ನವದೆಹಲಿ:ಕೇಂದ್ರ ಹಣಕಾಸು ಸಚಿವೆಯಾಗಿ ಎರಡನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ‘ಬಹಿ ಖಾತಾ’ (ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ಹೊರಟಿದ್ದಾರೆ.
ಕಳೆದ ಜುಲೈ 5 ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದ ನಿರ್ಮಲಾ,ಬಜೆಟ್ ದಾಖಲೆಗಳನ್ನು ಕೆಂಪು ವಸ್ತ್ರದಲ್ಲಿ ತರುವ ಮೂಲಕ ಹಲವು ವರ್ಷಗಳ ಶಿಷ್ಟಾಚಾರವನ್ನು ಮುರಿದಿದ್ದರು. ಅದುವರೆಗೆ ಬಜೆಟ್ ಮಂಡಿಸಿದ್ದ ಎಲ್ಲರೂಚರ್ಮದ ಸೂಟ್ ಕೇಸ್ನಲ್ಲಿ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತರುತ್ತಿದ್ದರು.
ಕಳೆದ ವರ್ಷ ಹಣಕಾಸು ಸಚಿವೆಯ ಈ ನಡೆಯನ್ನು ಶ್ಲಾಘಿಸಿದ್ದ ಹಣಕಾಸು ಸಲಹೆಗಾರಕೆ.ಸುಬ್ರಹ್ಮಣ್ಯಂ, ‘ವಸಾಹತು ಮನಃಸ್ಥಿತಿಯಿಂದ ನಾವು ಮುಕ್ತರಾಗಿರುವುದನ್ನು ಈ ಬದಲಾವಣೆಯು ಸಂಕೇತಿಸುತ್ತದೆ’ ಎಂದು ಬಣ್ಣಿಸಿದ್ದರು.
ಬಜೆಟ್ ದಾಖಲೆಗಳನ್ನು ಚರ್ಮದ ಸೂಟ್ ಕೇಸ್ನಲ್ಲಿ ತರುವ ಶಿಷ್ಟಾಚಾರವನ್ನು ಮೊದಲ ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಆರಂಭಿಸಿದ್ದರು.
** ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ ಬಜೆಟ್ ಬಗ್ಗೆ ಸಮಗ್ರ ವಿವರರಗಳಿಗಾಗಿಈ ವಿಶೇಷ ಪುಟ ನೋಡಿ ಬಜೆಟ್ ಬಗೆಗಿನ ಎಲ್ಲ ಸುದ್ದಿಗಳು ನಮ್ಮ ಸಾಮಾಜಿಕ ಜಾಲ ತಾಣಗಳಲ್ಲಿಯೂ ಲಭ್ಯವಿದೆ. ಫೇಸ್ಬುಕ್ಪುಟ ಲೈಕ್ ಮಾಡಿ ಟ್ವಿಟರ್ಫಾಲೋ ಮಾಡಿ