<p>ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕ್ಷಣವನ್ನು ಕೇವಲ ಋತು ಬದಲಾವಣೆ ಎಂದು ನೋಡಲಾಗುವುದಿಲ್ಲ. ಅದು ಮಾನವ ಜೀವನದ ಕರ್ಮಚಕ್ರವನ್ನು ತಿರುಗಿಸುವ ಮಹಾಶಕ್ತಿ ಎಂದು ಪುರಾತನ ಋಷಿಗಳು ಹೇಳಿದ್ದಾರೆ. </p><p>2026ರ ಮಕರ ಸಂಕ್ರಾಂತಿ ಈ ಬಾರಿ ಅತ್ಯಂತ ಅಪರೂಪದ ಗ್ರಹಯೋಗಗಳೊಂದಿಗೆ ಆಗಮಿಸುತ್ತಿದ್ದು, ವಿಶೇಷವಾಗಿ ಸಾಲಬಾಧೆ, ಹಣಕಾಸಿನ ಒತ್ತಡ ಹಾಗೂ ಬ್ಯಾಂಕ್ ಸಾಲದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಐದು ರಾಶಿಯವರಿಗೆ ಇದು ದೈವೀಕ ಪುನರುತ್ಥಾನದ ಸಮಯವಾಗಲಿದೆ.</p><p><strong>ಪರಾಶರ ಹೋರಾ ಶಾಸ್ತ್ರದಲ್ಲಿ ಮಕರ ಸಂಕ್ರಾಂತಿಯ ಮಹತ್ವವನ್ನು ಹೀಗೆ ವಿವರಿಸಲಾಗಿದೆ</strong></p><p>“ಮಕರೇ ಸೂರ್ಯ ಸಂಚಾರೇ ಧರ್ಮಕರ್ಮಫಲೋದಯಃ । ಋಣರೋಗರಿಪುನಾಶೋ ಧನಲಾಭಶ್ಚ ಜಾಯತೇ ॥”</p><p><strong>ಅರ್ಥ:</strong> ಸೂರ್ಯ ಮಕರದಲ್ಲಿ ಸಂಚರಿಸುವಾಗ ಧರ್ಮ ಹಾಗೂ ಕರ್ಮ ಫಲಿತಾಂಶ ಉಂಟಾಗುತ್ತದೆ. ಋಣ, ರೋಗ ಮತ್ತು ಶತ್ರುಗಳು ನಾಶವಾಗಿ ಧನಲಾಭ ಸಂಭವಿಸುತ್ತದೆ.</p><p>2026ರಲ್ಲಿ ಈ ಸಂಕ್ರಾಂತಿ ಸಂದರ್ಭದಲ್ಲಿ ಸೂರ್ಯ, ಬುಧ ಹಾಗೂ ಶುಕ್ರರ ಅನುಕೂಲ ದೃಷ್ಟಿಯಿಂದ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಗಳು ವಿಶೇಷ ಅನುಗ್ರಹ ಪಡೆಯಲಿವೆ.</p><p><strong>ಮೇಷ ರಾಶಿ–ಸಾಲ ಮುಕ್ತಿಯ ದ್ವಾರ ತೆರೆದ ಸಮಯ</strong></p><p>ಮೇಷ ರಾಶಿಗೆ ಸೂರ್ಯ ಪಂಚಮಾಧಿಪತಿ. ಪಂಚಮ ಭಾವವು ಬುದ್ಧಿ, ಹೂಡಿಕೆ ಮತ್ತು ಹಿಂದಿನ ಕರ್ಮಫಲವನ್ನು ಸೂಚಿಸುತ್ತದೆ. ಸೂರ್ಯ ಮಕರದಲ್ಲಿ ಕರ್ಮಸ್ಥಾನ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಕೆಲಸದ ಅವಕಾಶ, ಹೊಸ ಆದಾಯ ಮೂಲ ಮತ್ತು ಬಾಕಿ ಹಣ ವಾಪಸ್ಸಾಗುವ ಯೋಗ ಉಂಟಾಗುತ್ತದೆ.