ಕೆ.ನರಸಿಂಹಮೂರ್ತಿ
ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನದ ವಿದ್ಯಾರ್ಥಿ. ತಮ್ಮ ಹುಟ್ಟೂರಾದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 2001ರಲ್ಲಿ ‘ಪ್ರಜಾವಾಣಿ’ಗೆ ಸೇರ್ಪಡೆಗೊಂಡ ಬಳಿಕ, ಮೈಸೂರು, ಕೋಲಾರ ಮತ್ತು ಬಳ್ಳಾರಿಯಲ್ಲಿ ಜಿಲ್ಲಾ ವರದಿಗಾರರಾಗಿದ್ದರು. ಸದ್ಯ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ನ್ಯೂಸ್ ರೂಂ ನಿರ್ವಹಣೆ ಮತ್ತು ವರದಿಗಾರಿಕೆ ನೇತೃತ್ವ ವಹಿಸಿದ್ದಾರೆ. ಡಿಸಾಸ್ಟರ್ ರಿಪೋರ್ಟಿಂಗ್ ಮತ್ತು ಲಾಂಗ್ಫಾರ್ಮ್ ಜರ್ನಲಿಸಂನಲ್ಲಿ ತರಬೇತಿ ಪಡೆದಿರುವ ಅವರ ಲಾಂಗ್ಫಾರ್ಮ್ ಹಾಗೂ ಅನುವಾದಿತ ಲೇಖನಗಳು ಪ್ರಿಂಟ್ ಮತ್ತು ವೆಬ್ ಆವೃತ್ತಿಗಳಲ್ಲಿ ಪ್ರಕಟವಾಗಿವೆ.