<p><strong>ಮಡಿಕೇರಿ</strong>: ಈ ವರ್ಷ ಉಷ್ಣಾಂಶ ಹೆಚ್ಚಿದ್ದು, ಕಾಳುಮೆಣಸಿನ ಇಳುವರಿ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಬಳ್ಳಿಗಳಲ್ಲಿ ಕಾಳು ಕಟ್ಟುವುದು ತಡವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಹೆಚ್ಚಿದೆ.</p>.<p>ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕವು (5.49 ಲಕ್ಷ ಎಕರೆ) ಮೊದಲ ಸ್ಥಾನದಲ್ಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ.</p>.<p>ಉತ್ತಮ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ಆತಂಕದ ಸನ್ನಿವೇಶವಿಲ್ಲ. ಆದರೆ, ಹಲವೆಡೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ, ಕೊಳವೆಬಾವಿಗಳು ಬತ್ತಿದ್ದವು. ತೋಟಗಳಲ್ಲಿದ್ದ ಕೆರೆ–ಕಟ್ಟೆಗಳೂ ಒಣಗಿದ್ದವು. ಸಮರ್ಪಕವಾಗಿ ನೀರು ಹಾಯಿಸದ ಅಂಥ ತೋಟಗಳ ಕಾಳುಮೆಣಸಿನ ಬಳ್ಳಿಗಳಲ್ಲಿ ಕಾಳು ಕಟ್ಟುವಿಕೆ ಕಡಿಮೆಯಾಗಿದೆ.</p>.<p>‘ಬಳ್ಳಿಗಳಿಗೆ ಕಾಡುವ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವುದು ಸೇರಿ ಹಲವು ಪ್ರಯತ್ನ ಮಾಡಿದ್ದೆವು. ಆದರೆ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಇಳುವರಿ ಇಳಿಮುಖವಾಗಿದೆ’ ಎಂದು ಬಲ್ಲಮಾವಟಿ ಗ್ರಾಮದ ಕೃಷಿಕ ಹೊಸೊಕ್ಲು ಮುತ್ತಪ್ಪ ನೋವು ತೋಡಿಕೊಂಡರು.</p>.<p>‘ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿತ್ತು. ಹಲವು ವಾರ ಮಳೆಯಾಗಲಿಲ್ಲ. ಲಭ್ಯ ನೀರು ಕೂಡ ಬೆಳೆಗಾರರಿಗೆ ಸಾಕಾಗಲಿಲ್ಲ’ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.</p>.<p>‘ಕೊಡಗಷ್ಟೇ ಅಲ್ಲದೆ ಬೇಸಿಗೆಯಲ್ಲಿ ನೀರಿನ ಕೊರತೆ ತಲೆದೋರಿದ ಪ್ರದೇಶಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಎಸ್.ಜೆ. ಅಂಕೇಗೌಡ ಹೇಳುತ್ತಾರೆ.</p>.<p> ಕಾಳು ಕಟ್ಟದಿರಲು ಉಷ್ಣಾಂಶ ಹೆಚ್ಚಳವೇ ಕಾರಣ ನೀರು–ಮಣ್ಣು ಸಂರಕ್ಷಿಸಿಕೊಳ್ಳುವುದೇ ಏಕೈಕ ದಾರಿ</p>.<p> ಅಂಕಿಅಂಶಗಳು ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳು ರಾಜ್ಯ;ವಿಸ್ತೀರ್ಣ (ಎಕರೆಗಳಲ್ಲಿ) ಕರ್ನಾಟಕ;5.49 ಲಕ್ಷ ಕೇರಳ;1.81 ಲಕ್ಷ ತಮಿಳುನಾಡು;18906 *** ರಾಜ್ಯದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಮೊದಲ 3 ಜಿಲ್ಲೆಗಳು ಜಿಲ್ಲೆ;ವಿಸ್ತೀರ್ಣ (ಎಕರೆಗಳಲ್ಲಿ) ಕೊಡಗು;2.42 ಲಕ್ಷ ಚಿಕ್ಕಮಗಳೂರು;1.21 ಲಕ್ಷ ಹಾಸನ;86304 *** (ಆಧಾರ; ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಈ ವರ್ಷ ಉಷ್ಣಾಂಶ ಹೆಚ್ಚಿದ್ದು, ಕಾಳುಮೆಣಸಿನ ಇಳುವರಿ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಬಳ್ಳಿಗಳಲ್ಲಿ ಕಾಳು ಕಟ್ಟುವುದು ತಡವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಹೆಚ್ಚಿದೆ.