<figcaption>""</figcaption>.<p><strong>ನವದೆಹಲಿ:</strong> ವಿತ್ತೀಯ ಕೊರತೆ ನಿಯಂತ್ರಿಸಲು ಕೇಂದ್ರೋದ್ಯಮಗಳ ಷೇರು ವಿಕ್ರಯವೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರ ತನ್ನ ಹಣಕಾಸಿನ ಹೊರೆ ತಗ್ಗಿಸಿಕೊಳ್ಳಲು ಈ ಮಾರ್ಗ ಅನುಸರಿಸುತ್ತದೆ.</p>.<p>ಪ್ರತಿ ಬಜೆಟ್ನಲ್ಲಿಯೂ ಷೇರು ವಿಕ್ರಯದಿಂದ ಬಂಡವಾಳ ಸಂಗ್ರಹಿಸುವ ಗುರಿಯನ್ನು ನಿಗದಿ ಮಾಡಲಾಗುತ್ತದೆ. ಆದರೆ, 2010ರಿಂದ ಇಲ್ಲಿಯವರೆಗೆ ಕೇವಲ ಎರಡು ಬಾರಿ ಮಾತ್ರವೇ ಗುರಿ ಮೀರಿ ಬಂಡವಾಳ ಸಂಗ್ರಹವಾಗಿದೆ.</p>.<p>ಕೇಂದ್ರೋದ್ಯಮಗಳಲ್ಲಿ ಹೊಂದಿರುವ ಗರಿಷ್ಠ ಷೇರು ಪಾಲಿನಲ್ಲಿ ಸರ್ಕಾರ ಕೆಲವು ಪಾಲನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುತ್ತದೆ. 2020–21ನೇ ಸಾಲಿನ ಬಜೆಟ್ನಲ್ಲಿ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳಲ್ಲಿ ಕೆಲವು ಪಾಲನ್ನು ಮಾರಾಟ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.</p>.<p>ನಷ್ಟದಲ್ಲಿರುವ ಏರ್ ಇಂಡಿಯಾ (ಎಐ) ವಿಮಾನಯಾನ ಕಂಪನಿಯನ್ನು ಮಾರಾಟ ಮಾಡುವ ಕೇಂದ್ರದ ಯತ್ನಕ್ಕೆ ಸತತ ಹಿನ್ನಡೆಯಾಗಿದೆ.</p>.<p>‘ಎಐ’ನ ಶೇ 76ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ವರ್ಗಾಯಿಸಲು ಸರ್ಕಾರ 2018ರಲ್ಲಿ ಮುಂದಾಗಿತ್ತು. ಷೇರು ಮಾರಾಟದ ಕಠಿಣ ಷರತ್ತುಗಳ ಕಾರಣಕ್ಕೆ ಖರೀದಿಗೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಈಗ ಎರಡನೇ ಪ್ರಯತ್ನದಲ್ಲಿ ಸಂಪೂರ್ಣ (ಶೇ 100) ಖಾಸಗೀಕರಣ ಮಾಡುವ ಉದ್ದೇಶದಿಂದ ಬಿಡ್ ಆಹ್ವಾನಿಸಲಾಗಿದೆ.</p>.<p class="Subhead"><strong>ಷೇರು ವಿಕ್ರಯದ ಕೆಲವು ಮಾರ್ಗಗಳು:</strong></p>.<p><span class="Bullet">* </span>ಸಾರ್ವಜನಿಕರಿಗೆ ಷೇರು ಖರೀದಿ ಆಯ್ಕೆ (ಐಪಿಒ)</p>.<p><span class="Bullet">* </span>ಕೇಂದ್ರೋದ್ಯಮಗಳ ವಿನಿಮಯ ವಹಿವಾಟು ನಿಧಿ (ಸಿಪಿಎಸ್ಇ ಇಟಿಎಫ್)</p>.<p><span class="Bullet">* </span>ಖಾಸಗಿಯವರಿಗೆ ಆಡಳಿತದ ನಿಯಂತ್ರಣದ ಜತೆಗೆ ಶೇ 50ರಷ್ಟು ಅಥವಾ ಅದಕ್ಕಿಂತಲೂ ಅಧಿಕ ಷೇರುಗಳ ಮಾರಾಟ</p>.