<p>ಸುಂದರ ಚರ್ಮ ಮತ್ತು ಸದೃಢ ಕೂದಲು ಕೇವಲ ಕ್ರೀಮ್ಗಳಿಂದ ಅಲ್ಲ ದೇಹದ ಒಳಗಿನ ಪೋಷಣೆಯಿಂದ ಬರುತ್ತವೆ. ಆಯುರ್ವೇದದಲ್ಲಿ ‘ಒಳಗಿನ ಸಮತೋಲನವೇ ಹೊರಗಿನ ಸೌಂದರ್ಯ’ ಎಂಬ ಮಾತಿದೆ. ಆದ್ದರಿಂದ ಪ್ರತಿದಿನದ ಆಹಾರವೇ ನಮಗೆ ಮುಖ್ಯ ಚಿಕಿತ್ಸೆ.</p>.ಮಂಡ್ಯ: ಕೂದಲು ವ್ಯಾಪಾರಿಗಳಿಂದ ದೇಗುಲಕ್ಕೆ ಕನ್ನ.ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ.<p><strong>ಮುಖ್ಯ ಆಹಾರ ನಿಯಮಗಳು</strong></p><p><strong>ರಕ್ತ ಶುದ್ಧೀಕರಣಕ್ಕೆ:</strong> ಬೀಟ್ರೂಟ್, ಕ್ಯಾರೆಟ್, ದಾಳಿಂಬೆ, ಪಾಲಕ್ ಇವುಗಳು ಮುಖದ ಕಾಂತಿ ಹೆಚ್ಚಿಸಿ ಮೊಡವೆ ಕಡಿಮೆ ಮಾಡುತ್ತವೆ.</p><p><strong>ಕೂದಲಿನ ಬಲಕ್ಕೆ:</strong> ಕಪ್ಪು ಎಳ್ಳು, ಕಡಲೆಕಾಯಿ, ಬಾದಾಮಿ, ಅಕ್ರೋಟ್, ಹಾಲು, ತುಪ್ಪ, ಮೊಟ್ಟೆ ತಿನ್ನುವವರಿಗೆ ಸದೃಢ ಕೂದಲು ಬರುತ್ತವೆ.</p><p><strong>ಇವುಗಳನ್ನು ತಪ್ಪಿಸಿ:</strong> ಜಂಕ್ ಫುಡ್, ಹೆಚ್ಚು ಖಾರ, ಎಣ್ಣೆ, ಅತಿ ಉಪ್ಪು, ತಡರಾತ್ರಿ ಊಟ ಇವುಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. </p><p><strong>ವಾರದ ಪೌಷ್ಟಿಕ ಯೋಜನೆ ಹೀಗಿರಲಿ</strong></p><p><strong>ಸೋಮವಾರ:</strong> ಹಸಿರು ಸೊಪ್ಪು, 15 ಬಾದಾಮಿ ಮತ್ತು 2 ಮೊಟ್ಟೆ ಸೇವಿಸಿ.</p><p><strong>ಮಂಗಳವಾರ:</strong> ನೆಲ್ಲಿಕಾಯಿ ಜ್ಯೂಸ್, 100 ಗ್ರಾಮ್ ಪನೀರ್, ಚಪಾತಿ, ತರಕಾರಿ ಪಲ್ಯ ಇವುಗಳು ಯೌವನ, ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುತ್ತವೆ.</p><p><strong>ಬುಧವಾರ:</strong> ಹೆಸರು ಕಾಳು ಸೂಪ್, ಪಲಾವ್, 1 ಗ್ಲಾಸ್ ಮಜ್ಜಿಗೆ, ಬಾದಾಮಿ, 2 ಅಕ್ರೋಟ್ (ಒಮೆಗಾ-3 → ಹೊಳಪು ಚರ್ಮ) ತಿನ್ನಿ.</p><p><strong>ಗುರುವಾರ:</strong> ಅಕ್ಕಿ ಪಾಯಸ, 10 ಎಂಎಲ್ ತುಪ್ಪ, ತರಕಾರಿ ಪಲ್ಯ, ಚಪಾತಿ ಸೇವಿಸಿ. </p><p><strong>ಶುಕ್ರವಾರ:</strong> 2 ಮೊಟ್ಟೆ, ಅನ್ನ, ತರಕಾರಿ ಸಾಂಬಾರ್, ಕ್ಯಾರೆಟ್-ಬೀಟ್ರೂಟ್ ರಸ ಇದು ರಕ್ತ ಶುದ್ಧೀಕರಣಕ್ಕೆ ಸಹಾಯಕಾರಿಯಾಗುತ್ತದೆ.