</p><p><strong>ಫಲಿತ ಜ್ಯೋತಿಷ್ಯದಲ್ಲಿ ಹೀಗೆ ಹೇಳಿದೆ:</strong></p><p>“ಪಂಚಮೇಶೇ ಬಲಯುಕ್ತೇ ಧನಪ್ರಾಪ್ತಿರ್ನ ಸಂಶಯಃ।”</p><p><strong>ಅರ್ಥ:</strong> ಪಂಚಮಾಧಿಪತಿ ಬಲವಂತನಾಗಿದ್ದರೆ ಧನಪ್ರಾಪ್ತಿ ಖಚಿತ. ಈ ಕಾರಣದಿಂದ ಮೇಷ ರಾಶಿಯವರು ಮಾಡಿದ ಸಾಲ ತೀರಿಸಲು ದಾರಿ ಕಾಣಿಸುತ್ತಾರೆ.</p>.ಮೇಷ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ.<p><strong>ವೃಷಭ ರಾಶಿ – ಗೃಹ ಮತ್ತು ಸಾಲದ ಬಂಧನದಿಂದ ಬಿಡುಗಡೆ</strong></p><p>ವೃಷಭ ರಾಶಿಗೆ ಸೂರ್ಯ ಚತುರ್ಥಾಧಿಪತಿ. ಚತುರ್ಥ ಭಾವವು ಗೃಹ, ಆಸ್ತಿ ಮತ್ತು ಸಾಲವನ್ನು ಸೂಚಿಸುತ್ತದೆ. ಮಕರ ಸಂಕ್ರಾಂತಿಯಲ್ಲಿ ಸೂರ್ಯ ಶಕ್ತಿಯುತವಾಗಿ ಕರ್ಮಭಾವದಲ್ಲಿ ಇರುವುದರಿಂದ ವೃಷಭ ರಾಶಿಯವರು ಮನೆ ಸಾಲ, ವಾಹನ ಸಾಲ ಹಾಗೂ ಭೂಮಿ ಸಂಬಂಧಿತ ಬಾಧೆಗಳಿಂದ ನಿಧಾನವಾಗಿ ಮುಕ್ತರಾಗುತ್ತಾರೆ.</p><p><strong>ಬೃಹತ್ ಜಾತಕ ಶ್ಲೋಕ:</strong></p><p>“ಚತುರ್ಥೇಶೋ ಯದಿ ಸೂರ್ಯೋ ಭವತಿ ಋಣಭಂಜನಃ।”</p><p><strong>ಅರ್ಥ:</strong> ಚತುರ್ಥಾಧಿಪತಿ ಸೂರ್ಯನಾಗಿದ್ದರೆ ಸಾಲಬಾಧೆ ನಾಶವಾಗುತ್ತದೆ.</p>.<p><strong>ಕರ್ಕಾಟಕ ರಾಶಿ – ಹಣದ ಹರಿವು ಆರಂಭ</strong></p><p>ಕರ್ಕಾಟಕ ರಾಶಿಗೆ ಸೂರ್ಯ ದ್ವಿತೀಯಾಧಿಪತಿ (ಧನಸ್ಥಾನ). ಈ ಸಂಕ್ರಾಂತಿಯಲ್ಲಿ ಸೂರ್ಯ ಧನಾಧಿಪತಿಯಾಗಿ ಕಾರ್ಯಸ್ಥಾನದಲ್ಲಿ ಬಲ ಪಡೆಯುವುದರಿಂದ ಹೊಸ ಆದಾಯ, ಬಾಕಿ ಹಣ ವಾಪಸ್ಸು ಹಾಗೂ ಸಾಲ ಕಡಿಮೆಯಾಗುವ ಯೋಗ ಉಂಟಾಗುತ್ತದೆ.</p><p><strong>ಜಾತಕ ಪಾರಿಜಾತ ಹೇಳುತ್ತದೆ:</strong></p><p>“ದ್ವಿತೀಯೇಶೋ ರವಿರ್ಯತ್ರ ತತ್ರ ಧನಸಂಪದಃ।”