<p><strong>ಬೆಂಗಳೂರು</strong>: ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳು ಶುಕ್ರವಾರ ನಡೆಯಲಿರುವ ಜಿಎಸ್ಟಿ ದಿನಾಚರಣೆಯಿಂದ ದೂರ ಉಳಿಯಲಿದ್ದಾರೆ ಎಂದು ಅಖಿಲ ಭಾರತ ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳ ಸಂಘ ಹೇಳಿದೆ.</p>.<p>ಮೂಲಸೌಕರ್ಯ, ಕರ್ತವ್ಯ, ಜವಾಬ್ದಾರಿ, ವೇತನ ಶ್ರೇಣಿ ವಿಚಾರದಲ್ಲಿ ಕೇಂದ್ರ ಜಿಎಸ್ಟಿ ಸಂಘಟನೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಟಿ ಸಂಘಟನೆಗಳಿಗೆ ಸಮಾನವಾಗಿ ಕಾಣುತ್ತಿಲ್ಲ. ಹೆಚ್ಚಿನ ಜವಾಬ್ದಾರಿಯನ್ನು ಸೂಪರ್ಇಂಟೆಂಡೆಂಟ್ಗಳ ಮೇಲೆ ಹೊರಿಸಲಾಗುತ್ತಿದ್ದರೂ ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಸಂಘಟನೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಜಿಎಸ್ಟಿ ಅಧಿಕಾರಿಗಳಿಗೆ ಒದಗಿಸಿರುವ ಸಾಫ್ಟ್ವೇರ್ ಸೌಲಭ್ಯವು ಉತ್ತಮವಾಗಿಲ್ಲ. ವ್ಯವಸ್ಥೆಯ ಗಣಕೀಕರಣ ಪ್ರಕ್ರಿಯೆಯು ಒಂದು ವೈಫಲ್ಯದಂತೆ ಕಾಣುತ್ತಿದೆ. ಸಹಾಯಕ ಆಯುಕ್ತರ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳ್ನು ಭರ್ತಿ ಮಾಡಿಲ್ಲ. 2007ರಿಂದಲೂ ಸೂಪರ್ಇಂಟೆಂಡೆಂಟ್ಗಳ ಅಖಿಲ ಭಾರತ ಜೇಷ್ಠತಾ ಪಟ್ಟಿ ಸಿದ್ಧಪಡಿಸಿಲ್ಲ ಎಂದು ಸಂಘಟನೆಯು ಆರೋಪಿಸಿದೆ.</p>.<p>ಪರಿಸ್ಥಿತಿ ಹೀಗಿರುವಾಗ ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳಿಗೆ ಜಿಎಸ್ಟಿ ದಿನಾಚರಣೆಯಂದು ಸಂಭ್ರಮಿಸಲು ಕಾರಣಗಳೇ ಇಲ್ಲ ಎಂದು ಅದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳು ಶುಕ್ರವಾರ ನಡೆಯಲಿರುವ ಜಿಎಸ್ಟಿ ದಿನಾಚರಣೆಯಿಂದ ದೂರ ಉಳಿಯಲಿದ್ದಾರೆ ಎಂದು ಅಖಿಲ ಭಾರತ ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳ ಸಂಘ ಹೇಳಿದೆ.</p>.<p>ಮೂಲಸೌಕರ್ಯ, ಕರ್ತವ್ಯ, ಜವಾಬ್ದಾರಿ, ವೇತನ ಶ್ರೇಣಿ ವಿಚಾರದಲ್ಲಿ ಕೇಂದ್ರ ಜಿಎಸ್ಟಿ ಸಂಘಟನೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಟಿ ಸಂಘಟನೆಗಳಿಗೆ ಸಮಾನವಾಗಿ ಕಾಣುತ್ತಿಲ್ಲ. ಹೆಚ್ಚಿನ ಜವಾಬ್ದಾರಿಯನ್ನು ಸೂಪರ್ಇಂಟೆಂಡೆಂಟ್ಗಳ ಮೇಲೆ ಹೊರಿಸಲಾಗುತ್ತಿದ್ದರೂ ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಸಂಘಟನೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಜಿಎಸ್ಟಿ ಅಧಿಕಾರಿಗಳಿಗೆ ಒದಗಿಸಿರುವ ಸಾಫ್ಟ್ವೇರ್ ಸೌಲಭ್ಯವು ಉತ್ತಮವಾಗಿಲ್ಲ. ವ್ಯವಸ್ಥೆಯ ಗಣಕೀಕರಣ ಪ್ರಕ್ರಿಯೆಯು ಒಂದು ವೈಫಲ್ಯದಂತೆ ಕಾಣುತ್ತಿದೆ. ಸಹಾಯಕ ಆಯುಕ್ತರ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳ್ನು ಭರ್ತಿ ಮಾಡಿಲ್ಲ. 2007ರಿಂದಲೂ ಸೂಪರ್ಇಂಟೆಂಡೆಂಟ್ಗಳ ಅಖಿಲ ಭಾರತ ಜೇಷ್ಠತಾ ಪಟ್ಟಿ ಸಿದ್ಧಪಡಿಸಿಲ್ಲ ಎಂದು ಸಂಘಟನೆಯು ಆರೋಪಿಸಿದೆ.</p>.<p>ಪರಿಸ್ಥಿತಿ ಹೀಗಿರುವಾಗ ಕೇಂದ್ರ ತೆರಿಗೆ ಸೂಪರ್ಇಂಟೆಂಡೆಂಟ್ಗಳಿಗೆ ಜಿಎಸ್ಟಿ ದಿನಾಚರಣೆಯಂದು ಸಂಭ್ರಮಿಸಲು ಕಾರಣಗಳೇ ಇಲ್ಲ ಎಂದು ಅದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>