</p>.<p>ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕವು (5.49 ಲಕ್ಷ ಎಕರೆ) ಮೊದಲ ಸ್ಥಾನದಲ್ಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ.</p>.<p>ಉತ್ತಮ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ಆತಂಕದ ಸನ್ನಿವೇಶವಿಲ್ಲ. ಆದರೆ, ಹಲವೆಡೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ, ಕೊಳವೆಬಾವಿಗಳು ಬತ್ತಿದ್ದವು. ತೋಟಗಳಲ್ಲಿದ್ದ ಕೆರೆ–ಕಟ್ಟೆಗಳೂ ಒಣಗಿದ್ದವು. ಸಮರ್ಪಕವಾಗಿ ನೀರು ಹಾಯಿಸದ ಅಂಥ ತೋಟಗಳ ಕಾಳುಮೆಣಸಿನ ಬಳ್ಳಿಗಳಲ್ಲಿ ಕಾಳು ಕಟ್ಟುವಿಕೆ ಕಡಿಮೆಯಾಗಿದೆ.</p>.<p>‘ಬಳ್ಳಿಗಳಿಗೆ ಕಾಡುವ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವುದು ಸೇರಿ ಹಲವು ಪ್ರಯತ್ನ ಮಾಡಿದ್ದೆವು. ಆದರೆ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಇಳುವರಿ ಇಳಿಮುಖವಾಗಿದೆ’ ಎಂದು ಬಲ್ಲಮಾವಟಿ ಗ್ರಾಮದ ಕೃಷಿಕ ಹೊಸೊಕ್ಲು ಮುತ್ತಪ್ಪ ನೋವು ತೋಡಿಕೊಂಡರು.</p>.<p>‘ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿತ್ತು. ಹಲವು ವಾರ ಮಳೆಯಾಗಲಿಲ್ಲ. ಲಭ್ಯ ನೀರು ಕೂಡ ಬೆಳೆಗಾರರಿಗೆ ಸಾಕಾಗಲಿಲ್ಲ’ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.</p>.<p>‘ಕೊಡಗಷ್ಟೇ ಅಲ್ಲದೆ ಬೇಸಿಗೆಯಲ್ಲಿ ನೀರಿನ ಕೊರತೆ ತಲೆದೋರಿದ ಪ್ರದೇಶಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಎಸ್.ಜೆ. ಅಂಕೇಗೌಡ ಹೇಳುತ್ತಾರೆ.</p>.<p> ಕಾಳು ಕಟ್ಟದಿರಲು ಉಷ್ಣಾಂಶ ಹೆಚ್ಚಳವೇ ಕಾರಣ ನೀರು–ಮಣ್ಣು ಸಂರಕ್ಷಿಸಿಕೊಳ್ಳುವುದೇ ಏಕೈಕ ದಾರಿ</p>.<p> ಅಂಕಿಅಂಶಗಳು ದೇಶದಲ್ಲಿ ಕಾಳುಮೆಣಸು ಬೆಳೆಯುವ ರಾಜ್ಯಗಳು ರಾಜ್ಯ;ವಿಸ್ತೀರ್ಣ (ಎಕರೆಗಳಲ್ಲಿ) ಕರ್ನಾಟಕ;5.49 ಲಕ್ಷ ಕೇರಳ;1.81 ಲಕ್ಷ ತಮಿಳುನಾಡು;18906 *** ರಾಜ್ಯದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಮೊದಲ 3 ಜಿಲ್ಲೆಗಳು ಜಿಲ್ಲೆ;ವಿಸ್ತೀರ್ಣ (ಎಕರೆಗಳಲ್ಲಿ) ಕೊಡಗು;2.42 ಲಕ್ಷ ಚಿಕ್ಕಮಗಳೂರು;1.21 ಲಕ್ಷ ಹಾಸನ;86304 *** (ಆಧಾರ; ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>