ಸಗಟುದಾರರಿಗೆ 200 ಟನ್ಗಳ ಸಂಗ್ರಹ ಮಿತಿ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ 5 ಟನ್ ಸಂಗ್ರಹದ ಮಿತಿಯನ್ನು ವಿಧಿಸಲಾಗಿದೆ ಎಂದು ತಿಳಿಸಿದೆ. ಸಂಗ್ರಹ ಮಿತಿ ಮೀರಿದರೆ ಗ್ರಾಹಕರ ವ್ಯವಹಾರಗಳ ಆನ್ಲೈನ್ ಪೋರ್ಟಲ್ನಲ್ಲಿ ವಿವರ ನೀಡಬೇಕು ಎಂದು ಸೂಚಿಸಿದೆ. ಜತೆಗೆ, 30 ದಿನಗಳ ಒಳಗೆ ನಿಗದಿಪಡಿಸಿದ ಮಿತಿ ಉಳಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬೇಳೆ ಕಾಳುಗಳ ಬೆಲೆ ಹೆಚ್ಚುತ್ತಿರುವುದರಿಂದ ಸಚಿವಾಲಯ ಈ ಕ್ರಮಕೈಗೊಂಡಿದೆ.