</p><p><strong>ಅರ್ಥ:</strong> ಸೂರ್ಯ ದ್ವಿತೀಯಾಧಿಪತಿಯಾದಲ್ಲಿ ಅಲ್ಲಿ ಧನಸಂಪತ್ತು ಬರುತ್ತದೆ.</p>.ವರ್ಷ ಭವಿಷ್ಯ 2026: ತುಲಾ ರಾಶಿಯವರಿಗೆ ಧನಲಾಭ ಸೇರಿ ಇನ್ನಷ್ಟು ಯಶಸ್ಸು.<p><strong>ತುಲಾ ರಾಶಿ – ಲಾಭದಿಂದ ಸಾಲ ತೀರಿಸುವ ಸಮಯ</strong></p><p>ತುಲಾ ರಾಶಿಗೆ ಸೂರ್ಯ ಏಕಾಧಿಪತಿ. ಏಕಾದಶ ಭಾವವು ಲಾಭ ಮತ್ತು ಆದಾಯದ ಸೂಚಕ. ಮಕರ ಸಂಕ್ರಾಂತಿಯ ನಂತರ ತುಲಾ ರಾಶಿಯವರು ವ್ಯಾಪಾರ, ಹೂಡಿಕೆ ಅಥವಾ ಬಾಕಿ ಹಣಗಳಿಂದ ದೊಡ್ಡ ಮೊತ್ತ ಪಡೆಯುವ ಸಾಧ್ಯತೆ.</p><p><strong>ಸರಾವಳಿ ಗ್ರಂಥ:</strong></p><p>“ಲಾಭೇಶೋ ಭಾಸ್ಕರೋ ಯಸ್ಯ ಸರ್ವಸಾಲ ವಿನಾಶನಃ।”</p><p><strong>ಅರ್ಥ:</strong> ಲಾಭಾಧಿಪತಿ ಸೂರ್ಯನಾಗಿದ್ದರೆ ಎಲ್ಲ ಸಾಲಗಳು ನಾಶವಾಗುತ್ತವೆ.</p>.<p><strong>ಧನು ರಾಶಿ – ಭಾಗ್ಯದಿಂದ ಋಣ ವಿಮೋಚನೆ</strong></p><p>ಧನು ರಾಶಿಗೆ ಸೂರ್ಯ ನವಮಾಧಿಪತಿ. ಭಾಗ್ಯಸ್ಥಾನಾಧಿಪತಿ ಸೂರ್ಯ ಕರ್ಮಸ್ಥಾನ ಪ್ರವೇಶ ಮಾಡಿದಾಗ ಋಣವಿಮೋಚನೆ, ಉದ್ಯೋಗ ಏರಿಕೆ ಮತ್ತು ಹಣಕಾಸು ಸುಧಾರಣೆ ಆಗುತ್ತದೆ.</p><p><strong>ಫಲದೀಪಿಕಾ ಹೇಳುತ್ತದೆ:</strong></p><p>“ನವಮೇಶೇ ರವೌ ಯುಕ್ತೇ ಋಣಬಂಧೋ ವಿಮುಚ್ಯತೇ।”</p><p><strong>ಅರ್ಥ:</strong> ನವಮಾಧಿಪತಿ ಸೂರ್ಯನಾಗಿದ್ದರೆ ಸಾಲಬಂಧನದಿಂದ ಮುಕ್ತಿ ದೊರೆಯುತ್ತದೆ.</p>.<p><strong>ಸಂಕ್ರಾಂತಿ ಮಹಾ ಪರಿಹಾರ – 6 ದಿನದ ದೈವಿಕ ಕ್ರಮ</strong></p><p>2026ರ ಮಕರ ಸಂಕ್ರಾಂತಿ ಇಂದ ಆರಂಭಿಸಿ 6 ದಿನಗಳ ಕಾಲ ಈ ಪರಿಹಾರವನ್ನು ಮಾಡಿದರೆ ಗ್ರಹದೋಷ ಶಮನವಾಗಿ ಸಾಲಬಾಧೆ ಕರಗುತ್ತದೆ.