<p><strong>ನವದೆಹಲಿ</strong>: ಸುಧಾರಣಾ ಕಾರ್ಯಕ್ರಮಗಳು ಮತ್ತು ಬಂಡವಾಳ ವೆಚ್ಚವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳಲ್ಲಿ ರಾಜ್ಯಗಳಿಗೆ ₹95 ಸಾವಿರ ಕೋಟಿಗೂ ಅಧಿಕ ತೆರಿಗೆಯ ಮೊತ್ತವನ್ನು ವರ್ಗಾಯಿಸಲುಕೇಂದ್ರ ಸರ್ಕಾರ ತಿರ್ಮಾನಿಸಿದೆ.</p>.<p>ಇದು, ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿದ್ದ ಮೊತ್ತದ ದುಪ್ಪಟ್ಟಾಗಿದೆ. ಬಂಡವಾಳ ವೆಚ್ಚವನ್ನು ಚುರುಕುಗೊಳಿಸಲು ತನ್ನ ಪಾಲಿನ ತೆರಿಗೆ ಮೊತ್ತವನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಬೇಕು ಎಂಬ ಕೆಲ ರಾಜ್ಯಗಳ ಮನವಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.</p>.<p>‘ಈಗ ಹಂಚಿಕೆ ಮಾಡುತ್ತಿದ್ದ ₹ 47,541 ಕೋಟಿಗೆ ಬದಲಾಗಿ, ಒಟ್ಟು ₹ 95,082 ಕೋಟಿ ಅನ್ನು ನ. 22ರಂದು ರಾಜ್ಯಗಳಿಗೆ ಬಿಡುಗಡೆ ಮಾಡಲು ಹಣಕಾಸು ಕಾರ್ಯದರ್ಶಿಗೆ ಸಲಹೆ ಮಾಡಿದ್ದೇನೆ’ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.</p>.<p>ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರ ಸಭೆಯ ನಂತರ ಮಾತನಾಡಿದ ಅವರು, ‘ಮೂಲಸೌಕರ್ಯ ಕಾಮಗಾರಿಗಳಿಗೆ ಹಣ ವ್ಯಯಿಸಲು ರಾಜ್ಯಗಳ ಬಳಿ ಹಣ ಇರಬೇಕು ಎಂಬ ಕೆಲ ರಾಜ್ಯಗಳ ಮನವಿ ಆಧರಿಸಿ ಈ ಕ್ರಮವಹಿಸಲಾಗಿದೆ’ ಎಂದರು.</p>.<p>ತೆರಿಗೆಯ ಮೊತ್ತವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 14 ಕಂತುಗಳಲ್ಲಿ ಬಿಡುಗಡೆ ಮಾಡಲಿದೆ. ಸುಮಾರು 20 ರಾಜ್ಯಗಳು ವಾರ್ಷಿಕ ಬಂಡವಾಳ ವೆಚ್ಚ ಗುರಿಯಲ್ಲಿ ಈಗಾಗಲೇ ಶೇ 80ಕ್ಕೂ ಹೆಚ್ಚು ವ್ಯಯಮಾಡಿವೆ.</p>.<p>‘ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲು ಈ ವರ್ಷದಲ್ಲಿ ನೀಡಲು ಸಮ್ಮತಿಸಿದ್ದ ಜಿಎಸ್ಟಿ ಪರಿಹಾರದ ಮೊತ್ತವನ್ನು ನವೆಂಬರ್ ತಿಂಗಳ ಆರಂಭದಲ್ಲಿಯೇ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.</p>.<p>ರಾಜ್ಯಗಳಿಗೆ ಬಹುತೇಕ ಅನುದಾನದ ಸ್ವರೂಪದಲ್ಲಿ 50 ವರ್ಷದ ಅವಧಿಗೆ ಬಡ್ಡಿರಹಿತವಾಗಿ ನೀಡಲಿರುವ ಬಂಡವಾಳವೆಚ್ಚದ ಮೊತ್ತಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಲವು ರಾಜ್ಯಗಳು ಯೋಜನೆಯನ್ನು ಮುಂದುವರಿಸುವಂತೆ ಕೋರಿವೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸುಧಾರಣಾ ಕಾರ್ಯಕ್ರಮಗಳು ಮತ್ತು ಬಂಡವಾಳ ವೆಚ್ಚವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳಲ್ಲಿ ರಾಜ್ಯಗಳಿಗೆ ₹95 ಸಾವಿರ ಕೋಟಿಗೂ ಅಧಿಕ ತೆರಿಗೆಯ ಮೊತ್ತವನ್ನು ವರ್ಗಾಯಿಸಲುಕೇಂದ್ರ ಸರ್ಕಾರ ತಿರ್ಮಾನಿಸಿದೆ.