</p><p><strong>ಶನಿವಾರ:</strong> ಅಕ್ಕಿ ರೊಟ್ಟಿ, ಬೆಂಡೆಕಾಯಿ ಪಲ್ಯ, 2 ಮೊಟ್ಟೆ ಜೊತೆಗೆ ಪ್ರತಿಯೊಂದು ಊಟದಲ್ಲಿ 1 ಚಮಚ ತುಪ್ಪ ಸೇವಿಸಿ. </p><p><strong>ಭಾನುವಾರ:</strong> ಹೆಸರುಬೇಳೆ ಕಿಚಡಿ/ತರಕಾರಿ ಸೂಪ್, ರಾತ್ರಿ ಮಲಗುವ ಮುನ್ನ ತ್ರಿಫಲ ಕಷಾಯ ಸೇವಿಸಿ. ಈ ತ್ರಿಫಲ ಹರಿತಕಿ (ಅಳಲೆಕಾಯಿ), ವಿಭೀತಕಿ (ತಾರೆಕಾಯಿ), ಮತ್ತು ಅಮಲಕಿ (ನೆಲ್ಲಿಕಾಯಿ) ಎಂಬ ಮೂರು ಒಣಗಿದ ಹಣ್ಣುಗಳ ಮಿಶ್ರಣವಾಗಿದೆ.</p>.<p><strong>ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯ ಹೆಚ್ಚಿಸಲು ಇಲ್ಲಿವೆ ಕೆಲವು ಸೂತ್ರಗಳು</strong></p><p><strong>ಬಿಸಿ ನೀರು:</strong> ಸೂರ್ಯೋದಯಕ್ಕೂ ಮುನ್ನ ಎದ್ದು 1 ಗ್ಲಾಸ್ ಬಿಸಿ ನೀರು ಕುಡಿದರೆ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ.</p><p><strong>ವ್ಯಾಯಾಮ: </strong>ಪ್ರತಿ ದಿನ ವ್ಯಾಯಾಮ ಮಾಡಿದರೆ, ದೇಹ ಸದೃಢವಾಗುತ್ತದೆ. ಇದರಿಂದ ಚರ್ಮದ ಕಾಂತಿಯೂ ಹೆಚ್ಚುತ್ತದೆ. </p><p><strong>ನಿದ್ರೆ:</strong> ರಾತ್ರಿ 10 ಗಂಟೆಗೆ ಮಲಗಿ. 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿ ಇದರಿಂದ ಚರ್ಮ, ವೇಗವಾಗಿ ಕೂದಲು ಬೆಳೆಯುತ್ತದೆ. </p><p><strong>ತುಪ್ಪ:</strong> ಹಾಲಿನ ಜೊತೆ ತುಪ್ಪ ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಬಹುತೇಕ ವಿಟಮಿನ್ಸ್ ಮತ್ತು ಖನಿಜಗಳನ್ನು ಪೂರೈಸಬಹುದು.</p><p><strong>ಅಭ್ಯಂಗ:</strong> ಪ್ರತಿದಿನ ತಲೆಗೆ ಮತ್ತು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಕ್ರಮೇಣವಾಗಿ ಹೆಚ್ಚುತ್ತಾ ಬರುತ್ತದೆ. </p><p><strong>ಮನಸ್ಸು:</strong> ದೇಹದ ಜೊತೆ ಮನಸ್ಸು ಉಲ್ಲಾಸಭರಿತವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.</p><p>ಈ ಮೇಲಿನ ಸರಳ ಅಭ್ಯಾಸಗಳನ್ನು ಅನುಸರಿಸಿದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯಕರ ಚರ್ಮ ಮತ್ತು ದಟ್ಟ ಕೂದಲು ಪಡೆಯಬಹುದು.</p>.<p><em><strong>(ಲೇಖಕರು: ಡಾ.ಶಮೀಮ್ ಬಾನು ನಬೀಸಾಬ್, ಸಹಾಯಕ ಪ್ರಾಧ್ಯಾಪಕರು ಪಂಚಕರ್ಮ ವಿಭಾಗ, ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಂದರ ಚರ್ಮ ಮತ್ತು ಸದೃಢ ಕೂದಲು ಕೇವಲ ಕ್ರೀಮ್ಗಳಿಂದ ಅಲ್ಲ ದೇಹದ ಒಳಗಿನ ಪೋಷಣೆಯಿಂದ ಬರುತ್ತವೆ. ಆಯುರ್ವೇದದಲ್ಲಿ ‘ಒಳಗಿನ ಸಮತೋಲನವೇ ಹೊರಗಿನ ಸೌಂದರ್ಯ’ ಎಂಬ ಮಾತಿದೆ. ಆದ್ದರಿಂದ ಪ್ರತಿದಿನದ ಆಹಾರವೇ ನಮಗೆ ಮುಖ್ಯ ಚಿಕಿತ್ಸೆ.</p>.ಮಂಡ್ಯ: ಕೂದಲು ವ್ಯಾಪಾರಿಗಳಿಂದ ದೇಗುಲಕ್ಕೆ ಕನ್ನ.ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ.<p><strong>ಮುಖ್ಯ ಆಹಾರ ನಿಯಮಗಳು</strong></p><p><strong>ರಕ್ತ ಶುದ್ಧೀಕರಣಕ್ಕೆ:</strong> ಬೀಟ್ರೂಟ್, ಕ್ಯಾರೆಟ್, ದಾಳಿಂಬೆ, ಪಾಲಕ್ ಇವುಗಳು ಮುಖದ ಕಾಂತಿ ಹೆಚ್ಚಿಸಿ ಮೊಡವೆ ಕಡಿಮೆ ಮಾಡುತ್ತವೆ.</p><p><strong>ಕೂದಲಿನ ಬಲಕ್ಕೆ:</strong> ಕಪ್ಪು ಎಳ್ಳು, ಕಡಲೆಕಾಯಿ, ಬಾದಾಮಿ, ಅಕ್ರೋಟ್, ಹಾಲು, ತುಪ್ಪ, ಮೊಟ್ಟೆ ತಿನ್ನುವವರಿಗೆ ಸದೃಢ ಕೂದಲು ಬರುತ್ತವೆ.</p><p><strong>ಇವುಗಳನ್ನು ತಪ್ಪಿಸಿ:</strong> ಜಂಕ್ ಫುಡ್, ಹೆಚ್ಚು ಖಾರ, ಎಣ್ಣೆ, ಅತಿ ಉಪ್ಪು, ತಡರಾತ್ರಿ ಊಟ ಇವುಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. </p><p><strong>ವಾರದ ಪೌಷ್ಟಿಕ ಯೋಜನೆ ಹೀಗಿರಲಿ</strong></p><p><strong>ಸೋಮವಾರ:</strong> ಹಸಿರು ಸೊಪ್ಪು, 15 ಬಾದಾಮಿ ಮತ್ತು 2 ಮೊಟ್ಟೆ ಸೇವಿಸಿ.</p><p><strong>ಮಂಗಳವಾರ:</strong> ನೆಲ್ಲಿಕಾಯಿ ಜ್ಯೂಸ್, 100 ಗ್ರಾಮ್ ಪನೀರ್, ಚಪಾತಿ, ತರಕಾರಿ ಪಲ್ಯ ಇವುಗಳು ಯೌವನ, ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುತ್ತವೆ.</p><p><strong>ಬುಧವಾರ:</strong> ಹೆಸರು ಕಾಳು ಸೂಪ್, ಪಲಾವ್, 1 ಗ್ಲಾಸ್ ಮಜ್ಜಿಗೆ, ಬಾದಾಮಿ, 2 ಅಕ್ರೋಟ್ (ಒಮೆಗಾ-3 → ಹೊಳಪು ಚರ್ಮ) ತಿನ್ನಿ.</p><p><strong>ಗುರುವಾರ:</strong> ಅಕ್ಕಿ ಪಾಯಸ, 10 ಎಂಎಲ್ ತುಪ್ಪ, ತರಕಾರಿ ಪಲ್ಯ, ಚಪಾತಿ ಸೇವಿಸಿ. </p><p><strong>ಶುಕ್ರವಾರ:</strong> 2 ಮೊಟ್ಟೆ, ಅನ್ನ, ತರಕಾರಿ ಸಾಂಬಾರ್, ಕ್ಯಾರೆಟ್-ಬೀಟ್ರೂಟ್ ರಸ ಇದು ರಕ್ತ ಶುದ್ಧೀಕರಣಕ್ಕೆ ಸಹಾಯಕಾರಿಯಾಗುತ್ತದೆ.