<p><strong>ನವದೆಹಲಿ: </strong>ದೇಶದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ' ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ಗೆ ಅನುಮೋದನೆ ದೊರೆತಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಹೇಳಿದೆ.</p>.<p>ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾದ ನಿರ್ವಹಣೆಗೆ ‘ಟಾಟಾ ಸನ್ಸ್’ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಲಾಗಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಂಗೀಕರಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿತ್ತು.</p>.<p>ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಈ ಬೆಳವಣಿಗೆಗಳನ್ನು ತಳ್ಳಿ ಹಾಕಿದ್ದು, 'ಏರ್ ಇಂಡಿಯಾದ ಹೂಡಿಕೆ ಹಿಂತೆಗೆತಕ್ಕೆ(ಮಾರಾಟ) ಸಂಬಂಧಿಸಿದಂತೆ ಹಣಕಾಸು ಬಿಡ್ಗಳಿಗೆ ಭಾರತ ಸರ್ಕಾರವು ಅನುಮೋದನೆ ನೀಡಿರುವ ಕುರಿತು ಮಾಧ್ಯಮಗಳ ವರದಿಗಳು ತಪ್ಪಾಗಿವೆ. ಸರ್ಕಾರವು ನಿರ್ಧಾರ ಕೈಗೊಂಡ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ' ಎಂದು ಟ್ವೀಟಿಸಿದ್ದಾರೆ.</p>.<p><strong>ಇದನ್ನೂ ಓದಿ–<a href="https://www.prajavani.net/india-news/tata-sons-wins-bid-for-air-india-subramanian-swamy-hits-to-question-in-court-after-it-signed-871624.html" target="_blank"> </a></strong><a href="https://www.prajavani.net/india-news/tata-sons-wins-bid-for-air-india-subramanian-swamy-hits-to-question-in-court-after-it-signed-871624.html" target="_blank">ಏರ್ ಇಂಡಿಯಾ ಹರಾಜು: ಸುಬ್ರಮಣಿಯನ್ ಸ್ವಾಮಿ ಕೋರ್ಟ್ನಲ್ಲಿ ಪ್ರಶ್ನಿಸುವ ಸುಳಿವು</a></p>.<p>ಟಾಟಾ ಸನ್ಸ್ನ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹಣಕಾಸು ಸಚಿವಾಲಯದ ವಕ್ತಾರರಿಂದ ರಾಯಿಟರ್ಸ್ ಸಂದೇಶಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.</p>.<p><strong>ಓದಿ:</strong><a href="https://www.prajavani.net/op-ed/analysis/captain-gr-gopinath-tata-sons-air-india-868822.html" target="_blank">ವಿಶ್ಲೇಷಣೆ: ಏರ್ ಇಂಡಿಯಾ; ಮರಳಿ ಮಾತೃಸಂಸ್ಥೆಗೆ?</a></p>.<p>ನಷ್ಟದ ಸುಳಿಯಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಮುಂದಾಗಿದೆ. ಅಧಿಕಾರಿಗಳ ಪ್ರಕಾರ, ಸರ್ಕಾರವು ಪ್ರತಿ ನಿತ್ಯ ಏರ್ ಇಂಡಿಯಾ ನಿರ್ವಹಣೆಗಾಗಿ ಸುಮಾರು ₹20 ಕೋಟಿ ವ್ಯಯಿಸುತ್ತಿದೆ ಹಾಗೂ ಈವರೆಗೂ ಅಂದಾಜು ₹70,000 ಕೋಟಿ ನಷ್ಟಕ್ಕೆ ಒಳಗಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ' ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ಗೆ ಅನುಮೋದನೆ ದೊರೆತಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಹೇಳಿದೆ.</p>.<p>ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾದ ನಿರ್ವಹಣೆಗೆ ‘ಟಾಟಾ ಸನ್ಸ್’ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಲಾಗಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಂಗೀಕರಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿತ್ತು.</p>.<p>ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಈ ಬೆಳವಣಿಗೆಗಳನ್ನು ತಳ್ಳಿ ಹಾಕಿದ್ದು, 'ಏರ್ ಇಂಡಿಯಾದ ಹೂಡಿಕೆ ಹಿಂತೆಗೆತಕ್ಕೆ(ಮಾರಾಟ) ಸಂಬಂಧಿಸಿದಂತೆ ಹಣಕಾಸು ಬಿಡ್ಗಳಿಗೆ ಭಾರತ ಸರ್ಕಾರವು ಅನುಮೋದನೆ ನೀಡಿರುವ ಕುರಿತು ಮಾಧ್ಯಮಗಳ ವರದಿಗಳು ತಪ್ಪಾಗಿವೆ. ಸರ್ಕಾರವು ನಿರ್ಧಾರ ಕೈಗೊಂಡ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ' ಎಂದು ಟ್ವೀಟಿಸಿದ್ದಾರೆ.</p>.<p><strong>ಇದನ್ನೂ ಓದಿ–<a href="https://www.prajavani.net/india-news/tata-sons-wins-bid-for-air-india-subramanian-swamy-hits-to-question-in-court-after-it-signed-871624.html" target="_blank"> </a></strong><a href="https://www.prajavani.net/india-news/tata-sons-wins-bid-for-air-india-subramanian-swamy-hits-to-question-in-court-after-it-signed-871624.html" target="_blank">ಏರ್ ಇಂಡಿಯಾ ಹರಾಜು: ಸುಬ್ರಮಣಿಯನ್ ಸ್ವಾಮಿ ಕೋರ್ಟ್ನಲ್ಲಿ ಪ್ರಶ್ನಿಸುವ ಸುಳಿವು</a></p>.<p>ಟಾಟಾ ಸನ್ಸ್ನ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹಣಕಾಸು ಸಚಿವಾಲಯದ ವಕ್ತಾರರಿಂದ ರಾಯಿಟರ್ಸ್ ಸಂದೇಶಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.</p>.<p><strong>ಓದಿ:</strong><a href="https://www.prajavani.net/op-ed/analysis/captain-gr-gopinath-tata-sons-air-india-868822.html" target="_blank">ವಿಶ್ಲೇಷಣೆ: ಏರ್ ಇಂಡಿಯಾ; ಮರಳಿ ಮಾತೃಸಂಸ್ಥೆಗೆ?</a></p>.<p>ನಷ್ಟದ ಸುಳಿಯಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಮುಂದಾಗಿದೆ. ಅಧಿಕಾರಿಗಳ ಪ್ರಕಾರ, ಸರ್ಕಾರವು ಪ್ರತಿ ನಿತ್ಯ ಏರ್ ಇಂಡಿಯಾ ನಿರ್ವಹಣೆಗಾಗಿ ಸುಮಾರು ₹20 ಕೋಟಿ ವ್ಯಯಿಸುತ್ತಿದೆ ಹಾಗೂ ಈವರೆಗೂ ಅಂದಾಜು ₹70,000 ಕೋಟಿ ನಷ್ಟಕ್ಕೆ ಒಳಗಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>