</p>.<p>ಇದು, ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿದ್ದ ಮೊತ್ತದ ದುಪ್ಪಟ್ಟಾಗಿದೆ. ಬಂಡವಾಳ ವೆಚ್ಚವನ್ನು ಚುರುಕುಗೊಳಿಸಲು ತನ್ನ ಪಾಲಿನ ತೆರಿಗೆ ಮೊತ್ತವನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಬೇಕು ಎಂಬ ಕೆಲ ರಾಜ್ಯಗಳ ಮನವಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.</p>.<p>‘ಈಗ ಹಂಚಿಕೆ ಮಾಡುತ್ತಿದ್ದ ₹ 47,541 ಕೋಟಿಗೆ ಬದಲಾಗಿ, ಒಟ್ಟು ₹ 95,082 ಕೋಟಿ ಅನ್ನು ನ. 22ರಂದು ರಾಜ್ಯಗಳಿಗೆ ಬಿಡುಗಡೆ ಮಾಡಲು ಹಣಕಾಸು ಕಾರ್ಯದರ್ಶಿಗೆ ಸಲಹೆ ಮಾಡಿದ್ದೇನೆ’ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.</p>.<p>ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರ ಸಭೆಯ ನಂತರ ಮಾತನಾಡಿದ ಅವರು, ‘ಮೂಲಸೌಕರ್ಯ ಕಾಮಗಾರಿಗಳಿಗೆ ಹಣ ವ್ಯಯಿಸಲು ರಾಜ್ಯಗಳ ಬಳಿ ಹಣ ಇರಬೇಕು ಎಂಬ ಕೆಲ ರಾಜ್ಯಗಳ ಮನವಿ ಆಧರಿಸಿ ಈ ಕ್ರಮವಹಿಸಲಾಗಿದೆ’ ಎಂದರು.</p>.<p>ತೆರಿಗೆಯ ಮೊತ್ತವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 14 ಕಂತುಗಳಲ್ಲಿ ಬಿಡುಗಡೆ ಮಾಡಲಿದೆ. ಸುಮಾರು 20 ರಾಜ್ಯಗಳು ವಾರ್ಷಿಕ ಬಂಡವಾಳ ವೆಚ್ಚ ಗುರಿಯಲ್ಲಿ ಈಗಾಗಲೇ ಶೇ 80ಕ್ಕೂ ಹೆಚ್ಚು ವ್ಯಯಮಾಡಿವೆ.</p>.<p>‘ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲು ಈ ವರ್ಷದಲ್ಲಿ ನೀಡಲು ಸಮ್ಮತಿಸಿದ್ದ ಜಿಎಸ್ಟಿ ಪರಿಹಾರದ ಮೊತ್ತವನ್ನು ನವೆಂಬರ್ ತಿಂಗಳ ಆರಂಭದಲ್ಲಿಯೇ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.</p>.<p>ರಾಜ್ಯಗಳಿಗೆ ಬಹುತೇಕ ಅನುದಾನದ ಸ್ವರೂಪದಲ್ಲಿ 50 ವರ್ಷದ ಅವಧಿಗೆ ಬಡ್ಡಿರಹಿತವಾಗಿ ನೀಡಲಿರುವ ಬಂಡವಾಳವೆಚ್ಚದ ಮೊತ್ತಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಲವು ರಾಜ್ಯಗಳು ಯೋಜನೆಯನ್ನು ಮುಂದುವರಿಸುವಂತೆ ಕೋರಿವೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>