ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರ ಜನ್ಮದಿನದ ಅಂಗವಾಗಿ ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಅಂಬಾನಿ ಬುಧವಾರ ಮಾತನಾಡಿದ್ದಾರೆ. ಅವರ ಮಾತಿನ ವಿವರಗಳನ್ನು ಗುರುವಾರ ಪ್ರಕಟಿಸಲಾಗಿದೆ. ದೂರಸಂಪರ್ಕ ಮತ್ತು ಡಿಜಿಟಲ್ ವಹಿವಾಟುಗಳಿಗೆ ಆಕಾಶ್ ಅಂಬಾನಿ, ರಿಟೇಲ್ ವಹಿವಾಟಿಗೆ ಇಶಾ ಮತ್ತು ನವ ಇಂಧನ ವಹಿವಾಟಿಗೆ ಅನಂತ್ ಅವರನ್ನು ಮುಂದಾಳತ್ವ ಇರಲಿದೆ ಎಂದಿದ್ದಾರೆ.