ಮಾ.5ಕ್ಕೆ ರಾಜ್ಯ ಬಜೆಟ್ ?

ಬೆಂಗಳೂರು: 2021–22ನೇ ಸಾಲಿನ ರಾಜ್ಯ ಬಜೆಟ್ಅನ್ನು ಮಾರ್ಚ್ 5ರಂದು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಅದಕ್ಕೂ ಮೊದಲು ಎರಡು ದಿನ, ಅಂದರೆ, ಮಾರ್ಚ್ 3 ಮತ್ತು 4ರಂದು ವಿಧಾನಮಂಡಲದ ಉಭಯ ಸದನಗಳಲ್ಲಿ ‘ಒಂದು ದೇಶ– ಒಂದು ಚುನಾವಣೆ’ ವಿಷಯದ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್ 8ರಿಂದ 31ರವರೆಗೆ ಬಜೆಟ್ ಮೇಲೆ ಇಲಾಖಾವಾರು ಚರ್ಚೆ ನಡೆಸಲು ತಾತ್ಕಾಲಿಕವಾಗಿ ದಿನ ನಿಗದಿಪಡಿಸಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಮೂಲಗಳು ತಿಳಿಸಿವೆ.
ಈಗಾಗಾಲೇ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿವಿಧ ಇಲಾಖೆ
ಗಳ ಸಚಿವರು ಮತ್ತು ಅಧಿಕಾರಿ ಗಳ ಜತೆ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.