳು ವಾಸವಾಗಿದ್ದಾರೆ. <br /> <br /> ವಿ.ಎನ್.ಪಾಟೀಲ ಎಂಬುವವರು ತಮ್ಮ ಸಂಬಂಧಿಕರ ಮದುವೆಗೆಂದು ರಾಮದುರ್ಗ ತಾಲ್ಲೂಕಿನ ಕಡಕೋಳಕ್ಕೆ ಹೋಗಿದ್ದರು. ಸುಚಿತ್ರಾ ಎಂಬುವವರು ಹೆರಿಗೆಗೆಂದು ತವರು ಜಿಲ್ಲೆ ವಿಜಾಪುರಕ್ಕೆ ಹೋಗಿದ್ದರೆ, ಉಳಿದ ನಿವಾಸಿಗಳಾದ ಪ್ರೇಮಾ ಜಡಿಮಠ ಹಾಗೂ ಯಶವಂತ ಪ್ರಭು ಅವರೂ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ. <br /> <br /> ಇನ್ನೊಬ್ಬರ ಮನೆಯ ಗುರುತು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> ಚಿನ್ನ, ಬೆಳ್ಳಿ, ನಗದು ಹಣ ಹೊರತುಪಡಿಸಿದರೆ ಇನ್ನಿತರ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಒಯ್ದಿಲ್ಲ. ನಗ-ನಾಣ್ಯ ದೋಚಿದ ಬಳಿಕ ಸೂಟ್ಕೇಸ್, ಬೀರುಗಳನ್ನು ಯಥಾಸ್ಥಿತಿಯಲ್ಲಿಯೇ ಬಿಟ್ಟು ಪಲಾಯನ ಮಾಡಿದ್ದಾರೆ.<br /> <br /> ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪಿಎಸ್ಐ ಗೊರವನಕೊಳ್ಳ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>