<p><strong>ನವದೆಹಲಿ:</strong> ನಿಗದಿತ ದಿನಾಂಕಕ್ಕೆ ಮೊದಲು ಆದಾಯ ತೆರಿಗೆ (ಐ.ಟಿ) ವಿವರ ಸಲ್ಲಿಸಲು ಸಾಧ್ಯವಾಗದೆ ಇದ್ದರೂ, ಆದಾಯ ತೆರಿಗೆಯ ರೂಪದಲ್ಲಿ ಕಡಿತವಾದ ಮೊತ್ತವನ್ನು ದಂಡ ಪಾವತಿಸದೆಯೂ ಮರಳಿ ಪಡೆಯಲು ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆಯು ಸೋಮವಾರ ಅಂಗೀಕಾರ ನೀಡಿದೆ.</p>.<p>ಆದಾಯ ತೆರಿಗೆ (ಸಂಖ್ಯೆ 2) ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 2026ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯ್ದೆ – 1961ರ ಬದಲು ಜಾರಿಗೆ ಬರಲಿದೆ. ಹೊಸ ಮಸೂದೆಯನ್ನು ಲೋಕಸಭೆಯು ಗದ್ದಲದ ನಡುವೆ ಚರ್ಚೆ ಇಲ್ಲದೆ ಅಂಗೀಕರಿಸಿತು.</p>.<p>ವ್ಯಕ್ತಿಗಳ ಹಾಗೂ ಕಂಪನಿಗಳ ಆದಾಯಕ್ಕೆ ವಿಧಿಸುವ ತೆರಿಗೆಗೆ ಸಂಬಂಧಿಸಿದ, 63 ವರ್ಷಗಳಷ್ಟು ಹಳೆಯದಾದ ಕಾಯ್ದೆಯ ಬದಲಿಗೆ ಜಾರಿಗೆ ತರಲು ಉದ್ದೇಶಿಸಲಾಗಿರುವ ಮಸೂದೆಗೆ ಲೋಕಸಭೆಯು ಮೂರು ನಿಮಿಷಗಳಲ್ಲಿ ಅಂಗೀಕಾರ ನೀಡಿದೆ.</p>.<p>ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, ಈ ಮಸೂದೆಯು ಪದಗಳನ್ನು ಹಾಗೂ ಸಂಕೀರ್ಣತೆಯನ್ನು ಕಡಿಮೆ ಮಾಡಿದೆ ಎನ್ನಲಾಗಿದೆ. ಮಸೂದೆಯಲ್ಲಿ ಇರುವ ವಿವರಗಳು ಸುಲಭವಾಗಿ ಅರ್ಥವಾಗುವ ಬಗೆಯಲ್ಲಿ ಇವೆ. ‘ತೆರಿಗೆ ನಿರ್ಧರಿಸುವ ವರ್ಷ’, ‘ಹಿಂದಿನ ವರ್ಷ’ ಎಂಬ ಗೊಂದಲ ಮೂಡಿಸುವ ಪದಗಳ ಬಳಕೆಯನ್ನು ಕೈಬಿಟ್ಟಿರುವ ಈ ಮಸೂದೆಯು ‘ತೆರಿಗೆ ವರ್ಷ’ ಎಂಬ ಪದಗಳನ್ನು ಬಳಸಿದೆ.</p>.<p>ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಸಿಗಬೇಕಿದೆ. ಅದು ದೊರೆತ ನಂತರ ರಾಷ್ಟ್ರಪತಿಯವರ ಅಂಕಿತ ಬೇಕಾಗುತ್ತದೆ. ನಂತರದಲ್ಲಿ ಈ ಮಸೂದೆಯು ಕಾಯ್ದೆಯಾಗಿ ಜರಿಗೆ ಬರುತ್ತದೆ.</p>.