2016ರಲ್ಲಿ ನಡೆದ ನೋಟು ರದ್ದತಿಯ ನಿರ್ಧಾರದಿಂದ ದೊರೆತ ವಿಶ್ವಾಸಾರ್ಹವಾದ ಮಾಹಿತಿ ಆಧರಿಸಿ ಆದಾಯ ತೆರಿಗೆ ಇಲಾಖೆಯು ತೆರಿಗೆ ತಪ್ಪಿಸುವವರ ವಿರುದ್ಧ ನಡೆಸಿದ ಶೋಧ ಮತ್ತು ದಾಳಿಯ ಕಾರ್ಯಾಚರಣೆಯು ಫಲ ನೀಡಿದೆ. ಇದು ನೋಟು ರದ್ದತಿಯ ಸಕಾರಾತ್ಮಕ ಪರಿಣಾಮವಾಗಿದೆ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ವರದಿಯಲ್ಲಿ ತಿಳಿಸಲಾಗಿದೆ.