<p><strong>ಬೆಂಗಳೂರು</strong>: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ನ ನಿವ್ವಳ ಲಾಭ ಶೇಕಡ 19ರಷ್ಟು ಹೆಚ್ಚಳವಾಗಿದೆ.</p>.<p>ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹4,015 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹4,774 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಅವಧಿಯಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಇಳಿಕೆ ಆಗಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.</p>.<p>ಒಟ್ಟು ವರಮಾನವು ₹38,598 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹31,544 ಕೋಟಿಯಷ್ಟಾಗಿದೆ. ಅನುತ್ಪಾದಕ ಸಾಲದ ಪ್ರಮಾಣ (ಎನ್ಪಿಎ) ಶೇ 3.73ರಿಂದ ಶೇ 2.35ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ 0.98ರಿಂದ ಶೇ 0.54ಕ್ಕೆ ಕಡಿಮೆ ಆಗಿದೆ.</p>.<p>ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅನುತ್ಪಾದಕ ಸಾಲದ ಪ್ರಮಾಣ ₹2,587 ಕೋಟಿಯಷ್ಟಿತ್ತು. ಅದು ಪ್ರಸಕ್ತ ಸೆಪ್ಟೆಂಬರ್ ವೇಳೆಗೆ ₹1,504 ಕೋಟಿಗೆ ಇಳಿದಿದೆ. </p>.<p>ಬ್ಯಾಂಕ್ನ ಒಟ್ಟು ವ್ಯವಹಾರವು ಶೇ 13.5ರಷ್ಟು ಹೆಚ್ಚಳವಾಗಿದ್ದು, ₹26,78,963 ಕೋಟಿಯಾಗಿದೆ. ಠೇವಣಿ ₹15,27,922 ಕೋಟಿಯಷ್ಟಾಗಿದ್ದು, ಬ್ಯಾಂಕ್ ₹11,51,041 ಕೋಟಿ ಸಾಲ ನೀಡಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 13.7ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.</p>.<p>ಜಿಎಸ್ಟಿ ಇಳಿಕೆಯಿಂದ ಸಾಲ ತೆಗೆದುಕೊಳ್ಳುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ವಾಹನ ಖರೀದಿಸಲು ಸಾಲ ಪಡೆಯುವವರು ಹೆಚ್ಚಾಗಿದ್ದಾರೆ. ಮುಂದಿನ ತ್ರೈಮಾಸಿಕಗಳಲ್ಲಿ ಈ ಹೆಚ್ಚಳದ ಸ್ಪಷ್ಟತೆ ಸಿಗಲಿದೆ ಎಂದರು.</p>.<p>ಅದೇ ದಿನ ಚೆಕ್ ಕ್ಲಿಯರೆನ್ಸ್ ಮಾಡುವ ವ್ಯವಸ್ಥೆಯಲ್ಲಿ ಆರಂಭದ ಕೆಲ ದಿನ ಮಾತ್ರ ಸಮಸ್ಯೆ ಉಂಟಾಗಿತ್ತು. ಈಗ ಸರಿಯಾಗಿದೆ. ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಈ ವೇಳೆ ಬ್ಯಾಂಕ್ ತನ್ನ 10 ಸಾವಿರನೇ ಶಾಖೆಯನ್ನು ಆರಂಭಿಸಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ನ ನಿವ್ವಳ ಲಾಭ ಶೇಕಡ 19ರಷ್ಟು ಹೆಚ್ಚಳವಾಗಿದೆ.</p>.<p>ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹4,015 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹4,774 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಅವಧಿಯಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಇಳಿಕೆ ಆಗಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.</p>.<p>ಒಟ್ಟು ವರಮಾನವು ₹38,598 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹31,544 ಕೋಟಿಯಷ್ಟಾಗಿದೆ. ಅನುತ್ಪಾದಕ ಸಾಲದ ಪ್ರಮಾಣ (ಎನ್ಪಿಎ) ಶೇ 3.73ರಿಂದ ಶೇ 2.35ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ 0.98ರಿಂದ ಶೇ 0.54ಕ್ಕೆ ಕಡಿಮೆ ಆಗಿದೆ.</p>.<p>ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅನುತ್ಪಾದಕ ಸಾಲದ ಪ್ರಮಾಣ ₹2,587 ಕೋಟಿಯಷ್ಟಿತ್ತು. ಅದು ಪ್ರಸಕ್ತ ಸೆಪ್ಟೆಂಬರ್ ವೇಳೆಗೆ ₹1,504 ಕೋಟಿಗೆ ಇಳಿದಿದೆ. </p>.<p>ಬ್ಯಾಂಕ್ನ ಒಟ್ಟು ವ್ಯವಹಾರವು ಶೇ 13.5ರಷ್ಟು ಹೆಚ್ಚಳವಾಗಿದ್ದು, ₹26,78,963 ಕೋಟಿಯಾಗಿದೆ. ಠೇವಣಿ ₹15,27,922 ಕೋಟಿಯಷ್ಟಾಗಿದ್ದು, ಬ್ಯಾಂಕ್ ₹11,51,041 ಕೋಟಿ ಸಾಲ ನೀಡಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 13.7ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.</p>.<p>ಜಿಎಸ್ಟಿ ಇಳಿಕೆಯಿಂದ ಸಾಲ ತೆಗೆದುಕೊಳ್ಳುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ವಾಹನ ಖರೀದಿಸಲು ಸಾಲ ಪಡೆಯುವವರು ಹೆಚ್ಚಾಗಿದ್ದಾರೆ. ಮುಂದಿನ ತ್ರೈಮಾಸಿಕಗಳಲ್ಲಿ ಈ ಹೆಚ್ಚಳದ ಸ್ಪಷ್ಟತೆ ಸಿಗಲಿದೆ ಎಂದರು.</p>.<p>ಅದೇ ದಿನ ಚೆಕ್ ಕ್ಲಿಯರೆನ್ಸ್ ಮಾಡುವ ವ್ಯವಸ್ಥೆಯಲ್ಲಿ ಆರಂಭದ ಕೆಲ ದಿನ ಮಾತ್ರ ಸಮಸ್ಯೆ ಉಂಟಾಗಿತ್ತು. ಈಗ ಸರಿಯಾಗಿದೆ. ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಈ ವೇಳೆ ಬ್ಯಾಂಕ್ ತನ್ನ 10 ಸಾವಿರನೇ ಶಾಖೆಯನ್ನು ಆರಂಭಿಸಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>