ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

Union Budget: ದೂರದತ್ತ ನೋಟ; ನಿರೀಕ್ಷೆಗಳು ಪಲ್ಲಟ

Published : 1 ಫೆಬ್ರುವರಿ 2026, 19:49 IST
Last Updated : 1 ಫೆಬ್ರುವರಿ 2026, 19:49 IST
ಫಾಲೋ ಮಾಡಿ
Comments
ರಕ್ಷಣೆಗೆ ₹7.85ಲಕ್ಷ ಕೋಟಿ – ಸಾರಿಗೆ ಕ್ಷೇತ್ರಕ್ಕೆ ₹5.98 ಲಕ್ಷ ಕೋಟಿ – ರೈಲ್ವೆಗೆ ₹2.77 ಲಕ್ಷ ಕೋಟಿ
ಬಡವರು, ಸೌಕರ್ಯವಂಚಿತರಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಈ ನಿಟ್ಟಿನಲ್ಲಿ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್‌ನಲ್ಲಿ ಅಭಿವೃದ್ಧಿಗೆ ವೇಗ, ಮಹತ್ವಾಕಾಂಕ್ಷೆಗಳ ಈಡೇರಿಕೆ ಹಾಗೂ ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ಎಂಬ ಮೂರು ಕರ್ತವ್ಯಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಉತ್ಪಾದನಾ ವಲಯದಲ್ಲಿ ಗಮನಾರ್ಹ ಬದಲಾವಣೆ ತರುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲು ಒತ್ತು ನೀಡಿದ್ದೇವೆ.
– ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ಸಾಲದ ಸ್ಥಿತಿ ಕಳವಳಕಾರಿ
ಒಟ್ಟು ಬಜೆಟ್‌ ಗಾತ್ರವು ₹53.47 ಲಕ್ಷ ಕೋಟಿ ಆಗಿದ್ದು, ತೆರಿಗೆ ವರಮಾನ ₹28.66 ಲಕ್ಷ ಕೋಟಿ. ತೆರಿಗೆಯೇತರ ವರಮಾನ ₹6.67 ಲಕ್ಷ ಕೋಟಿ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕಿದ್ದರೆ ₹16.95 ಲಕ್ಷ ಕೋಟಿ ಸಾಲ ಮಾಡಬೇಕಾ ಗುತ್ತದೆ. ಆಗ ಕೇಂದ್ರದ ಸಾಲದ ಮೊತ್ತವು ₹214 ಲಕ್ಷ ಕೋಟಿಗೆ ಏರಿಕೆ ಯಾಗುತ್ತದೆ. ಸಾಲದ ಬಡ್ಡಿ ಪಾವತಿಗೆ ₹14.04 ಲಕ್ಷ ಕೋಟಿ ಅಥವಾ ಒಟ್ಟು ವೆಚ್ಚದ ಶೇ 20ರಷ್ಟನ್ನು ಮೀಸಲು ಇರಿಸಬೇಕಾಗುತ್ತದೆ.
140 ಕೋಟಿ ಜನರ ಪ್ರತಿಧ್ವನಿ
ಇದೊಂದು ಐತಿಹಾಸಿಕ ಬಜೆಟ್‌. 140 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಪ್ರತಿಧ್ವನಿಸಿದೆ. ವಿನೂತನ ಅವಕಾಶಗಳ ಬಾಗಿಲು ತೆರೆದಿದೆ. ‘ಮೇಕ್‌ ಇನ್‌ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳಿಗೆ ವೇಗ ನೀಡುವ ಮಹತ್ವದ ಉದ್ದೇಶ ಹೊಂದಿದೆ. ವಿಕಸಿತ ಭಾರತ–2047ರ ಕಡೆಗಿನ ಪ್ರಯಾಣಕ್ಕೆ ಸ್ಪಷ್ಟ ನೀಲನಕ್ಷೆ ರೂಪಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತು ಬಾರಿ ಬಜೆಟ್‌ ಮಂಡನೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
– ನರೇಂದ್ರ ಮೋದಿ, ಪ್ರಧಾನಿ
ಕುರುಡು ಬಜೆಟ್‌
ಯುವಜನತೆಗೆ ಉದ್ಯೋಗವಿಲ್ಲದಂತಾಗಿದೆ, ಉತ್ಪಾದನೆ ಕುಸಿದಿದೆ, ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬದ ಉಳಿತಾಯ ಇಳಿಮುಖವಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಭಾರತದ ಇಂಥ ನೈಜ ಬಿಕ್ಕಟ್ಟುಗಳ ಬಗ್ಗೆ ಬಜೆಟ್ ಕುರುಡಾಗಿದೆ
– ರಾಹುಲ್‌ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ
ರಾಜಕೀಯ ಇಚ್ಛಾಶಕ್ತಿ ಇಲ್ಲ
ಭಾರತದ ಆರ್ಥಿಕ, ಸಾಮಾಜಿಕ, ರಾಜಕೀಯ ಸವಾಲುಗಳಿಗೆ ಬಜೆಟ್‌ನಲ್ಲಿ ಪರಿಹಾರ ನೀಡಿಲ್ಲ. ದೂರದೃಷ್ಟಿ, ರಾಜಕೀಯ ಇಚ್ಛಾಶಕ್ತಿಯೂ ಇಲ್ಲ. ನೀತಿಗಳ ಕೊರತೆಯನ್ನು ತುಂಬುವ ಘೋಷಣೆಗಳೂ ಬಜೆಟ್‌ನಲ್ಲಿ ಇಲ್ಲ. ಅಸಮಾನತೆಯು ಬ್ರಿಟಿಷ್‌ ಆಡಳಿತಕ್ಕಿಂತ ಹೆಚ್ಚಿದೆ. ಆದರೆ ಬಜೆಟ್‌ನಲ್ಲಿ ಈ ಕುರಿತ ಉಲ್ಲೇಖವೇ ಇಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್‌ ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ ಬೆಂಬಲ ನೀಡಿಲ್ಲ
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಜನವಿರೋಧಿ ಬಜೆಟ್‌
ದೂರದೃಷ್ಟಿಯಿಲ್ಲದ, ಕ್ರಿಯಾಶೀಲವಲ್ಲದ, ಜನವಿರೋಧಿ ಬಜೆಟ್‌ ಇದು. ಮಹಿಳೆಯರು ಮತ್ತು ರೈತರ ವಿರೋಧಿ. ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿರೋಧಿಯೂ ಆಗಿದೆ. ಇದು ಅದಕ್ಷ ಆಡಳಿತದ ಸುಳ್ಳಿನ ಮೂಟೆ. ಪಶ್ಚಿಮ ಬಂಗಾಳಕ್ಕೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಶಿಕ್ಷಣಕ್ಕೆ ನೀಡುವ ಅನುದಾನ ಮತ್ತು ಸಾಮಾಜಿಕ ಭದ್ರತೆ, ರಸಗೊಬ್ಬರಕ್ಕೆ ನೀಡುವ ಸಹಾಯಧನವನ್ನು ಕಡಿತ ಮಾಡಲಾಗಿದೆ. ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಹಳಿ ತಪ್ಪಲಿದೆ
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT