‘ಕೋವಿಡ್–19 ಸಾಂಕ್ರಾಮಿಕವು ಜನಜೀನವದ ಮೇಲಷ್ಟೇ ಅಲ್ಲದೆ, ವಾಣಿಜ್ಯ ವಹಿವಾಟುಗಳ ಮೇಲೆಯೂ ಪರಿಣಾಮ ಉಂಟುಮಾಡಿದೆ. ಉದ್ಯಮಗಳು ಸಂಕಷ್ಟದಲ್ಲಿ ಇರುವ ಈ ಪರಿಸ್ಥಿತಿಯಲ್ಲಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯತ್ತ ಗಮನ ಹರಿಸುವುದರಿಂದ ವಹಿವಾಟು ನಡೆಸಲು ಕಷ್ಟವಾಗಲಿದೆ. ಈ ದೃಷ್ಟಿಯಿಂದ ಅವಧಿ ವಿಸ್ತರಿಸುವಂತೆ ಐಸಿಎಐ ಪತ್ರ ಬರೆದಿರುವುದನ್ನು ಉದ್ಯಮವು ಪ್ರಶಂಸಿಸುತ್ತದೆ. ಒಂದೊಮ್ಮೆ ಸರ್ಕಾರ ಐಸಿಎಐ ಮನವಿಯನ್ನು ಒಪ್ಪಿಕೊಂಡರೆ ಅದರಿಂದ ಉದ್ಯಮಗಳಿಗೆ ತುಸು ನೆಮ್ಮದಿ ಸಿಗಲಿದೆ’ ಎಂದು ‘ಇವೈ’ನ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಹೇಳಿದ್ದಾರೆ.