<p><strong>ನವದೆಹಲಿ</strong>: ದೇಶದ ಕಾನೂನು ಮತ್ತು ನಿಯಮಗಳನ್ನು ಇ ಕಾಮರ್ಸ್ ಸಂಸ್ಥೆಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.</p>.<p>ಪ್ರಮುಖವಾಗಿ ವಿದೇಶಿ ಮೂಲದ ದೈತ್ಯ ಇ ಕಾಮರ್ಸ್ ಸಂಸ್ಥೆಗಳು, ಗ್ರಾಹಕರ ಹಿತದೃಷ್ಟಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕಾಗಿ ಸರ್ಕಾರ ಇ ಕಾಮರ್ಸ್ ಮತ್ತು ಮಾರ್ಕೆಟ್ಪ್ಲೇಸ್ ನಿಯಂತ್ರಣಕ್ಕೆ ಸೂಕ್ತ ನಿಯಮ ಜಾರಿಗೆ ಮುಂದಾಗಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.</p>.<p>ವೆಬಿನಾರ್ ಒಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ದೇಶದ ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ ನೆಲದ ಕಾನೂನು ಮತ್ತು ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವುಗಳನ್ನು ಪಾಲಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.</p>.<p>ಆದರೆ ಕೆಲವೊಂದು ದೊಡ್ಡ ಮಟ್ಟಿನ ಇ ಕಾಮರ್ಸ್ ಸಂಸ್ಥೆಗಳು ದೇಶದಲ್ಲಿ ವ್ಯವಹಾರ ಆರಂಭಿಸುತ್ತವೆ. ಅದಕ್ಕೆ ಹಣ ಮತ್ತು ತೋಳ್ಬಲ ಬಳಕೆ ಮಾಡುವುದು ಸೂಕ್ತವಲ್ಲ, ಬದಲಾಗಿ ಕಾನೂನು ಸರಿಯಾಗಿ ಪಾಲಿಸಬೇಕು ಎಂದು ಸಚಿವರು ಹೇಳಿದ್ದಾರೆ.</p>.<p><a href="https://www.prajavani.net/business/commerce-news/pan-aadhaar-linking-deadline-extended-to-september-30-842356.html" itemprop="url">ಪಾನ್ ಮತ್ತು ಆಧಾರ್ ಜೋಡಣೆ ಗಡುವು ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದ ಕಾನೂನು ಮತ್ತು ನಿಯಮಗಳನ್ನು ಇ ಕಾಮರ್ಸ್ ಸಂಸ್ಥೆಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.</p>.<p>ಪ್ರಮುಖವಾಗಿ ವಿದೇಶಿ ಮೂಲದ ದೈತ್ಯ ಇ ಕಾಮರ್ಸ್ ಸಂಸ್ಥೆಗಳು, ಗ್ರಾಹಕರ ಹಿತದೃಷ್ಟಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕಾಗಿ ಸರ್ಕಾರ ಇ ಕಾಮರ್ಸ್ ಮತ್ತು ಮಾರ್ಕೆಟ್ಪ್ಲೇಸ್ ನಿಯಂತ್ರಣಕ್ಕೆ ಸೂಕ್ತ ನಿಯಮ ಜಾರಿಗೆ ಮುಂದಾಗಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.</p>.<p>ವೆಬಿನಾರ್ ಒಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ದೇಶದ ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ ನೆಲದ ಕಾನೂನು ಮತ್ತು ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವುಗಳನ್ನು ಪಾಲಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.</p>.<p>ಆದರೆ ಕೆಲವೊಂದು ದೊಡ್ಡ ಮಟ್ಟಿನ ಇ ಕಾಮರ್ಸ್ ಸಂಸ್ಥೆಗಳು ದೇಶದಲ್ಲಿ ವ್ಯವಹಾರ ಆರಂಭಿಸುತ್ತವೆ. ಅದಕ್ಕೆ ಹಣ ಮತ್ತು ತೋಳ್ಬಲ ಬಳಕೆ ಮಾಡುವುದು ಸೂಕ್ತವಲ್ಲ, ಬದಲಾಗಿ ಕಾನೂನು ಸರಿಯಾಗಿ ಪಾಲಿಸಬೇಕು ಎಂದು ಸಚಿವರು ಹೇಳಿದ್ದಾರೆ.</p>.<p><a href="https://www.prajavani.net/business/commerce-news/pan-aadhaar-linking-deadline-extended-to-september-30-842356.html" itemprop="url">ಪಾನ್ ಮತ್ತು ಆಧಾರ್ ಜೋಡಣೆ ಗಡುವು ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>