<p><strong>ಛತ್ರಪತಿ ಸಂಭಾಜಿನಗರ:</strong> ದೇಶದ ನವೋದ್ಯಮವೊಂದು ತಯಾರಿಸಿದ ಕೀಟನಾಶಕ ಸಿಂಪಡಣೆ ಯಂತ್ರವನ್ನು ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪರೀಕ್ಷಿಸಿದ್ದಾರೆ. ಇದರಿಂದ ಈ ಕೃಷಿ ಉಪಕರಣಕ್ಕೆ ಭಾರಿ ಬೇಡಿಕೆ ಸೃಷ್ಟಿಸಲಾಗಿದೆ.</p>.<p>ಯೋಗೇಶ್ ಗವಾಂಡೆ ಎನ್ನುವ ಸ್ಥಳೀಯ ಎಂಜಿನಿಯರ್ ಈ ಕೀಟನಾಶಕ ಸಿಂಪಡಣೆ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ. 2019ರಲ್ಲಿ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಕೃಷಿ ಉಪಕರಣಗಳನ್ನು ತಯಾರಿಸುವ ಕಂಪನಿ ಸ್ಥಾಪಿಸಿದ್ದಾರೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. </p>.<p class="title">ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದ ಗವಾಂಡೆ, ತಾವು ತಯಾರಿಸುವ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. </p>.<p class="title">ಈ ಯಂತ್ರವು ಚಕ್ರಗಳನ್ನು ಹೊಂದಿದ್ದು, ರೈತರು ಹೊತ್ತುಕೊಂಡು ತಿರುಗುವ ಅವಶ್ಯಕತೆ ಇಲ್ಲ. 4 ಸಾಲಿನ ಬೆಳೆಗಳಿಗೆ ಒಂದೇ ಬಾರಿಗೆ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ.</p>.<p class="title">ಮರಗಳಿಗೆ ಸಿಂಪಡಣೆ ಮಾಡಲು ಇದರಲ್ಲಿ 12ರಿಂದ 14 ಅಡಿ ಸಿಂಪಡಣೆಯ ನಾಜಿಲ್ಗಳಿದ್ದು, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ನಾಜಿಲ್ಗಳ ಒತ್ತಡ ಕಡಿಮೆ ಮಾಡಬಹುದಾಗಿದೆ. ಇದರಿಂದ ಬೆಳೆಗೆ ಹಾನಿ ಆಗುವುದಿಲ್ಲ. ಈ ಉತ್ಪನ್ನ ರೈತ ಸ್ನೇಹಿಯಾಗಿರಲಿದೆ ಎಂದು ಗವಾಂಡೆ ಹೇಳಿದ್ದಾರೆ.</p>.<p class="title">ದೇಶದ 22 ರಾಜ್ಯಗಳಲ್ಲಿ ಈ ಉಪಕರಣಗಳನ್ನು ಮಾರಾಟ ಮಾಡಲಾಗಿದೆ. ಕೆನ್ಯಾ ಮತ್ತು ನಮೀಬಿಯಾ ದೇಶದಿಂದ ಆರ್ಡರ್ ಬರುತ್ತಿವೆ. ಬಿಲ್ ಗೇಟ್ಸ್ ಭಾರತಕ್ಕೆ ಬಂದಾಗ ಅವರನ್ನು ಭೇಟಿಯಾದೆ. ಈ ವೇಳೆ ಉಪಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛತ್ರಪತಿ ಸಂಭಾಜಿನಗರ:</strong> ದೇಶದ ನವೋದ್ಯಮವೊಂದು ತಯಾರಿಸಿದ ಕೀಟನಾಶಕ ಸಿಂಪಡಣೆ ಯಂತ್ರವನ್ನು ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪರೀಕ್ಷಿಸಿದ್ದಾರೆ. ಇದರಿಂದ ಈ ಕೃಷಿ ಉಪಕರಣಕ್ಕೆ ಭಾರಿ ಬೇಡಿಕೆ ಸೃಷ್ಟಿಸಲಾಗಿದೆ.</p>.<p>ಯೋಗೇಶ್ ಗವಾಂಡೆ ಎನ್ನುವ ಸ್ಥಳೀಯ ಎಂಜಿನಿಯರ್ ಈ ಕೀಟನಾಶಕ ಸಿಂಪಡಣೆ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ. 2019ರಲ್ಲಿ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಕೃಷಿ ಉಪಕರಣಗಳನ್ನು ತಯಾರಿಸುವ ಕಂಪನಿ ಸ್ಥಾಪಿಸಿದ್ದಾರೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. </p>.<p class="title">ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದ ಗವಾಂಡೆ, ತಾವು ತಯಾರಿಸುವ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. </p>.<p class="title">ಈ ಯಂತ್ರವು ಚಕ್ರಗಳನ್ನು ಹೊಂದಿದ್ದು, ರೈತರು ಹೊತ್ತುಕೊಂಡು ತಿರುಗುವ ಅವಶ್ಯಕತೆ ಇಲ್ಲ. 4 ಸಾಲಿನ ಬೆಳೆಗಳಿಗೆ ಒಂದೇ ಬಾರಿಗೆ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ.</p>.<p class="title">ಮರಗಳಿಗೆ ಸಿಂಪಡಣೆ ಮಾಡಲು ಇದರಲ್ಲಿ 12ರಿಂದ 14 ಅಡಿ ಸಿಂಪಡಣೆಯ ನಾಜಿಲ್ಗಳಿದ್ದು, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ನಾಜಿಲ್ಗಳ ಒತ್ತಡ ಕಡಿಮೆ ಮಾಡಬಹುದಾಗಿದೆ. ಇದರಿಂದ ಬೆಳೆಗೆ ಹಾನಿ ಆಗುವುದಿಲ್ಲ. ಈ ಉತ್ಪನ್ನ ರೈತ ಸ್ನೇಹಿಯಾಗಿರಲಿದೆ ಎಂದು ಗವಾಂಡೆ ಹೇಳಿದ್ದಾರೆ.</p>.<p class="title">ದೇಶದ 22 ರಾಜ್ಯಗಳಲ್ಲಿ ಈ ಉಪಕರಣಗಳನ್ನು ಮಾರಾಟ ಮಾಡಲಾಗಿದೆ. ಕೆನ್ಯಾ ಮತ್ತು ನಮೀಬಿಯಾ ದೇಶದಿಂದ ಆರ್ಡರ್ ಬರುತ್ತಿವೆ. ಬಿಲ್ ಗೇಟ್ಸ್ ಭಾರತಕ್ಕೆ ಬಂದಾಗ ಅವರನ್ನು ಭೇಟಿಯಾದೆ. ಈ ವೇಳೆ ಉಪಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>