</p><ul><li><p>ಹತ್ತಿರದ ದೇವಾಲಯದಲ್ಲಿ ನವಗ್ರಹಗಳ ಮುಂದೆ 6 ತುಪ್ಪದ ದೀಪಗಳನ್ನು ಮಣ್ಣಿನ ಹಣತೆಯಲ್ಲಿ ಹಚ್ಚಬೇಕು</p></li><li><p>ಸೂರ್ಯೋದಯದಲ್ಲಿ “ಓಂ ಸೂರ್ಯ ನಾರಾಯಣಾಯ ನಮಃ” ಮಂತ್ರವನ್ನು 333 ಬಾರಿ ಜಪ</p></li><li><p>ಕೆಂಪು ವಸ್ತ್ರದಲ್ಲಿ ಗೋಧಿ ದಾನ</p></li><li><p>ಎಕ್ಕೆ ಗಿಡಕ್ಕೆ ಪೂಜೆ</p></li></ul><p><strong>ಸ್ಕಂದ ಪುರಾಣ:</strong></p><p>“ದೀಪದಾನಂ ಋಣನಾಶಾಯ ಸೂರ್ಯಾರಾಧನಮುತ್ತಮಂ।”</p><p>ಇನ್ನೂ ವಿಶೇಷ ಫಲಕ್ಕಾಗಿ ಅಮಾವಾಸ್ಯೆ ದಿನ ಸಹಸ್ರ ರವಿ ಶಾಂತಿ ಹೋಮದಲ್ಲಿ ಅಭಿಮಂತ್ರಿಸಿದ ‘ರಾಜವರ್ಧನ ಮಣಿಯ ಉಂಗುರ’ ಧಾರಣೆ ಅತ್ಯುತ್ತಮವಾಗಿದೆ.</p><p>2026ರ ಮಕರ ಸಂಕ್ರಾಂತಿ ಈ ಐದು ರಾಶಿಯವರಿಗೆ ಸಾಲ ಮುಕ್ತಿಯ ದೈವಿಕ ದ್ವಾರ. ಶಾಸ್ತ್ರ, ಶ್ಲೋಕ ಮತ್ತು ಗ್ರಹಯೋಗಗಳ ಪ್ರಕಾರ ಇದು ಅಪರೂಪದ ಅವಕಾಶ. ನಿಷ್ಠೆಯಿಂದ ಪರಿಹಾರ ಮಾಡಿದರೆ ಹಣಕಾಸಿನ ಬಂಧನಗಳು ನಿಧಾನವಾಗಿ ಮುರಿಯುತ್ತವೆ ಮತ್ತು ಜೀವನದಲ್ಲಿ ಹೊಸ ಪ್ರಭಾತ ಉದಯಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕ್ಷಣವನ್ನು ಕೇವಲ ಋತು ಬದಲಾವಣೆ ಎಂದು ನೋಡಲಾಗುವುದಿಲ್ಲ. ಅದು ಮಾನವ ಜೀವನದ ಕರ್ಮಚಕ್ರವನ್ನು ತಿರುಗಿಸುವ ಮಹಾಶಕ್ತಿ ಎಂದು ಪುರಾತನ ಋಷಿಗಳು ಹೇಳಿದ್ದಾರೆ. </p><p>2026ರ ಮಕರ ಸಂಕ್ರಾಂತಿ ಈ ಬಾರಿ ಅತ್ಯಂತ ಅಪರೂಪದ ಗ್ರಹಯೋಗಗಳೊಂದಿಗೆ ಆಗಮಿಸುತ್ತಿದ್ದು, ವಿಶೇಷವಾಗಿ ಸಾಲಬಾಧೆ, ಹಣಕಾಸಿನ ಒತ್ತಡ ಹಾಗೂ ಬ್ಯಾಂಕ್ ಸಾಲದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಐದು ರಾಶಿಯವರಿಗೆ ಇದು ದೈವೀಕ ಪುನರುತ್ಥಾನದ ಸಮಯವಾಗಲಿದೆ.</p><p><strong>ಪರಾಶರ ಹೋರಾ ಶಾಸ್ತ್ರದಲ್ಲಿ ಮಕರ ಸಂಕ್ರಾಂತಿಯ ಮಹತ್ವವನ್ನು ಹೀಗೆ ವಿವರಿಸಲಾಗಿದೆ</strong></p><p>“ಮಕರೇ ಸೂರ್ಯ ಸಂಚಾರೇ ಧರ್ಮಕರ್ಮಫಲೋದಯಃ । ಋಣರೋಗರಿಪುನಾಶೋ ಧನಲಾಭಶ್ಚ ಜಾಯತೇ ॥”