<p><strong>ವಿಜಯಪುರ: </strong>ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಎರಡೂ ಕೈಕೊಟ್ಟಿವೆ. ಮಳೆ ಇಲ್ಲದೇ ಕೊಳವೆಬಾವಿಗಳು ಬತ್ತುತ್ತಿವೆ. ಸಕಾಲಕ್ಕೆ ಸಾಕಷ್ಟು ನೀರು ಸಿಗದೆ ನಿಂಬೆಗಿಡಗಳಲ್ಲಿನ ಹೂವು– ಹೀಚು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಅಕ್ಟೋಬರ್ ಆರಂಭದಲ್ಲಿ ನಿಂಬೆ ಗಿಡಗಳು ಹೂವು ಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ, ನೀರಿಲ್ಲದೆ ತಿಂಗಳ ಕೊನೆಯಲ್ಲಿ ಅರ್ಧಕ್ಕೂ ಹೆಚ್ಚು ಹೂವು ಉದುರಿವೆ.</p>.<p><strong>ಗಿಡ ಉಳಿದರೆ ಸಾಕು:</strong> ‘ನಿಂಬೆ ವರ್ಷವಿಡೀ ಸಿಗುವ ಬೆಳೆ. ಬೇಸಿಗೆಯಲ್ಲಿ ದೊರಕುವ ಹಣ್ಣುಗಳೇ ಆದಾಯ ತರುವಂಥವು. ಉಳಿದ ಅವಧಿಯಲ್ಲಿನ ಬೆಳೆಯು ಖರ್ಚಿಗೇ ಸರಿಯಾಗಲಿದೆ. ಇದರಲ್ಲೇ ಮನೆಯನ್ನು ನಿಭಾಯಿಸುತ್ತಿದ್ದೆವು. ದೀಪಾವಳಿ, ಎಳ್ಳಮಾವಾಸ್ಯೆ ಆಸುಪಾಸು ನಿಂಬೆ ಗಿಡಗಳು ಹೊಸದಾಗಿ ಚಿಗುರಿ, ಹೂವು ಬಿಡುತ್ತವೆ. ಈ ಹೂವೇ ಬೇಸಿಗೆ ಬೆಳೆ. ಇದೇ ನಮ್ಮ ಜೀವನಾಧಾರ. ಆದರೆ ಈ ಬಾರಿ, ಈಗಾಗಲೇ ಅರ್ಧಕ್ಕರ್ಧ ಹೂವು ಉದುರಿವೆ. ಇದೀಗ ಹೀಚು ಉದುರಲಾರಂಭಿಸಿದೆ’ ಎಂದು ತಾಂಬಾದ ನಿಂಬೆ ಬೆಳೆಗಾರ ಅಡಿವೆಪ್ಪ ಶಿವಪ್ಪ ರೊಟ್ಟಿ ಹೇಳಿದರು.</p>.<p>‘ವಾರಕ್ಕೆ, ಗಿಡವೊಂದಕ್ಕೆ ಕನಿಷ್ಠ 500 ಲೀಟರ್ ನೀರುಣಿಸಿದರೆ ಭರ್ಜರಿ ಫಸಲು ಸಿಗಲಿದೆ. ಆದರೆ, ಈಗ ಕೇವಲ 100 ಲೀಟರ್ ನೀರುಣಿಸುತ್ತಿದ್ದೇವೆ. ಬೇಸಿಗೆ ಉತ್ಪನ್ನ ಪಡೆಯುವ ಆಸೆ ಕೈ ಬಿಟ್ಟಿದ್ದೇವೆ. ಈ ವರ್ಷ ಗಿಡ ಉಳಿಸಿಕೊಂಡರೆ ಸಾಕು ಎಂದು ಹರಸಾಹಸ ನಡೆಸಿದ್ದೇವೆ’ ಎಂದು ಅವರು ಹೇಳಿದರು.</p>.