ಅರವಿಂದ ಅವರ ವಿಶ್ಲೇಷಣೆಯಲ್ಲಿ ಸೇವಾ ವಲಯ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನಿರ್ಲಕ್ಷಿಸಲಾಗಿದೆ. ಖಾಸಗಿ ಸಂಸ್ಥೆ ‘ಸಿಎಂಐಇ’ನಲ್ಲಿನ ಕುರುಡು ವಿಶ್ವಾಸ ಆಧರಿಸಿದೆ. ದೇಶಿ ಜಿಡಿಪಿ ಅಂದಾಜು ವಿಧಾನವು ಜಾಗತಿಕ ಗುಣಮಟ್ಟದ್ದಾಗಿದೆ ಎಂದು ಬಿಬೆಕ್ ಡೆಬ್ರೊಯ್, ರಥಿನ್ ರಾಯ್, ಸುರ್ಜಿತ್ ಭಲ್ಲಾ, ಚರಣ್ ಸಿಂಗ್ ಮತ್ತು ಅರವಿಂದ ವಿರ್ಮಾನಿ ಅವರನ್ನು ಒಳಗೊಂಡಿರುವ ಸಮಿತಿಯು ತಿಳಿಸಿದೆ.