<p>ಫೆಬ್ರುವರಿಯಲ್ಲಿ ಮಂಡಿಸಲಾಗಿದ್ದ ‘ಆದಾಯ ತೆರಿಗೆ ಮಸೂದೆ – 2025’ಅನ್ನು ನಿರ್ಮಲಾ ಅವರು ಶುಕ್ರವಾರ ಹಿಂದಕ್ಕೆ ಪಡೆದಿದ್ದರು. ಪರಿಷ್ಕೃತ ಮಸೂದೆಯನ್ನು ಸೋಮವಾರ ಮಂಡಿಸಿದರು. ಪರಿಷ್ಕೃತ ಮಸೂದೆಯು ಸಂಸತ್ತಿನ ಪರಿಶೀಲನಾ ಸಮಿತಿಯು ನೀಡಿದ್ದ ಬಹುತೇಕ ಎಲ್ಲ ಶಿಫಾರಸುಗಳನ್ನು ಒಳಗೊಂಡಿದೆ. ಈ ಸಮಿತಿಯು ಮೂಲ ಮಸೂದೆಯನ್ನು ಪರಿಶೀಲಿಸಿ, ಶಿಫಾರಸುಗಳನ್ನು ನೀಡಿತ್ತು.</p>.<p>ನಿಗದಿತ ದಿನಾಂಕಕ್ಕೆ ಮೊದಲು ಐ.ಟಿ. ವಿವರ ಸಲ್ಲಿಸದೆ ಇರುವವರ ‘ಮೂಲದಲ್ಲೇ ತೆರಿಗೆ ಕಡಿತ’ದ ಕ್ಲೇಮ್ಗೆ ಸಂಬಂಧಿಸಿದ ಕಾನೂನಿನ ಅಂಶಗಳನ್ನು ಬದಲಾಯಿಸಬೇಕು ಎಂದು ಪರಿಶೀಲನಾ ಸಮಿತಿಯು ಹೇಳಿತ್ತು. </p>.<p class="title">ಪರಿಷ್ಕೃತ ಮಸೂದೆಯ ಪ್ರಕಾರ, ಗಡುವಿನ ನಂತರ ಐ.ಟಿ. ವಿವರ ಸಲ್ಲಿಸುವವರು ಕೂಡ ತಮ್ಮ ಟಿಡಿಎಸ್ಗೆ ದಂಡಶುಲ್ಕ ಇಲ್ಲದೆ ಮರುಪಾವತಿ ಕ್ಲೇಮ್ ಸಲ್ಲಿಸಲು ಅವಕಾಶ ಇರುತ್ತದೆ.</p>.<p class="title">ಹಣಕಾಸು ಸಚಿವಾಲಯವು ಈಗ ಜಾರಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆಯ ಅಂಶಗಳನ್ನು ಹೊಸ ಮಸೂದೆಯಲ್ಲಿ ಸೇರಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನಿಗದಿತ ದಿನಾಂಕಕ್ಕೆ ಮೊದಲು ಆದಾಯ ತೆರಿಗೆ (ಐ.ಟಿ) ವಿವರ ಸಲ್ಲಿಸಲು ಸಾಧ್ಯವಾಗದೆ ಇದ್ದರೂ, ಆದಾಯ ತೆರಿಗೆಯ ರೂಪದಲ್ಲಿ ಕಡಿತವಾದ ಮೊತ್ತವನ್ನು ದಂಡ ಪಾವತಿಸದೆಯೂ ಮರಳಿ ಪಡೆಯಲು ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆಯು ಸೋಮವಾರ ಅಂಗೀಕಾರ ನೀಡಿದೆ.</p>.<p>ಆದಾಯ ತೆರಿಗೆ (ಸಂಖ್ಯೆ 2) ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 2026ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯ್ದೆ – 1961ರ ಬದಲು ಜಾರಿಗೆ ಬರಲಿದೆ. ಹೊಸ ಮಸೂದೆಯನ್ನು ಲೋಕಸಭೆಯು ಗದ್ದಲದ ನಡುವೆ ಚರ್ಚೆ ಇಲ್ಲದೆ ಅಂಗೀಕರಿಸಿತು.</p>.<p>ವ್ಯಕ್ತಿಗಳ ಹಾಗೂ ಕಂಪನಿಗಳ ಆದಾಯಕ್ಕೆ ವಿಧಿಸುವ ತೆರಿಗೆಗೆ ಸಂಬಂಧಿಸಿದ, 63 ವರ್ಷಗಳಷ್ಟು ಹಳೆಯದಾದ ಕಾಯ್ದೆಯ ಬದಲಿಗೆ ಜಾರಿಗೆ ತರಲು ಉದ್ದೇಶಿಸಲಾಗಿರುವ ಮಸೂದೆಗೆ ಲೋಕಸಭೆಯು ಮೂರು ನಿಮಿಷಗಳಲ್ಲಿ ಅಂಗೀಕಾರ ನೀಡಿದೆ.</p>.<p>ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, ಈ ಮಸೂದೆಯು ಪದಗಳನ್ನು ಹಾಗೂ ಸಂಕೀರ್ಣತೆಯನ್ನು ಕಡಿಮೆ ಮಾಡಿದೆ ಎನ್ನಲಾಗಿದೆ. ಮಸೂದೆಯಲ್ಲಿ ಇರುವ ವಿವರಗಳು ಸುಲಭವಾಗಿ ಅರ್ಥವಾಗುವ ಬಗೆಯಲ್ಲಿ ಇವೆ. ‘ತೆರಿಗೆ ನಿರ್ಧರಿಸುವ ವರ್ಷ’, ‘ಹಿಂದಿನ ವರ್ಷ’ ಎಂಬ ಗೊಂದಲ ಮೂಡಿಸುವ ಪದಗಳ ಬಳಕೆಯನ್ನು ಕೈಬಿಟ್ಟಿರುವ ಈ ಮಸೂದೆಯು ‘ತೆರಿಗೆ ವರ್ಷ’ ಎಂಬ ಪದಗಳನ್ನು ಬಳಸಿದೆ.</p>.<p>ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಸಿಗಬೇಕಿದೆ. ಅದು ದೊರೆತ ನಂತರ ರಾಷ್ಟ್ರಪತಿಯವರ ಅಂಕಿತ ಬೇಕಾಗುತ್ತದೆ. ನಂತರದಲ್ಲಿ ಈ ಮಸೂದೆಯು ಕಾಯ್ದೆಯಾಗಿ ಜರಿಗೆ ಬರುತ್ತದೆ.</p>.<p>ಫೆಬ್ರುವರಿಯಲ್ಲಿ ಮಂಡಿಸಲಾಗಿದ್ದ ‘ಆದಾಯ ತೆರಿಗೆ ಮಸೂದೆ – 2025’ಅನ್ನು ನಿರ್ಮಲಾ ಅವರು ಶುಕ್ರವಾರ ಹಿಂದಕ್ಕೆ ಪಡೆದಿದ್ದರು. ಪರಿಷ್ಕೃತ ಮಸೂದೆಯನ್ನು ಸೋಮವಾರ ಮಂಡಿಸಿದರು. ಪರಿಷ್ಕೃತ ಮಸೂದೆಯು ಸಂಸತ್ತಿನ ಪರಿಶೀಲನಾ ಸಮಿತಿಯು ನೀಡಿದ್ದ ಬಹುತೇಕ ಎಲ್ಲ ಶಿಫಾರಸುಗಳನ್ನು ಒಳಗೊಂಡಿದೆ. ಈ ಸಮಿತಿಯು ಮೂಲ ಮಸೂದೆಯನ್ನು ಪರಿಶೀಲಿಸಿ, ಶಿಫಾರಸುಗಳನ್ನು ನೀಡಿತ್ತು.</p>.<p>ನಿಗದಿತ ದಿನಾಂಕಕ್ಕೆ ಮೊದಲು ಐ.ಟಿ. ವಿವರ ಸಲ್ಲಿಸದೆ ಇರುವವರ ‘ಮೂಲದಲ್ಲೇ ತೆರಿಗೆ ಕಡಿತ’ದ ಕ್ಲೇಮ್ಗೆ ಸಂಬಂಧಿಸಿದ ಕಾನೂನಿನ ಅಂಶಗಳನ್ನು ಬದಲಾಯಿಸಬೇಕು ಎಂದು ಪರಿಶೀಲನಾ ಸಮಿತಿಯು ಹೇಳಿತ್ತು. </p>.<p class="title">ಪರಿಷ್ಕೃತ ಮಸೂದೆಯ ಪ್ರಕಾರ, ಗಡುವಿನ ನಂತರ ಐ.ಟಿ. ವಿವರ ಸಲ್ಲಿಸುವವರು ಕೂಡ ತಮ್ಮ ಟಿಡಿಎಸ್ಗೆ ದಂಡಶುಲ್ಕ ಇಲ್ಲದೆ ಮರುಪಾವತಿ ಕ್ಲೇಮ್ ಸಲ್ಲಿಸಲು ಅವಕಾಶ ಇರುತ್ತದೆ.</p>.<p class="title">ಹಣಕಾಸು ಸಚಿವಾಲಯವು ಈಗ ಜಾರಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆಯ ಅಂಶಗಳನ್ನು ಹೊಸ ಮಸೂದೆಯಲ್ಲಿ ಸೇರಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>