<p>‘ನೀರು ಕಡಿಮೆಯಾಗಿ, ‘ಸುರಳಿ ಪೂಚಿ’ ರೋಗ ಉಲ್ಬಣಿಸಿದೆ. ಇದರಿಂದ ಬಹುತೇಕ ಗಿಡಗಳಲ್ಲಿ ಹೂವು ಬಿಟ್ಟೇ ಇಲ್ಲ. ಔಷಧಿ ಸಿಂಪಡಿಸಿದರೂ ಪ್ರಯೋಜನ ಸಿಗದಾಗಿದೆ’ ಎಂದು ತಾಂಬಾ ಗ್ರಾಮದ ರೈತ ಬೀರಪ್ಪ ವಗ್ಗಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p><strong>ಇಳುವರಿಗೆ ಹೊಡೆತ</strong><br />‘ನೀರಿನ ಕೊರತೆಯಿಂದ ನಿಂಬೆ ಗಿಡದಲ್ಲಿನ ಹೂವು ಉದುರುತ್ತಿದೆ. ಇದು ವಾರ್ಷಿಕ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ.</p>.<p>ವಿಜಯಪುರ ಜಿಲ್ಲೆ ರಾಜ್ಯದಲ್ಲಿನ ನಿಂಬೆ ಕಣಜ. ರಾಜ್ಯದಲ್ಲಿ ಬೆಳೆಯುವ ನಿಂಬೆಯಲ್ಲಿ ಅರ್ಧಕ್ಕೂ ಹೆಚ್ಚು ಜಿಲ್ಲೆಯದೇ ಪಾಲು. ಇಂಡಿ ತಾಲ್ಲೂಕು ಒಂದರಲ್ಲೇ ಹೆಚ್ಚಿನ ಪ್ರಮಾಣದ ಬೆಳೆಯಿದೆ.</p>.<p>ಅಂದಾಜಿನ ಪ್ರಕಾರ ವಾರ್ಷಿಕವಾಗಿ ಜಿಲ್ಲೆಯೊಂದರಲ್ಲೇ 1.80 ಲಕ್ಷ ಟನ್ ನಿಂಬೆ ಬೆಳೆಯಲಾಗುತ್ತದೆ. ಆದರೆ ಈ ಬಾರಿಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿಯಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>*<br />ನಿಂಬೆ ಗಿಡದಲ್ಲಿನ ಹೂವು–ಹೀಚು ಉದುರುವುದು ಹೆಚ್ಚುತ್ತಿದೆ. ಇದು, ನಮ್ಮ ಬೇಸಿಗೆ ಬೆಳೆಯ ಕನಸನ್ನೇ ಕಮರಿಸಿದೆ.<br /><em><strong>–ಅಡಿವೆಪ್ಪ ಶಿವಪ್ಪ ರೊಟ್ಟಿ, ನಿಂಬೆ ಬೆಳೆಗಾರ</strong></em></p>.<p><em><strong>*</strong></em><br />ಇದೇ ಪರಿಸ್ಥಿತಿ ಮುಂದುವರೆದರೆ ನಿಂಬೆ ಸಂಪೂರ್ಣ ನಾಶವಾಗುವ ಭಯ ಕಾಡ್ತಿದೆ.<br /><em><strong>–ಮಹಾದೇವ ಮಸಳಿ, ನಿಂಬೆ ಬೆಳೆಗಾರ</strong></em></p>.<p><strong>ಬೆಳೆಯ ಚಿತ್ರಣ<br />* 7,150 ಹೆಕ್ಟೇರ್ನಲ್ಲಿ ಬೆಳೆ<br />* 8000 ರಿಂದ 9000 ಬೆಳೆಗಾರರು<br />* ಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿತ<br />* 1 ಎಕರೆಗೆ 10 ಟನ್ ಸಹಜ ಇಳುವರಿ<br />* 6 ರಿಂದ 7 ಟನ್ ಇಳುವರಿ ಪ್ರಸ್ತುತ ಬೇಸಿಗೆಯಲ್ಲಿ<br />(ಆಧಾರ: ಜಿಲ್ಲಾ ತೋಟಗಾರಿಕೆ ಇಲಾಖೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಎರಡೂ ಕೈಕೊಟ್ಟಿವೆ. ಮಳೆ ಇಲ್ಲದೇ ಕೊಳವೆಬಾವಿಗಳು ಬತ್ತುತ್ತಿವೆ. ಸಕಾಲಕ್ಕೆ ಸಾಕಷ್ಟು ನೀರು ಸಿಗದೆ ನಿಂಬೆಗಿಡಗಳಲ್ಲಿನ ಹೂವು– ಹೀಚು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಅಕ್ಟೋಬರ್ ಆರಂಭದಲ್ಲಿ ನಿಂಬೆ ಗಿಡಗಳು ಹೂವು ಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ, ನೀರಿಲ್ಲದೆ ತಿಂಗಳ ಕೊನೆಯಲ್ಲಿ ಅರ್ಧಕ್ಕೂ ಹೆಚ್ಚು ಹೂವು ಉದುರಿವೆ.</p>.<p><strong>ಗಿಡ ಉಳಿದರೆ ಸಾಕು:</strong> ‘ನಿಂಬೆ ವರ್ಷವಿಡೀ ಸಿಗುವ ಬೆಳೆ. ಬೇಸಿಗೆಯಲ್ಲಿ ದೊರಕುವ ಹಣ್ಣುಗಳೇ ಆದಾಯ ತರುವಂಥವು. ಉಳಿದ ಅವಧಿಯಲ್ಲಿನ ಬೆಳೆಯು ಖರ್ಚಿಗೇ ಸರಿಯಾಗಲಿದೆ. ಇದರಲ್ಲೇ ಮನೆಯನ್ನು ನಿಭಾಯಿಸುತ್ತಿದ್ದೆವು. ದೀಪಾವಳಿ, ಎಳ್ಳಮಾವಾಸ್ಯೆ ಆಸುಪಾಸು ನಿಂಬೆ ಗಿಡಗಳು ಹೊಸದಾಗಿ ಚಿಗುರಿ, ಹೂವು ಬಿಡುತ್ತವೆ. ಈ ಹೂವೇ ಬೇಸಿಗೆ ಬೆಳೆ. ಇದೇ ನಮ್ಮ ಜೀವನಾಧಾರ. ಆದರೆ ಈ ಬಾರಿ, ಈಗಾಗಲೇ ಅರ್ಧಕ್ಕರ್ಧ ಹೂವು ಉದುರಿವೆ. ಇದೀಗ ಹೀಚು ಉದುರಲಾರಂಭಿಸಿದೆ’ ಎಂದು ತಾಂಬಾದ ನಿಂಬೆ ಬೆಳೆಗಾರ ಅಡಿವೆಪ್ಪ ಶಿವಪ್ಪ ರೊಟ್ಟಿ ಹೇಳಿದರು.</p>.<p>‘ವಾರಕ್ಕೆ, ಗಿಡವೊಂದಕ್ಕೆ ಕನಿಷ್ಠ 500 ಲೀಟರ್ ನೀರುಣಿಸಿದರೆ ಭರ್ಜರಿ ಫಸಲು ಸಿಗಲಿದೆ. ಆದರೆ, ಈಗ ಕೇವಲ 100 ಲೀಟರ್ ನೀರುಣಿಸುತ್ತಿದ್ದೇವೆ. ಬೇಸಿಗೆ ಉತ್ಪನ್ನ ಪಡೆಯುವ ಆಸೆ ಕೈ ಬಿಟ್ಟಿದ್ದೇವೆ. ಈ ವರ್ಷ ಗಿಡ ಉಳಿಸಿಕೊಂಡರೆ ಸಾಕು ಎಂದು ಹರಸಾಹಸ ನಡೆಸಿದ್ದೇವೆ’ ಎಂದು ಅವರು ಹೇಳಿದರು.</p>.