<p>2025ರ ಮಂಗಳವಾರ 2ರಂದು ಅಂಗಾರಕ ಪ್ರದೋಷ ವ್ರತ ಆಚರಿಸಲಾಗುತ್ತದೆ. ಇದನ್ನು ಭೌಮ ಪ್ರದೋಷ ವ್ರತ ಎಂದು ಕರೆಯುತ್ತಾರೆ. ಪ್ರದೋಷ ವ್ರತದ ಮಹತ್ವ, ಪೂಜಾ ವಿಧಾನ ಹಾಗೂ ವ್ರತಾಚರಣೆಯಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.</p><p><strong>ಪ್ರದೋಷ ವ್ರತದ ಮಹತ್ವ</strong></p><p>ಶಿವನ ಆನುಗ್ರಹ ಪಡೆಯುವ, ಸಂತಾನ ಭಾಗ್ಯಕ್ಕಾಗಿ ಹಾಗೂ ವಾಸಿಯಾಗದ ರೋಗಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. </p>.ಅನಂತ ವ್ರತ: ವಿಶೇಷ ಉಪನ್ಯಾಸ.ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕಠಿಣ ವ್ರತ: ಎಷ್ಟು ನಿಷ್ಠೆಯಿಂದ ಇರಬೇಕಾಗುತ್ತದೆ?.<p><strong>ಅಂಗಾರಕ ಪ್ರದೋಷ ಪೂಜೆ ವಿಧಾನ:</strong></p><ul><li><p>ಪ್ರದೋಷ ವ್ರತ ಆಚರಿಸುವವರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿ, ‘ಆದ್ಯ ಅಹಂ ಮಹಾದೇವಸ್ಯ ಕೃಪಾಪ್ರಾಪ್ತ್ಯೈ ಸೋಮಪ್ರದೋಷವ್ರತಂ ಕರಿಷ್ಯೇ’ ಎಂಬ ಮಂತ್ರವನ್ನು ಪಠಿಸಿ ಉಪವಾಸ ವ್ರತವನ್ನು ಮಾಡಬೇಕು.</p></li><li><p>ಶಿವ ಪೂಜೆ ಮಾಡಿ ಇಡೀ ದಿನ ಉಪವಾಸ ಮಾಡಿ. ಪ್ರದೋಷ ಉಪವಾಸವನ್ನು ಆಚರಿಸುವವರು ದಿನವಿಡೀ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಬೇಕು.</p></li><li><p>ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ. ಗಂಗಾಜಲ ಹಾಗೂ ಹಾಲಿನೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಶ್ರೀಗಂಧ ಹಚ್ಚಿ.</p></li><li><p>ಶಿವಲಿಂಗದ ಮೇಲೆ ಬಿಲ್ವ ಪತ್ರೆ, ಅಕ್ಷತೆ, ಸಕ್ಕರೆ, ಜೇನುತುಪ್ಪ, ಹೂವು, ಹಣ್ಣು, ವಸ್ತ್ರ ಹಾಗೂ ಸಿಹಿತಿಂಡಿಗಳನ್ನು ಅರ್ಪಿಸಿ.</p></li><li><p>ಶಿವಲಿಂಗವನ್ನು ಪೂಜಿಸಿದ ನಂತರ, ಅಂಗಾರಕ ಪ್ರದೋಷ ವ್ರತದ ಕಥೆಯನ್ನು ಕೇಳಿ. ಶಿವನ ಮಂತ್ರಗಳನ್ನು ಪಠಿಸಿ. ಇದಾದ ನಂತರ ಶಿವನಿಗೆ ಆರತಿ ಮಾಡಿ ಆಹಾರ ಸೇವಿಸಿ.</p></li></ul><p><strong>ಭೌಮ ಪ್ರದೋಷ ವ್ರತದ ಪ್ರಯೋಜನ:</strong></p><ul><li><p>ಶಿವಭಕ್ತರಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ವ್ರತವನ್ನು ಆಚರಿಸುವುದರಿಂದ ಸಾವಿರ ಯಜ್ಞಗಳಿಗೆ ಸಮನಾದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯು ಪದೇ ಪದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಭೌಮ ಪ್ರದೋಷ ವ್ರತವು ಅವರಿಗೆ ಪ್ರಯೋಜನಕಾರಿಯಾಗಿದೆ.</p></li><li><p>ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಭೌಮ ಪ್ರದೋಷದ ಉಪವಾಸವನ್ನು ಆಚರಿಸುವುದು ಉತ್ತಮ.