<p><strong>ನವದೆಹಲಿ:</strong> ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜಿಎಸ್ಟಿ ಸಂಗ್ರಹ ₹ 1 ಲಕ್ಷ ಕೋಟಿಯನ್ನೂ ದಾಟುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.</p>.<p>ಹಬ್ಬದ ಸಂದರ್ಭದಲ್ಲಿನ ಬೇಡಿಕೆ ಹಾಗೂ ತೆರಿಗೆ ವಂಚನೆಗೆರೆವಿನ್ಯೂ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಕಂಡುಬರಲಿದೆ ಎಂದು ಹೇಳಿದ್ದಾರೆ.</p>.<p>ಸೆಪ್ಟೆಂಬರ್ನಲ್ಲಿ ವರಮಾನ ಸಂಗ್ರಹ ₹ 94,442 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ₹ 1 ಲಕ್ಷ ಕೋಟಿಯ ಗಡಿ ದಾಟಬಹುದು ಎನ್ನುವುದು ಅಧಿಕಾರಿಗಳ ನಿರೀಕ್ಷೆಯಾಗಿದೆ.</p>.<p>‘ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿಗೆ ಖರೀದಿಸುತ್ತಾರೆ. ಕಂಪನಿಗಳು ಸಹ ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ರಿಯಾಯ್ತಿ ಕೊಡುಗೆಗಳನ್ನು ನೀಡುತ್ತವೆ. ಇದರಿಂದ ಹೆಚ್ಚಿನ ವರಮಾನ ಸಂಗ್ರಹವಾಗಲಿದೆ’ ಎಂದು ಲಕ್ಷ್ಮಿಕುಮಾರನ್ ಆ್ಯಂಡ್ ಶ್ರೀಧರನ್ ಸಂಸ್ಥೆಯ ಪಾಲುದಾರ ಎಲ್. ಬದರಿ ನಾರಾಯಣನ್ ಹೇಳಿದ್ದಾರೆ.</p>.<p>‘ಸರ್ಕಾರದ ವೆಚ್ಚದ ಪ್ರಮಾಣ ತಗ್ಗಿಸಲು,ವರಮಾನ ಸಂಗ್ರಹ ಹೆಚ್ಚಿಸುವ ಮೂಲಕ ವಿತ್ತೀಯ ಕೊರತೆ ನಿಯಂತ್ರಿಸುವುದು ಉತ್ತಮ ಮಾರ್ಗವಾಗಿದೆ’ ಎಂದು ಎಎಂಆರ್ಜಿ ಆ್ಯಂಡ್ ಅಸೋಸಿಯೇಟ್ಸ್ನ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.</p>.<p><strong>‘ವಿಪತ್ತು ತೆರಿಗೆ: ಸೂಕ್ತ ಅಲ್ಲ’:</strong>ಜಿಎಸ್ಟಿಯಲ್ಲಿ ಯಾವುದೇ ರೀತಿಯವಿಪತ್ತು ತೆರಿಗೆ ಅಥವಾ ಸೆಸ್ ವಿಧಿಸುವುದು ಸಮಂಜಸವಲ್ಲ. ಅದರಿಂದ ಜಿಎಸ್ಟಿ ಆಶಯಕ್ಕೆ ದಕ್ಕೆಯಾಗಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಐಎಟಿ) ಹೇಳಿದೆ.</p>.<p>ಈ ನಿರ್ಧಾರ ಒಂದು ತೆರಿಗೆ ಒಂದು ದೇಶ ಎನ್ನುವ ಮೂಲತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಕೇರಳಕ್ಕೆ ನೆರವು ನೀಡಲು ಬೇರೆ ಮಾರ್ಗ ಪರಿಗಣಿಸುವಂತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.</p>.