ಮುದ್ರಣ ಮಾಧ್ಯಮವು ಸಂಕಷ್ಟದ ಸ್ಥಿತಿಯಲ್ಲಿದ್ದು, ಆಮದು ಸುಂಕವು ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಹೀಗಾಗಿ ಸುಂಕ ತಗ್ಗಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ಆಮದು ಸುಂಕ ಕೈಬಿಡುವ ಮೂಲಕ ಮುದ್ರಣ ಮಾಧ್ಯಮವನ್ನು ರಕ್ಷಿಸುವಂತೆ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.