<p><span class="Bullet">* </span>ಸಂಪೂರ್ಣ ಖಾಸಗೀಕರಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ನವದೆಹಲಿ:</strong> ವಿತ್ತೀಯ ಕೊರತೆ ನಿಯಂತ್ರಿಸಲು ಕೇಂದ್ರೋದ್ಯಮಗಳ ಷೇರು ವಿಕ್ರಯವೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರ ತನ್ನ ಹಣಕಾಸಿನ ಹೊರೆ ತಗ್ಗಿಸಿಕೊಳ್ಳಲು ಈ ಮಾರ್ಗ ಅನುಸರಿಸುತ್ತದೆ.</p>.<p>ಪ್ರತಿ ಬಜೆಟ್ನಲ್ಲಿಯೂ ಷೇರು ವಿಕ್ರಯದಿಂದ ಬಂಡವಾಳ ಸಂಗ್ರಹಿಸುವ ಗುರಿಯನ್ನು ನಿಗದಿ ಮಾಡಲಾಗುತ್ತದೆ. ಆದರೆ, 2010ರಿಂದ ಇಲ್ಲಿಯವರೆಗೆ ಕೇವಲ ಎರಡು ಬಾರಿ ಮಾತ್ರವೇ ಗುರಿ ಮೀರಿ ಬಂಡವಾಳ ಸಂಗ್ರಹವಾಗಿದೆ.</p>.<p>ಕೇಂದ್ರೋದ್ಯಮಗಳಲ್ಲಿ ಹೊಂದಿರುವ ಗರಿಷ್ಠ ಷೇರು ಪಾಲಿನಲ್ಲಿ ಸರ್ಕಾರ ಕೆಲವು ಪಾಲನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುತ್ತದೆ. 2020–21ನೇ ಸಾಲಿನ ಬಜೆಟ್ನಲ್ಲಿ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳಲ್ಲಿ ಕೆಲವು ಪಾಲನ್ನು ಮಾರಾಟ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.</p>.<p>ನಷ್ಟದಲ್ಲಿರುವ ಏರ್ ಇಂಡಿಯಾ (ಎಐ) ವಿಮಾನಯಾನ ಕಂಪನಿಯನ್ನು ಮಾರಾಟ ಮಾಡುವ ಕೇಂದ್ರದ ಯತ್ನಕ್ಕೆ ಸತತ ಹಿನ್ನಡೆಯಾಗಿದೆ.</p>.<p>‘ಎಐ’ನ ಶೇ 76ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ವರ್ಗಾಯಿಸಲು ಸರ್ಕಾರ 2018ರಲ್ಲಿ ಮುಂದಾಗಿತ್ತು. ಷೇರು ಮಾರಾಟದ ಕಠಿಣ ಷರತ್ತುಗಳ ಕಾರಣಕ್ಕೆ ಖರೀದಿಗೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಈಗ ಎರಡನೇ ಪ್ರಯತ್ನದಲ್ಲಿ ಸಂಪೂರ್ಣ (ಶೇ 100) ಖಾಸಗೀಕರಣ ಮಾಡುವ ಉದ್ದೇಶದಿಂದ ಬಿಡ್ ಆಹ್ವಾನಿಸಲಾಗಿದೆ.</p>.<p class="Subhead"><strong>ಷೇರು ವಿಕ್ರಯದ ಕೆಲವು ಮಾರ್ಗಗಳು:</strong></p>.<p><span class="Bullet">* </span>ಸಾರ್ವಜನಿಕರಿಗೆ ಷೇರು ಖರೀದಿ ಆಯ್ಕೆ (ಐಪಿಒ)</p>.<p><span class="Bullet">* </span>ಕೇಂದ್ರೋದ್ಯಮಗಳ ವಿನಿಮಯ ವಹಿವಾಟು ನಿಧಿ (ಸಿಪಿಎಸ್ಇ ಇಟಿಎಫ್)</p>.<p><span class="Bullet">* </span>ಖಾಸಗಿಯವರಿಗೆ ಆಡಳಿತದ ನಿಯಂತ್ರಣದ ಜತೆಗೆ ಶೇ 50ರಷ್ಟು ಅಥವಾ ಅದಕ್ಕಿಂತಲೂ ಅಧಿಕ ಷೇರುಗಳ ಮಾರಾಟ</p>.<p><span class="Bullet">* </span>ಸಂಪೂರ್ಣ ಖಾಸಗೀಕರಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>