</p></li><li><p>ಈ ಉಪವಾಸದಲ್ಲಿ ಅಂಗಾರಕನ 21 ಹೆಸರುಗಳನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗುತ್ತದೆ ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2025ರ ಮಂಗಳವಾರ 2ರಂದು ಅಂಗಾರಕ ಪ್ರದೋಷ ವ್ರತ ಆಚರಿಸಲಾಗುತ್ತದೆ. ಇದನ್ನು ಭೌಮ ಪ್ರದೋಷ ವ್ರತ ಎಂದು ಕರೆಯುತ್ತಾರೆ. ಪ್ರದೋಷ ವ್ರತದ ಮಹತ್ವ, ಪೂಜಾ ವಿಧಾನ ಹಾಗೂ ವ್ರತಾಚರಣೆಯಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.</p><p><strong>ಪ್ರದೋಷ ವ್ರತದ ಮಹತ್ವ</strong></p><p>ಶಿವನ ಆನುಗ್ರಹ ಪಡೆಯುವ, ಸಂತಾನ ಭಾಗ್ಯಕ್ಕಾಗಿ ಹಾಗೂ ವಾಸಿಯಾಗದ ರೋಗಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. </p>.ಅನಂತ ವ್ರತ: ವಿಶೇಷ ಉಪನ್ಯಾಸ.ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕಠಿಣ ವ್ರತ: ಎಷ್ಟು ನಿಷ್ಠೆಯಿಂದ ಇರಬೇಕಾಗುತ್ತದೆ?.<p><strong>ಅಂಗಾರಕ ಪ್ರದೋಷ ಪೂಜೆ ವಿಧಾನ:</strong></p><ul><li><p>ಪ್ರದೋಷ ವ್ರತ ಆಚರಿಸುವವರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿ, ‘ಆದ್ಯ ಅಹಂ ಮಹಾದೇವಸ್ಯ ಕೃಪಾಪ್ರಾಪ್ತ್ಯೈ ಸೋಮಪ್ರದೋಷವ್ರತಂ ಕರಿಷ್ಯೇ’ ಎಂಬ ಮಂತ್ರವನ್ನು ಪಠಿಸಿ ಉಪವಾಸ ವ್ರತವನ್ನು ಮಾಡಬೇಕು.</p></li><li><p>ಶಿವ ಪೂಜೆ ಮಾಡಿ ಇಡೀ ದಿನ ಉಪವಾಸ ಮಾಡಿ. ಪ್ರದೋಷ ಉಪವಾಸವನ್ನು ಆಚರಿಸುವವರು ದಿನವಿಡೀ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಬೇಕು.</p></li><li><p>ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ. ಗಂಗಾಜಲ ಹಾಗೂ ಹಾಲಿನೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಶ್ರೀಗಂಧ ಹಚ್ಚಿ.</p></li><li><p>ಶಿವಲಿಂಗದ ಮೇಲೆ ಬಿಲ್ವ ಪತ್ರೆ, ಅಕ್ಷತೆ, ಸಕ್ಕರೆ, ಜೇನುತುಪ್ಪ, ಹೂವು, ಹಣ್ಣು, ವಸ್ತ್ರ ಹಾಗೂ ಸಿಹಿತಿಂಡಿಗಳನ್ನು ಅರ್ಪಿಸಿ.</p></li><li><p>ಶಿವಲಿಂಗವನ್ನು ಪೂಜಿಸಿದ ನಂತರ, ಅಂಗಾರಕ ಪ್ರದೋಷ ವ್ರತದ ಕಥೆಯನ್ನು ಕೇಳಿ. ಶಿವನ ಮಂತ್ರಗಳನ್ನು ಪಠಿಸಿ. ಇದಾದ ನಂತರ ಶಿವನಿಗೆ ಆರತಿ ಮಾಡಿ ಆಹಾರ ಸೇವಿಸಿ.</p></li></ul><p><strong>ಭೌಮ ಪ್ರದೋಷ ವ್ರತದ ಪ್ರಯೋಜನ:</strong></p><ul><li><p>ಶಿವಭಕ್ತರಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ವ್ರತವನ್ನು ಆಚರಿಸುವುದರಿಂದ ಸಾವಿರ ಯಜ್ಞಗಳಿಗೆ ಸಮನಾದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯು ಪದೇ ಪದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಭೌಮ ಪ್ರದೋಷ ವ್ರತವು ಅವರಿಗೆ ಪ್ರಯೋಜನಕಾರಿಯಾಗಿದೆ.</p></li><li><p>ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಭೌಮ ಪ್ರದೋಷದ ಉಪವಾಸವನ್ನು ಆಚರಿಸುವುದು ಉತ್ತಮ.</p></li><li><p>ಈ ಉಪವಾಸದಲ್ಲಿ ಅಂಗಾರಕನ 21 ಹೆಸರುಗಳನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗುತ್ತದೆ ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>