<p><strong>ನವದೆಹಲಿ: </strong>ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳಿಗೆ ಶೇ 10ರಷ್ಟು ದಂಡ ವಿಧಿಸುವುದಕ್ಕೆ ಜಿಎಸ್ಟಿ ಮಂಡಳಿಯು ಅನುಮೋದನೆ ನೀಡಿದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಡಳಿ ಸಭೆಯು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.</p>.<p>ಸದ್ಯಕ್ಕೆ ಲಾಭ ವರ್ಗಾಯಿಸದ ಸಂಸ್ಥೆಗಳಿಗೆ ಗರಿಷ್ಠ ₹ 25 ಸಾವಿರ ದಂಡ ವಿಧಿಸಲು ಅವಕಾಶ ಇದೆ. ದಂಡದ ಮೊತ್ತವನ್ನು ಈಗ ಸಂಸ್ಥೆ ಗಳಿಸಿದ ಲಾಭದ ಶೇ 10ರಷ್ಟಕ್ಕೆ ಹೆಚ್ಚಿಸಲಾಗಿದೆ.</p>.<p class="Subhead"><strong>ಗಡುವು ವಿಸ್ತರಣೆ:</strong>ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ವಾರ್ಷಿಕ ರಿಟರ್ನ್ ಸಲ್ಲಿಕೆಯ ಗಡುವನ್ನು ಎರಡು ತಿಂಗಳವರೆಗೆ (ಆಗಸ್ಟ್ 30ರವರೆಗೆ) ವಿಸ್ತರಿಸಲಾಗಿದೆ.</p>.<p>ಹೊಸ ಜಿಎಸ್ಟಿ ರಿಟರ್ನ್ ಸಲ್ಲಿಕೆಯ ವ್ಯವಸ್ಥೆಯು 2020ರ ಜನವರಿ 1 ರಿಂದ ಜಾರಿಗೆ ಬರಲಿದೆ.</p>.<p class="Subhead"><strong>ಅವಧಿ ವಿಸ್ತರಣೆ:</strong> ಲಾಭಕೋರತನ ತಡೆ ಪ್ರಾಧಿಕಾರದ (ಎನ್ಎಎ) ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ.</p>.<p>ವಹಿವಾಟುದಾರರು ಜಿಎಸ್ಟಿ ಜಾಲದ ನೋಂದಣಿ ಪಡೆಯಲು ಆಧಾರ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.</p>.<p>ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಎಲೆಕ್ಟ್ರಾನಿಕ್ ಇನ್ವಾಯ್ಸ್ ವ್ಯವಸ್ಥೆಯನ್ನು 2020ರ ಜನವರಿ 1ರಿಂದ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೆ ತರಲು ಮಂಡಳಿಯು ಸಮ್ಮತಿಸಿದೆ.</p>.<p>ಜಿಎಸ್ಟಿ ನೋಂದಾಯಿತ ಮಲ್ಟಿಪ್ಲೆಕ್ಸ್ಗಳು ಇ–ಟಿಕೆಟ್ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.</p>.<p>ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲು, ಎಲೆಕ್ಟ್ರಿಕ್ ಚಾರ್ಜರ್ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸುವ ಪ್ರಸ್ತಾವ ಪರಿಶೀಲಿಸಿ ಶಿಫಾರಸು ನೀಡಲು ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳಿಗೆ ಶೇ 10ರಷ್ಟು ದಂಡ ವಿಧಿಸುವುದಕ್ಕೆ ಜಿಎಸ್ಟಿ ಮಂಡಳಿಯು ಅನುಮೋದನೆ ನೀಡಿದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಡಳಿ ಸಭೆಯು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.</p>.<p>ಸದ್ಯಕ್ಕೆ ಲಾಭ ವರ್ಗಾಯಿಸದ ಸಂಸ್ಥೆಗಳಿಗೆ ಗರಿಷ್ಠ ₹ 25 ಸಾವಿರ ದಂಡ ವಿಧಿಸಲು ಅವಕಾಶ ಇದೆ. ದಂಡದ ಮೊತ್ತವನ್ನು ಈಗ ಸಂಸ್ಥೆ ಗಳಿಸಿದ ಲಾಭದ ಶೇ 10ರಷ್ಟಕ್ಕೆ ಹೆಚ್ಚಿಸಲಾಗಿದೆ.</p>.<p class="Subhead"><strong>ಗಡುವು ವಿಸ್ತರಣೆ:</strong>ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ವಾರ್ಷಿಕ ರಿಟರ್ನ್ ಸಲ್ಲಿಕೆಯ ಗಡುವನ್ನು ಎರಡು ತಿಂಗಳವರೆಗೆ (ಆಗಸ್ಟ್ 30ರವರೆಗೆ) ವಿಸ್ತರಿಸಲಾಗಿದೆ.</p>.<p>ಹೊಸ ಜಿಎಸ್ಟಿ ರಿಟರ್ನ್ ಸಲ್ಲಿಕೆಯ ವ್ಯವಸ್ಥೆಯು 2020ರ ಜನವರಿ 1 ರಿಂದ ಜಾರಿಗೆ ಬರಲಿದೆ.</p>.<p class="Subhead"><strong>ಅವಧಿ ವಿಸ್ತರಣೆ:</strong> ಲಾಭಕೋರತನ ತಡೆ ಪ್ರಾಧಿಕಾರದ (ಎನ್ಎಎ) ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ.</p>.<p>ವಹಿವಾಟುದಾರರು ಜಿಎಸ್ಟಿ ಜಾಲದ ನೋಂದಣಿ ಪಡೆಯಲು ಆಧಾರ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.</p>.<p>ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಎಲೆಕ್ಟ್ರಾನಿಕ್ ಇನ್ವಾಯ್ಸ್ ವ್ಯವಸ್ಥೆಯನ್ನು 2020ರ ಜನವರಿ 1ರಿಂದ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೆ ತರಲು ಮಂಡಳಿಯು ಸಮ್ಮತಿಸಿದೆ.</p>.<p>ಜಿಎಸ್ಟಿ ನೋಂದಾಯಿತ ಮಲ್ಟಿಪ್ಲೆಕ್ಸ್ಗಳು ಇ–ಟಿಕೆಟ್ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.</p>.<p>ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲು, ಎಲೆಕ್ಟ್ರಿಕ್ ಚಾರ್ಜರ್ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸುವ ಪ್ರಸ್ತಾವ ಪರಿಶೀಲಿಸಿ ಶಿಫಾರಸು ನೀಡಲು ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>