<p>‘ನೀರು ಕಡಿಮೆಯಾಗಿ, ‘ಸುರಳಿ ಪೂಚಿ’ ರೋಗ ಉಲ್ಬಣಿಸಿದೆ. ಇದರಿಂದ ಬಹುತೇಕ ಗಿಡಗಳಲ್ಲಿ ಹೂವು ಬಿಟ್ಟೇ ಇಲ್ಲ. ಔಷಧಿ ಸಿಂಪಡಿಸಿದರೂ ಪ್ರಯೋಜನ ಸಿಗದಾಗಿದೆ’ ಎಂದು ತಾಂಬಾ ಗ್ರಾಮದ ರೈತ ಬೀರಪ್ಪ ವಗ್ಗಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p><strong>ಇಳುವರಿಗೆ ಹೊಡೆತ</strong><br />‘ನೀರಿನ ಕೊರತೆಯಿಂದ ನಿಂಬೆ ಗಿಡದಲ್ಲಿನ ಹೂವು ಉದುರುತ್ತಿದೆ. ಇದು ವಾರ್ಷಿಕ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ.</p>.<p>ವಿಜಯಪುರ ಜಿಲ್ಲೆ ರಾಜ್ಯದಲ್ಲಿನ ನಿಂಬೆ ಕಣಜ. ರಾಜ್ಯದಲ್ಲಿ ಬೆಳೆಯುವ ನಿಂಬೆಯಲ್ಲಿ ಅರ್ಧಕ್ಕೂ ಹೆಚ್ಚು ಜಿಲ್ಲೆಯದೇ ಪಾಲು. ಇಂಡಿ ತಾಲ್ಲೂಕು ಒಂದರಲ್ಲೇ ಹೆಚ್ಚಿನ ಪ್ರಮಾಣದ ಬೆಳೆಯಿದೆ.</p>.<p>ಅಂದಾಜಿನ ಪ್ರಕಾರ ವಾರ್ಷಿಕವಾಗಿ ಜಿಲ್ಲೆಯೊಂದರಲ್ಲೇ 1.80 ಲಕ್ಷ ಟನ್ ನಿಂಬೆ ಬೆಳೆಯಲಾಗುತ್ತದೆ. ಆದರೆ ಈ ಬಾರಿಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿಯಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>*<br />ನಿಂಬೆ ಗಿಡದಲ್ಲಿನ ಹೂವು–ಹೀಚು ಉದುರುವುದು ಹೆಚ್ಚುತ್ತಿದೆ. ಇದು, ನಮ್ಮ ಬೇಸಿಗೆ ಬೆಳೆಯ ಕನಸನ್ನೇ ಕಮರಿಸಿದೆ.<br /><em><strong>–ಅಡಿವೆಪ್ಪ ಶಿವಪ್ಪ ರೊಟ್ಟಿ, ನಿಂಬೆ ಬೆಳೆಗಾರ</strong></em></p>.<p><em><strong>*</strong></em><br />ಇದೇ ಪರಿಸ್ಥಿತಿ ಮುಂದುವರೆದರೆ ನಿಂಬೆ ಸಂಪೂರ್ಣ ನಾಶವಾಗುವ ಭಯ ಕಾಡ್ತಿದೆ.<br /><em><strong>–ಮಹಾದೇವ ಮಸಳಿ, ನಿಂಬೆ ಬೆಳೆಗಾರ</strong></em></p>.<p><strong>ಬೆಳೆಯ ಚಿತ್ರಣ<br />* 7,150 ಹೆಕ್ಟೇರ್ನಲ್ಲಿ ಬೆಳೆ<br />* 8000 ರಿಂದ 9000 ಬೆಳೆಗಾರರು<br />* ಶೇ 30ರಿಂದ ಶೇ 40ರಷ್ಟು ಇಳುವರಿ ಕುಸಿತ<br />* 1 ಎಕರೆಗೆ 10 ಟನ್ ಸಹಜ ಇಳುವರಿ<br />* 6 ರಿಂದ 7 ಟನ್ ಇಳುವರಿ ಪ್ರಸ್ತುತ ಬೇಸಿಗೆಯಲ್ಲಿ<br />(ಆಧಾರ: ಜಿಲ್ಲಾ ತೋಟಗಾರಿಕೆ ಇಲಾಖೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>