<p>ತಂತ್ರಾಂಶದಲ್ಲಿಯೂ ಕೆಲವು ಬದಲಾವಣೆಗಳನ್ನು ತರಬೇಕಾಗಿ ಬರಲಿದ್ದು, ಇದರಿಂದ ಸರ್ಕಾರ ಮತ್ತು ವರ್ತಕರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜಿಎಸ್ಟಿ ಸಂಗ್ರಹ ₹ 1 ಲಕ್ಷ ಕೋಟಿಯನ್ನೂ ದಾಟುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.</p>.<p>ಹಬ್ಬದ ಸಂದರ್ಭದಲ್ಲಿನ ಬೇಡಿಕೆ ಹಾಗೂ ತೆರಿಗೆ ವಂಚನೆಗೆರೆವಿನ್ಯೂ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಕಂಡುಬರಲಿದೆ ಎಂದು ಹೇಳಿದ್ದಾರೆ.</p>.<p>ಸೆಪ್ಟೆಂಬರ್ನಲ್ಲಿ ವರಮಾನ ಸಂಗ್ರಹ ₹ 94,442 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ₹ 1 ಲಕ್ಷ ಕೋಟಿಯ ಗಡಿ ದಾಟಬಹುದು ಎನ್ನುವುದು ಅಧಿಕಾರಿಗಳ ನಿರೀಕ್ಷೆಯಾಗಿದೆ.</p>.<p>‘ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿಗೆ ಖರೀದಿಸುತ್ತಾರೆ. ಕಂಪನಿಗಳು ಸಹ ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ರಿಯಾಯ್ತಿ ಕೊಡುಗೆಗಳನ್ನು ನೀಡುತ್ತವೆ. ಇದರಿಂದ ಹೆಚ್ಚಿನ ವರಮಾನ ಸಂಗ್ರಹವಾಗಲಿದೆ’ ಎಂದು ಲಕ್ಷ್ಮಿಕುಮಾರನ್ ಆ್ಯಂಡ್ ಶ್ರೀಧರನ್ ಸಂಸ್ಥೆಯ ಪಾಲುದಾರ ಎಲ್. ಬದರಿ ನಾರಾಯಣನ್ ಹೇಳಿದ್ದಾರೆ.</p>.<p>‘ಸರ್ಕಾರದ ವೆಚ್ಚದ ಪ್ರಮಾಣ ತಗ್ಗಿಸಲು,ವರಮಾನ ಸಂಗ್ರಹ ಹೆಚ್ಚಿಸುವ ಮೂಲಕ ವಿತ್ತೀಯ ಕೊರತೆ ನಿಯಂತ್ರಿಸುವುದು ಉತ್ತಮ ಮಾರ್ಗವಾಗಿದೆ’ ಎಂದು ಎಎಂಆರ್ಜಿ ಆ್ಯಂಡ್ ಅಸೋಸಿಯೇಟ್ಸ್ನ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.</p>.<p><strong>‘ವಿಪತ್ತು ತೆರಿಗೆ: ಸೂಕ್ತ ಅಲ್ಲ’:</strong>ಜಿಎಸ್ಟಿಯಲ್ಲಿ ಯಾವುದೇ ರೀತಿಯವಿಪತ್ತು ತೆರಿಗೆ ಅಥವಾ ಸೆಸ್ ವಿಧಿಸುವುದು ಸಮಂಜಸವಲ್ಲ. ಅದರಿಂದ ಜಿಎಸ್ಟಿ ಆಶಯಕ್ಕೆ ದಕ್ಕೆಯಾಗಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಐಎಟಿ) ಹೇಳಿದೆ.</p>.<p>ಈ ನಿರ್ಧಾರ ಒಂದು ತೆರಿಗೆ ಒಂದು ದೇಶ ಎನ್ನುವ ಮೂಲತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಕೇರಳಕ್ಕೆ ನೆರವು ನೀಡಲು ಬೇರೆ ಮಾರ್ಗ ಪರಿಗಣಿಸುವಂತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.</p>.<p>ತಂತ್ರಾಂಶದಲ್ಲಿಯೂ ಕೆಲವು ಬದಲಾವಣೆಗಳನ್ನು ತರಬೇಕಾಗಿ ಬರಲಿದ್ದು, ಇದರಿಂದ ಸರ್ಕಾರ ಮತ್ತು ವರ್ತಕರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>