</p><p><strong>ಅರ್ಥ:</strong> ಸೂರ್ಯ ಮಕರದಲ್ಲಿ ಸಂಚರಿಸುವಾಗ ಧರ್ಮ ಹಾಗೂ ಕರ್ಮ ಫಲಿತಾಂಶ ಉಂಟಾಗುತ್ತದೆ. ಋಣ, ರೋಗ ಮತ್ತು ಶತ್ರುಗಳು ನಾಶವಾಗಿ ಧನಲಾಭ ಸಂಭವಿಸುತ್ತದೆ.</p><p>2026ರಲ್ಲಿ ಈ ಸಂಕ್ರಾಂತಿ ಸಂದರ್ಭದಲ್ಲಿ ಸೂರ್ಯ, ಬುಧ ಹಾಗೂ ಶುಕ್ರರ ಅನುಕೂಲ ದೃಷ್ಟಿಯಿಂದ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಗಳು ವಿಶೇಷ ಅನುಗ್ರಹ ಪಡೆಯಲಿವೆ.</p><p><strong>ಮೇಷ ರಾಶಿ–ಸಾಲ ಮುಕ್ತಿಯ ದ್ವಾರ ತೆರೆದ ಸಮಯ</strong></p><p>ಮೇಷ ರಾಶಿಗೆ ಸೂರ್ಯ ಪಂಚಮಾಧಿಪತಿ. ಪಂಚಮ ಭಾವವು ಬುದ್ಧಿ, ಹೂಡಿಕೆ ಮತ್ತು ಹಿಂದಿನ ಕರ್ಮಫಲವನ್ನು ಸೂಚಿಸುತ್ತದೆ. ಸೂರ್ಯ ಮಕರದಲ್ಲಿ ಕರ್ಮಸ್ಥಾನ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಕೆಲಸದ ಅವಕಾಶ, ಹೊಸ ಆದಾಯ ಮೂಲ ಮತ್ತು ಬಾಕಿ ಹಣ ವಾಪಸ್ಸಾಗುವ ಯೋಗ ಉಂಟಾಗುತ್ತದೆ.</p><p><strong>ಫಲಿತ ಜ್ಯೋತಿಷ್ಯದಲ್ಲಿ ಹೀಗೆ ಹೇಳಿದೆ:</strong></p><p>“ಪಂಚಮೇಶೇ ಬಲಯುಕ್ತೇ ಧನಪ್ರಾಪ್ತಿರ್ನ ಸಂಶಯಃ।”</p><p><strong>ಅರ್ಥ:</strong> ಪಂಚಮಾಧಿಪತಿ ಬಲವಂತನಾಗಿದ್ದರೆ ಧನಪ್ರಾಪ್ತಿ ಖಚಿತ. ಈ ಕಾರಣದಿಂದ ಮೇಷ ರಾಶಿಯವರು ಮಾಡಿದ ಸಾಲ ತೀರಿಸಲು ದಾರಿ ಕಾಣಿಸುತ್ತಾರೆ.</p>.ಮೇಷ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ.<p><strong>ವೃಷಭ ರಾಶಿ – ಗೃಹ ಮತ್ತು ಸಾಲದ ಬಂಧನದಿಂದ ಬಿಡುಗಡೆ</strong></p><p>ವೃಷಭ ರಾಶಿಗೆ ಸೂರ್ಯ ಚತುರ್ಥಾಧಿಪತಿ. ಚತುರ್ಥ ಭಾವವು ಗೃಹ, ಆಸ್ತಿ ಮತ್ತು ಸಾಲವನ್ನು ಸೂಚಿಸುತ್ತದೆ. ಮಕರ ಸಂಕ್ರಾಂತಿಯಲ್ಲಿ ಸೂರ್ಯ ಶಕ್ತಿಯುತವಾಗಿ ಕರ್ಮಭಾವದಲ್ಲಿ ಇರುವುದರಿಂದ ವೃಷಭ ರಾಶಿಯವರು ಮನೆ ಸಾಲ, ವಾಹನ ಸಾಲ ಹಾಗೂ ಭೂಮಿ ಸಂಬಂಧಿತ ಬಾಧೆಗಳಿಂದ ನಿಧಾನವಾಗಿ ಮುಕ್ತರಾಗುತ್ತಾರೆ.