<p><strong>ನವದೆಹಲಿ: </strong>2018–19ನೇ ಹಣಕಾಸು ವರ್ಷದ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಜಿಎಸ್ಟಿ ಮಂಡಳಿಗೆ ಪತ್ರ ಬರೆದಿದೆ.</p>.<p>2018–19ನೇ ಹಣಕಾಸು ವರ್ಷದ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಈ ತಿಂಗಳ 30 ಕೊನೆಯ ದಿನ. ಕೋವಿಡ್–19ರ ಪರಿಣಾಮವಾಗಿ ‘ಐಸಿಎಐ’ನ ಬಹುತೇಕ ಕಚೇರಿಗಳಲ್ಲಿ ಭಾಗಶಃ ಕೆಲಸ ಮಾತ್ರ ನಡೆಯುತ್ತಿದೆ. ಹೀಗಾಗಿ ಮೂರು ತಿಂಗಳವರೆಗೆ ರಿಟರ್ನ್ಸ್ ಸಲ್ಲಿಕೆಯ ಅವಧಿ ವಿಸ್ತರಿಸುವಂತೆ ಅದು ಕೇಳಿಕೊಂಡಿದೆ. ಇದರಿಂದ ವರ್ತಕರಿಗೂ ವಿನಾಯಿತಿ ಸಿಗಲಿದೆ ಎಂದೂ ಹೇಳಿದೆ.</p>.<p>‘ಕೋವಿಡ್–19 ಸಾಂಕ್ರಾಮಿಕವು ಜನಜೀನವದ ಮೇಲಷ್ಟೇ ಅಲ್ಲದೆ, ವಾಣಿಜ್ಯ ವಹಿವಾಟುಗಳ ಮೇಲೆಯೂ ಪರಿಣಾಮ ಉಂಟುಮಾಡಿದೆ. ಉದ್ಯಮಗಳು ಸಂಕಷ್ಟದಲ್ಲಿ ಇರುವ ಈ ಪರಿಸ್ಥಿತಿಯಲ್ಲಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯತ್ತ ಗಮನ ಹರಿಸುವುದರಿಂದ ವಹಿವಾಟು ನಡೆಸಲು ಕಷ್ಟವಾಗಲಿದೆ. ಈ ದೃಷ್ಟಿಯಿಂದ ಅವಧಿ ವಿಸ್ತರಿಸುವಂತೆ ಐಸಿಎಐ ಪತ್ರ ಬರೆದಿರುವುದನ್ನು ಉದ್ಯಮವು ಪ್ರಶಂಸಿಸುತ್ತದೆ. ಒಂದೊಮ್ಮೆ ಸರ್ಕಾರ ಐಸಿಎಐ ಮನವಿಯನ್ನು ಒಪ್ಪಿಕೊಂಡರೆ ಅದರಿಂದ ಉದ್ಯಮಗಳಿಗೆ ತುಸು ನೆಮ್ಮದಿ ಸಿಗಲಿದೆ’ ಎಂದು ‘ಇವೈ’ನ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>2018–19ನೇ ಹಣಕಾಸು ವರ್ಷದ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಜಿಎಸ್ಟಿ ಮಂಡಳಿಗೆ ಪತ್ರ ಬರೆದಿದೆ.</p>.<p>2018–19ನೇ ಹಣಕಾಸು ವರ್ಷದ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಈ ತಿಂಗಳ 30 ಕೊನೆಯ ದಿನ. ಕೋವಿಡ್–19ರ ಪರಿಣಾಮವಾಗಿ ‘ಐಸಿಎಐ’ನ ಬಹುತೇಕ ಕಚೇರಿಗಳಲ್ಲಿ ಭಾಗಶಃ ಕೆಲಸ ಮಾತ್ರ ನಡೆಯುತ್ತಿದೆ. ಹೀಗಾಗಿ ಮೂರು ತಿಂಗಳವರೆಗೆ ರಿಟರ್ನ್ಸ್ ಸಲ್ಲಿಕೆಯ ಅವಧಿ ವಿಸ್ತರಿಸುವಂತೆ ಅದು ಕೇಳಿಕೊಂಡಿದೆ. ಇದರಿಂದ ವರ್ತಕರಿಗೂ ವಿನಾಯಿತಿ ಸಿಗಲಿದೆ ಎಂದೂ ಹೇಳಿದೆ.</p>.<p>‘ಕೋವಿಡ್–19 ಸಾಂಕ್ರಾಮಿಕವು ಜನಜೀನವದ ಮೇಲಷ್ಟೇ ಅಲ್ಲದೆ, ವಾಣಿಜ್ಯ ವಹಿವಾಟುಗಳ ಮೇಲೆಯೂ ಪರಿಣಾಮ ಉಂಟುಮಾಡಿದೆ. ಉದ್ಯಮಗಳು ಸಂಕಷ್ಟದಲ್ಲಿ ಇರುವ ಈ ಪರಿಸ್ಥಿತಿಯಲ್ಲಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯತ್ತ ಗಮನ ಹರಿಸುವುದರಿಂದ ವಹಿವಾಟು ನಡೆಸಲು ಕಷ್ಟವಾಗಲಿದೆ. ಈ ದೃಷ್ಟಿಯಿಂದ ಅವಧಿ ವಿಸ್ತರಿಸುವಂತೆ ಐಸಿಎಐ ಪತ್ರ ಬರೆದಿರುವುದನ್ನು ಉದ್ಯಮವು ಪ್ರಶಂಸಿಸುತ್ತದೆ. ಒಂದೊಮ್ಮೆ ಸರ್ಕಾರ ಐಸಿಎಐ ಮನವಿಯನ್ನು ಒಪ್ಪಿಕೊಂಡರೆ ಅದರಿಂದ ಉದ್ಯಮಗಳಿಗೆ ತುಸು ನೆಮ್ಮದಿ ಸಿಗಲಿದೆ’ ಎಂದು ‘ಇವೈ’ನ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>