<p><strong>ನವದೆಹಲಿ (ರಾಯಿಟರ್ಸ್): </strong>ದೇಶದಲ್ಲಿ ವಾಹನ ಮಾರಾಟ ಕುಸಿತ ಕಾಣುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗುತ್ತಿದೆ.</p>.<p>ಏಪ್ರಿಲ್ನಿಂದ ಈಚೆಗೆ ವಾಹನ, ಬಿಡಿಭಾಗ ತಯಾರಿಕೆ ಮತ್ತು ವಿತರಣಾ ಸಂಸ್ಥೆಗಳಿಂದ ಒಟ್ಟಾರೆ 3.50 ಲಕ್ಷ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಉದ್ಯಮ ವಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.</p>.<p>ಬಹಳಷ್ಟು ಕಂಪನಿಗಳು ತಯಾರಿಕೆ ತಗ್ಗಿಸುವ, ಕೆಲ ದಿನಗಳ ಮಟ್ಟಿಗೆ ತಯಾರಿಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ. ವಿತರಣಾ ಸಂಸ್ಥೆಗಳು ತಮ್ಮ ಷೋರೂಂಗಳನ್ನು ಮುಚ್ಚಲಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.</p>.<p>‘ವಾಹನ ಉದ್ಯಮವು ಆರ್ಥಿಕ ಹಿಂಜರಿತ ಎದುರಿಸುತ್ತಿದೆ’ ಎಂದು ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) ಪ್ರಧಾನ ನಿರ್ದೇಶಕ ವಿನಿ ಮೆಹ್ತಾ ತಿಳಿಸಿದ್ದಾರೆ.</p>.<p><strong>ಉತ್ತೇಜಕ ಕೊಡುಗೆ ನೀಡಲು ಒತ್ತಾಯ</strong></p>.<p>ವಾಹನ ಉದ್ಯಮದ ಚೇತರಿಕೆಗೆ ಪೂರಕವಾದ ಉತ್ತೇಜಕ ಕೊಡುಗೆಗಳನ್ನು ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>.<p>ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ.ಭಾರ್ಗವ್, ಮಹೀಂದ್ರಾ ಅಧ್ಯಕ್ಷ ರಾಜನ್ ವಧೇರಾ ಅವರನ್ನೂ ಒಳಗೊಂಡು ವಿವಿಧ ಒಕ್ಕೂಟಗಳ ಪ್ರತಿನಿಧಿಗಳು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಉದ್ಯಮದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.</p>.<p>‘ಜಿಎಸ್ಟಿ ದರ ಕಡಿತವೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಬೇಡಿಕೆ ಇಡಲಾಗಿದೆ. ಪರಿಹಾರ ಕ್ರಮಗಳು ಶೀಘ್ರದಲ್ಲೇ ಬರುವ ವಿಶ್ವಾಸವಿದೆ’ ಎಂದು ಎಸ್ಐಎಎಂನ ಅಧ್ಯಕ್ಷರೂ ಆಗಿರುವ ರಾಜನ್ ವಧೇರಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ರಾಯಿಟರ್ಸ್): </strong>ದೇಶದಲ್ಲಿ ವಾಹನ ಮಾರಾಟ ಕುಸಿತ ಕಾಣುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗುತ್ತಿದೆ.</p>.<p>ಏಪ್ರಿಲ್ನಿಂದ ಈಚೆಗೆ ವಾಹನ, ಬಿಡಿಭಾಗ ತಯಾರಿಕೆ ಮತ್ತು ವಿತರಣಾ ಸಂಸ್ಥೆಗಳಿಂದ ಒಟ್ಟಾರೆ 3.50 ಲಕ್ಷ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಉದ್ಯಮ ವಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.</p>.<p>ಬಹಳಷ್ಟು ಕಂಪನಿಗಳು ತಯಾರಿಕೆ ತಗ್ಗಿಸುವ, ಕೆಲ ದಿನಗಳ ಮಟ್ಟಿಗೆ ತಯಾರಿಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ. ವಿತರಣಾ ಸಂಸ್ಥೆಗಳು ತಮ್ಮ ಷೋರೂಂಗಳನ್ನು ಮುಚ್ಚಲಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.</p>.<p>‘ವಾಹನ ಉದ್ಯಮವು ಆರ್ಥಿಕ ಹಿಂಜರಿತ ಎದುರಿಸುತ್ತಿದೆ’ ಎಂದು ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) ಪ್ರಧಾನ ನಿರ್ದೇಶಕ ವಿನಿ ಮೆಹ್ತಾ ತಿಳಿಸಿದ್ದಾರೆ.</p>.<p><strong>ಉತ್ತೇಜಕ ಕೊಡುಗೆ ನೀಡಲು ಒತ್ತಾಯ</strong></p>.<p>ವಾಹನ ಉದ್ಯಮದ ಚೇತರಿಕೆಗೆ ಪೂರಕವಾದ ಉತ್ತೇಜಕ ಕೊಡುಗೆಗಳನ್ನು ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>.<p>ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ.ಭಾರ್ಗವ್, ಮಹೀಂದ್ರಾ ಅಧ್ಯಕ್ಷ ರಾಜನ್ ವಧೇರಾ ಅವರನ್ನೂ ಒಳಗೊಂಡು ವಿವಿಧ ಒಕ್ಕೂಟಗಳ ಪ್ರತಿನಿಧಿಗಳು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಉದ್ಯಮದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.</p>.<p>‘ಜಿಎಸ್ಟಿ ದರ ಕಡಿತವೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಬೇಡಿಕೆ ಇಡಲಾಗಿದೆ. ಪರಿಹಾರ ಕ್ರಮಗಳು ಶೀಘ್ರದಲ್ಲೇ ಬರುವ ವಿಶ್ವಾಸವಿದೆ’ ಎಂದು ಎಸ್ಐಎಎಂನ ಅಧ್ಯಕ್ಷರೂ ಆಗಿರುವ ರಾಜನ್ ವಧೇರಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>