</p><p><strong>ಬೃಹತ್ ಜಾತಕ ಶ್ಲೋಕ:</strong></p><p>“ಚತುರ್ಥೇಶೋ ಯದಿ ಸೂರ್ಯೋ ಭವತಿ ಋಣಭಂಜನಃ।”</p><p><strong>ಅರ್ಥ:</strong> ಚತುರ್ಥಾಧಿಪತಿ ಸೂರ್ಯನಾಗಿದ್ದರೆ ಸಾಲಬಾಧೆ ನಾಶವಾಗುತ್ತದೆ.</p>.<p><strong>ಕರ್ಕಾಟಕ ರಾಶಿ – ಹಣದ ಹರಿವು ಆರಂಭ</strong></p><p>ಕರ್ಕಾಟಕ ರಾಶಿಗೆ ಸೂರ್ಯ ದ್ವಿತೀಯಾಧಿಪತಿ (ಧನಸ್ಥಾನ). ಈ ಸಂಕ್ರಾಂತಿಯಲ್ಲಿ ಸೂರ್ಯ ಧನಾಧಿಪತಿಯಾಗಿ ಕಾರ್ಯಸ್ಥಾನದಲ್ಲಿ ಬಲ ಪಡೆಯುವುದರಿಂದ ಹೊಸ ಆದಾಯ, ಬಾಕಿ ಹಣ ವಾಪಸ್ಸು ಹಾಗೂ ಸಾಲ ಕಡಿಮೆಯಾಗುವ ಯೋಗ ಉಂಟಾಗುತ್ತದೆ.</p><p><strong>ಜಾತಕ ಪಾರಿಜಾತ ಹೇಳುತ್ತದೆ:</strong></p><p>“ದ್ವಿತೀಯೇಶೋ ರವಿರ್ಯತ್ರ ತತ್ರ ಧನಸಂಪದಃ।”</p><p><strong>ಅರ್ಥ:</strong> ಸೂರ್ಯ ದ್ವಿತೀಯಾಧಿಪತಿಯಾದಲ್ಲಿ ಅಲ್ಲಿ ಧನಸಂಪತ್ತು ಬರುತ್ತದೆ.</p>.ವರ್ಷ ಭವಿಷ್ಯ 2026: ತುಲಾ ರಾಶಿಯವರಿಗೆ ಧನಲಾಭ ಸೇರಿ ಇನ್ನಷ್ಟು ಯಶಸ್ಸು.<p><strong>ತುಲಾ ರಾಶಿ – ಲಾಭದಿಂದ ಸಾಲ ತೀರಿಸುವ ಸಮಯ</strong></p><p>ತುಲಾ ರಾಶಿಗೆ ಸೂರ್ಯ ಏಕಾಧಿಪತಿ. ಏಕಾದಶ ಭಾವವು ಲಾಭ ಮತ್ತು ಆದಾಯದ ಸೂಚಕ. ಮಕರ ಸಂಕ್ರಾಂತಿಯ ನಂತರ ತುಲಾ ರಾಶಿಯವರು ವ್ಯಾಪಾರ, ಹೂಡಿಕೆ ಅಥವಾ ಬಾಕಿ ಹಣಗಳಿಂದ ದೊಡ್ಡ ಮೊತ್ತ ಪಡೆಯುವ ಸಾಧ್ಯತೆ.</p><p><strong>ಸರಾವಳಿ ಗ್ರಂಥ:</strong></p><p>“ಲಾಭೇಶೋ ಭಾಸ್ಕರೋ ಯಸ್ಯ ಸರ್ವಸಾಲ ವಿನಾಶನಃ।”</p><p><strong>ಅರ್ಥ:</strong> ಲಾಭಾಧಿಪತಿ ಸೂರ್ಯನಾಗಿದ್ದರೆ ಎಲ್ಲ ಸಾಲಗಳು ನಾಶವಾಗುತ್ತವೆ.</p>.<p><strong>ಧನು ರಾಶಿ – ಭಾಗ್ಯದಿಂದ ಋಣ ವಿಮೋಚನೆ</strong></p><p>ಧನು ರಾಶಿಗೆ ಸೂರ್ಯ ನವಮಾಧಿಪತಿ. ಭಾಗ್ಯಸ್ಥಾನಾಧಿಪತಿ ಸೂರ್ಯ ಕರ್ಮಸ್ಥಾನ ಪ್ರವೇಶ ಮಾಡಿದಾಗ ಋಣವಿಮೋಚನೆ, ಉದ್ಯೋಗ ಏರಿಕೆ ಮತ್ತು ಹಣಕಾಸು ಸುಧಾರಣೆ ಆಗುತ್ತದೆ.</p><p><strong>ಫಲದೀಪಿಕಾ ಹೇಳುತ್ತದೆ:</strong></p><p>“ನವಮೇಶೇ ರವೌ ಯುಕ್ತೇ ಋಣಬಂಧೋ ವಿಮುಚ್ಯತೇ।”</p><p><strong>ಅರ್ಥ:</strong> ನವಮಾಧಿಪತಿ ಸೂರ್ಯನಾಗಿದ್ದರೆ ಸಾಲಬಂಧನದಿಂದ ಮುಕ್ತಿ ದೊರೆಯುತ್ತದೆ.</p>.<p><strong>ಸಂಕ್ರಾಂತಿ ಮಹಾ ಪರಿಹಾರ – 6 ದಿನದ ದೈವಿಕ ಕ್ರಮ</strong></p><p>2026ರ ಮಕರ ಸಂಕ್ರಾಂತಿ ಇಂದ ಆರಂಭಿಸಿ 6 ದಿನಗಳ ಕಾಲ ಈ ಪರಿಹಾರವನ್ನು ಮಾಡಿದರೆ ಗ್ರಹದೋಷ ಶಮನವಾಗಿ ಸಾಲಬಾಧೆ ಕರಗುತ್ತದೆ.</p><ul><li><p>ಹತ್ತಿರದ ದೇವಾಲಯದಲ್ಲಿ ನವಗ್ರಹಗಳ ಮುಂದೆ 6 ತುಪ್ಪದ ದೀಪಗಳನ್ನು ಮಣ್ಣಿನ ಹಣತೆಯಲ್ಲಿ ಹಚ್ಚಬೇಕು</p></li><li><p>ಸೂರ್ಯೋದಯದಲ್ಲಿ “ಓಂ ಸೂರ್ಯ ನಾರಾಯಣಾಯ ನಮಃ” ಮಂತ್ರವನ್ನು 333 ಬಾರಿ ಜಪ</p></li><li><p>ಕೆಂಪು ವಸ್ತ್ರದಲ್ಲಿ ಗೋಧಿ ದಾನ</p></li><li><p>ಎಕ್ಕೆ ಗಿಡಕ್ಕೆ ಪೂಜೆ</p></li></ul><p><strong>ಸ್ಕಂದ ಪುರಾಣ:</strong></p><p>“ದೀಪದಾನಂ ಋಣನಾಶಾಯ ಸೂರ್ಯಾರಾಧನಮುತ್ತಮಂ।”</p><p>ಇನ್ನೂ ವಿಶೇಷ ಫಲಕ್ಕಾಗಿ ಅಮಾವಾಸ್ಯೆ ದಿನ ಸಹಸ್ರ ರವಿ ಶಾಂತಿ ಹೋಮದಲ್ಲಿ ಅಭಿಮಂತ್ರಿಸಿದ ‘ರಾಜವರ್ಧನ ಮಣಿಯ ಉಂಗುರ’ ಧಾರಣೆ ಅತ್ಯುತ್ತಮವಾಗಿದೆ.</p><p>2026ರ ಮಕರ ಸಂಕ್ರಾಂತಿ ಈ ಐದು ರಾಶಿಯವರಿಗೆ ಸಾಲ ಮುಕ್ತಿಯ ದೈವಿಕ ದ್ವಾರ. ಶಾಸ್ತ್ರ, ಶ್ಲೋಕ ಮತ್ತು ಗ್ರಹಯೋಗಗಳ ಪ್ರಕಾರ ಇದು ಅಪರೂಪದ ಅವಕಾಶ. ನಿಷ್ಠೆಯಿಂದ ಪರಿಹಾರ ಮಾಡಿದರೆ ಹಣಕಾಸಿನ ಬಂಧನಗಳು ನಿಧಾನವಾಗಿ ಮುರಿಯುತ್ತವೆ ಮತ್ತು ಜೀವನದಲ್ಲಿ ಹೊಸ ಪ್ರಭಾತ ಉದಯಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>