<p><strong>ಮಂಗಳೂರು:</strong> ಕೊರೊನಾ ಸೋಂಕಿನ ವಿರುದ್ಧದ ಹೋರಾಟದ ಮಧ್ಯೆ ದೇಶದಲ್ಲಿ ಇಂಧನ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಮೇ ಮೊದಲ ವಾರದಲ್ಲಿ ದೇಶದ ಭೂಗತ ಕಚ್ಚಾತೈಲ ಸಂಗ್ರಹಾಗಾರಗ<br />ಳನ್ನು ಭರ್ತಿ ಮಾಡಲು ಮುಂದಾಗಿದೆ.</p>.<p>ಜಾಗತಿಕವಾಗಿ ಸದ್ಯಕ್ಕೆ ತೈಲ ಬೆಲೆ ಕುಸಿದಿದ್ದು, ಈ ಸಂದರ್ಭದಲ್ಲಿಯೇ ಲಭ್ಯ ವಿರುವ ಕಚ್ಚಾತೈಲವನ್ನು ಸಂಗ್ರಹಾಗಾರಗ ಳಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.</p>.<p>ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಮಾರುಕಟ್ಟೆಯಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಲಾಗುತ್ತಿದ್ದು, ರಾಜ್ಯದ ಮಂಗಳೂರು, ಉಡುಪಿಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ತೈಲ ಸಂಗ್ರಹಾಗಾರಗಳನ್ನು ಭರ್ತಿ ಮಾಡಲಾಗುತ್ತಿದೆ.</p>.<p>ಈಗಾಗಲೇ 10 ಲಕ್ಷ ಬ್ಯಾರಲ್ (1.42 ಲಕ್ಷ ಟನ್) ಕಚ್ಚಾತೈಲವನ್ನು ಹೊತ್ತ ಮೊದಲ ಹಡಗು ಈ ವಾರದ ಆರಂಭದಲ್ಲಿ ಯುಎಇಯಿಂದ ಬಂದಿದ್ದು, ಇಲ್ಲಿನ ಎನ್ಎಂಪಿಟಿ ತಲುಪಿದೆ.</p>.<p>ಈ ಕಚ್ಚಾತೈಲವನ್ನು ನಗರದ ಪೆರ್ಮುದೆಯಲ್ಲಿರುವ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಗಿದೆ.ಮಂಗಳೂರಿನ ಪೆರ್ಮುದೆಯ ತೈಲ ಸಂಗ್ರಹಾಗಾರದಲ್ಲಿ 15 ಲಕ್ಷ ಟನ್ (1.10 ಕೋಟಿ ಬ್ಯಾರಲ್) ಹಾಗೂ ಪಾದೂರು ಸಂಗ್ರಹಾಗಾರದಲ್ಲಿ 25 ಲಕ್ಷ ಟನ್ (1.83 ಕೋಟಿ ಬ್ಯಾರಲ್) ಕಚ್ಚಾತೈಲ ಸಂಗ್ರಹಿಸಬಹುದಾಗಿದೆ.</p>.<p>‘ಕೋವಿಡ್ -19 ಸವಾಲಿನ ಮಧ್ಯೆ ಭಾರತದ ಇಂಧನ ಸುರಕ್ಷತೆಯನ್ನು ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದ್ದು, ಮಂಗಳೂರು ಮತ್ತು ಪಾದೂರು ತೈಲ ಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ತುಂಬಲು, ಕಡಿಮೆ ಬೆಲೆಗೆ ಖರೀದಿಸಿದ ಕಚ್ಚಾತೈಲವನ್ನು ಹೊತ್ತ ಹಡಗುಗಳು ಸಾಲುಗಟ್ಟಿ ನಿಂತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕೊರೊನಾ ಸೋಂಕಿನ ವಿರುದ್ಧದ ಹೋರಾಟದ ಮಧ್ಯೆ ದೇಶದಲ್ಲಿ ಇಂಧನ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಮೇ ಮೊದಲ ವಾರದಲ್ಲಿ ದೇಶದ ಭೂಗತ ಕಚ್ಚಾತೈಲ ಸಂಗ್ರಹಾಗಾರಗ<br />ಳನ್ನು ಭರ್ತಿ ಮಾಡಲು ಮುಂದಾಗಿದೆ.</p>.<p>ಜಾಗತಿಕವಾಗಿ ಸದ್ಯಕ್ಕೆ ತೈಲ ಬೆಲೆ ಕುಸಿದಿದ್ದು, ಈ ಸಂದರ್ಭದಲ್ಲಿಯೇ ಲಭ್ಯ ವಿರುವ ಕಚ್ಚಾತೈಲವನ್ನು ಸಂಗ್ರಹಾಗಾರಗ ಳಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.</p>.<p>ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಮಾರುಕಟ್ಟೆಯಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಲಾಗುತ್ತಿದ್ದು, ರಾಜ್ಯದ ಮಂಗಳೂರು, ಉಡುಪಿಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ತೈಲ ಸಂಗ್ರಹಾಗಾರಗಳನ್ನು ಭರ್ತಿ ಮಾಡಲಾಗುತ್ತಿದೆ.</p>.<p>ಈಗಾಗಲೇ 10 ಲಕ್ಷ ಬ್ಯಾರಲ್ (1.42 ಲಕ್ಷ ಟನ್) ಕಚ್ಚಾತೈಲವನ್ನು ಹೊತ್ತ ಮೊದಲ ಹಡಗು ಈ ವಾರದ ಆರಂಭದಲ್ಲಿ ಯುಎಇಯಿಂದ ಬಂದಿದ್ದು, ಇಲ್ಲಿನ ಎನ್ಎಂಪಿಟಿ ತಲುಪಿದೆ.</p>.<p>ಈ ಕಚ್ಚಾತೈಲವನ್ನು ನಗರದ ಪೆರ್ಮುದೆಯಲ್ಲಿರುವ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಗಿದೆ.ಮಂಗಳೂರಿನ ಪೆರ್ಮುದೆಯ ತೈಲ ಸಂಗ್ರಹಾಗಾರದಲ್ಲಿ 15 ಲಕ್ಷ ಟನ್ (1.10 ಕೋಟಿ ಬ್ಯಾರಲ್) ಹಾಗೂ ಪಾದೂರು ಸಂಗ್ರಹಾಗಾರದಲ್ಲಿ 25 ಲಕ್ಷ ಟನ್ (1.83 ಕೋಟಿ ಬ್ಯಾರಲ್) ಕಚ್ಚಾತೈಲ ಸಂಗ್ರಹಿಸಬಹುದಾಗಿದೆ.</p>.<p>‘ಕೋವಿಡ್ -19 ಸವಾಲಿನ ಮಧ್ಯೆ ಭಾರತದ ಇಂಧನ ಸುರಕ್ಷತೆಯನ್ನು ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದ್ದು, ಮಂಗಳೂರು ಮತ್ತು ಪಾದೂರು ತೈಲ ಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ತುಂಬಲು, ಕಡಿಮೆ ಬೆಲೆಗೆ ಖರೀದಿಸಿದ ಕಚ್ಚಾತೈಲವನ್ನು ಹೊತ್ತ ಹಡಗುಗಳು ಸಾಲುಗಟ್ಟಿ ನಿಂತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>