</p><p><strong>ಶನಿವಾರ:</strong> ಅಕ್ಕಿ ರೊಟ್ಟಿ, ಬೆಂಡೆಕಾಯಿ ಪಲ್ಯ, 2 ಮೊಟ್ಟೆ ಜೊತೆಗೆ ಪ್ರತಿಯೊಂದು ಊಟದಲ್ಲಿ 1 ಚಮಚ ತುಪ್ಪ ಸೇವಿಸಿ. </p><p><strong>ಭಾನುವಾರ:</strong> ಹೆಸರುಬೇಳೆ ಕಿಚಡಿ/ತರಕಾರಿ ಸೂಪ್, ರಾತ್ರಿ ಮಲಗುವ ಮುನ್ನ ತ್ರಿಫಲ ಕಷಾಯ ಸೇವಿಸಿ. ಈ ತ್ರಿಫಲ ಹರಿತಕಿ (ಅಳಲೆಕಾಯಿ), ವಿಭೀತಕಿ (ತಾರೆಕಾಯಿ), ಮತ್ತು ಅಮಲಕಿ (ನೆಲ್ಲಿಕಾಯಿ) ಎಂಬ ಮೂರು ಒಣಗಿದ ಹಣ್ಣುಗಳ ಮಿಶ್ರಣವಾಗಿದೆ.</p>.<p><strong>ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯ ಹೆಚ್ಚಿಸಲು ಇಲ್ಲಿವೆ ಕೆಲವು ಸೂತ್ರಗಳು</strong></p><p><strong>ಬಿಸಿ ನೀರು:</strong> ಸೂರ್ಯೋದಯಕ್ಕೂ ಮುನ್ನ ಎದ್ದು 1 ಗ್ಲಾಸ್ ಬಿಸಿ ನೀರು ಕುಡಿದರೆ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ.</p><p><strong>ವ್ಯಾಯಾಮ: </strong>ಪ್ರತಿ ದಿನ ವ್ಯಾಯಾಮ ಮಾಡಿದರೆ, ದೇಹ ಸದೃಢವಾಗುತ್ತದೆ. ಇದರಿಂದ ಚರ್ಮದ ಕಾಂತಿಯೂ ಹೆಚ್ಚುತ್ತದೆ. </p><p><strong>ನಿದ್ರೆ:</strong> ರಾತ್ರಿ 10 ಗಂಟೆಗೆ ಮಲಗಿ. 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿ ಇದರಿಂದ ಚರ್ಮ, ವೇಗವಾಗಿ ಕೂದಲು ಬೆಳೆಯುತ್ತದೆ. </p><p><strong>ತುಪ್ಪ:</strong> ಹಾಲಿನ ಜೊತೆ ತುಪ್ಪ ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಬಹುತೇಕ ವಿಟಮಿನ್ಸ್ ಮತ್ತು ಖನಿಜಗಳನ್ನು ಪೂರೈಸಬಹುದು.</p><p><strong>ಅಭ್ಯಂಗ:</strong> ಪ್ರತಿದಿನ ತಲೆಗೆ ಮತ್ತು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಕ್ರಮೇಣವಾಗಿ ಹೆಚ್ಚುತ್ತಾ ಬರುತ್ತದೆ. </p><p><strong>ಮನಸ್ಸು:</strong> ದೇಹದ ಜೊತೆ ಮನಸ್ಸು ಉಲ್ಲಾಸಭರಿತವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.</p><p>ಈ ಮೇಲಿನ ಸರಳ ಅಭ್ಯಾಸಗಳನ್ನು ಅನುಸರಿಸಿದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯಕರ ಚರ್ಮ ಮತ್ತು ದಟ್ಟ ಕೂದಲು ಪಡೆಯಬಹುದು.</p>.<p><em><strong>(ಲೇಖಕರು: ಡಾ.ಶಮೀಮ್ ಬಾನು ನಬೀಸಾಬ್, ಸಹಾಯಕ ಪ್ರಾಧ್ಯಾಪಕರು ಪಂಚಕರ್ಮ ವಿಭಾಗ, ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>