<p><strong>ಮುಂಬೈ</strong>: ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ವಾರ್ಷಿಕ ಶೇ 8ರಿಂದ ಶೇ 10ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಆಸ್ತಿ ನಿರ್ವಹಣಾ ಕ್ಷೇತ್ರದ ಜಾಗತಿಕ ದೈತ್ಯ ‘ಬ್ಲ್ಯಾಕ್ರಾಕ್’ ಕಂಪನಿಯ ಸಿಇಒ ಲ್ಯಾರಿ ಫಿಂಕ್ ಭವಿಷ್ಯ ನುಡಿದರು.</p>.<p>ಅಲ್ಲದೆ, ಮುಂದಿನ ಕೆಲವು ವರ್ಷಗಳು ‘ಭಾರತದ ಯುಗ’ವಾಗಲಿದೆ ಎಂದೂ ಅವರು ಹೇಳಿದರು. ಬ್ಲ್ಯಾಕ್ರಾಕ್ ಕಂಪನಿಯು ಭಾರತದ ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಜೊತೆ ಆಸ್ತಿ ನಿರ್ವಹಣೆ ಮತ್ತು ಸಂಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದಿದೆ.</p>.<p class="bodytext">ಜನರು ತಮ್ಮಲ್ಲಿನ ಹಣವನ್ನು ಬಂಡವಾಳ ಮಾರುಕಟ್ಟೆಗಳಲ್ಲಿ ತೊಡಗಿಸಬೇಕು, ಹಣವನ್ನು ಅವರು ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಬಾರದು ಎಂದು ಫಿಂಕ್ ಕರೆ ನೀಡಿದರು.</p>.<p class="bodytext">ಅಮೆರಿಕದ ಉದಾಹರಣೆಯನ್ನು ನೀಡಿದ ಅವರು, ಬಂಡವಾಳ ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡಿದವರು ಬ್ಯಾಂಕ್ಗಳಲ್ಲಿ ಹಣ ಇರಿಸಿದ್ದವರಿಗಿಂತ ಹೆಚ್ಚು ಲಾಭ ಮಾಡಿಕೊಂಡರು ಎಂದು ಹೇಳಿದರು. ‘ಜಿಯೊ ಬ್ಲ್ಯಾಕ್ರಾಕ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p class="bodytext">ಈ ಕಾರ್ಯಕ್ರಮದಲ್ಲಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಜೊತೆ ಸಂವಾದ ನಡೆಸಿದರು. ವಾಣಿಜ್ಯ ವಹಿವಾಟು, ಬೇಡಿಕೆ ಮತ್ತು ಮಾಹಿತಿ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತವು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡ ಬಗೆಯ ಸ್ಫೂರ್ತಿದಾಯಕ ಎಂದರು.</p>.<p class="bodytext">ಎರಡು ಅಂಕಿಗಳ ಬೆಳವಣಿಗೆ ದರವನ್ನು ದೇಶದಲ್ಲಿ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ಅಂಬಾನಿ ಪ್ರತಿಪಾದಿಸಿದರು.</p>.<p class="bodytext">‘ಭಾರತವು ಹಿಂದಿನಿಂದಲೂ ಹಣ ಉಳಿತಾಯ ಮಾಡುವವರ ದೇಶ. ಆದರೆ ಭಾರತೀಯರು ಹಿಂದಿನ ವರ್ಷದಲ್ಲಿ 60 ಬಿಲಿಯನ್ ಡಾಲರ್ಗಿಂತ (₹5.42 ಲಕ್ಷ ಕೋಟಿ) ಹೆಚ್ಚಿನ ಮೊತ್ತವನ್ನು ಚಿನ್ನದ ಮೇಲೆ, 15 ಬಿಲಿಯನ್ ಡಾಲರ್ (₹1.35 ಲಕ್ಷ ಕೋಟಿ) ಮೊತ್ತವನ್ನು ಬೆಳ್ಳಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಹಣ ಉಳಿತಾಯ ಮಾಡುವ ಮನಃಸ್ಥಿತಿ ಇರುವವರಿಗೆ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸಿ, ಅವರ ಉಳಿತಾಯದ ಹಣವು ಅಲ್ಲಿಗೆ ಬರುವಂತೆ ಮಾಡುವ ಅವಕಾಶ ಜಿಯೊ ಬ್ಲ್ಯಾಕ್ರಾಕ್ಗೆ ಇದೆ’ ಎಂದು ಅಂಬಾನಿ ಹೇಳಿದರು.</p>.<p class="bodytext">ಕಾರ್ಯಕ್ರಮದಲ್ಲಿ ಮಾತನಾಡಿದ ಜಿಯೊ ಫೈನಾನ್ಶಿಯಲ್ ಸರ್ವಿಸಸ್ನ ಅಧ್ಯಕ್ಷ ಕೆ.ವಿ. ಕಾಮತ್, ‘ಮ್ಯೂಚುವಲ್ ಫಂಡ್ಗಳ ಮೂಲಕ ಹೂಡಿಕೆ ಮಾಡಿರುವ ಮೊತ್ತವು ಈಗ ₹80 ಲಕ್ಷ ಕೋಟಿ ಇರುವುದು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ವಾರ್ಷಿಕ ಶೇ 8ರಿಂದ ಶೇ 10ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಆಸ್ತಿ ನಿರ್ವಹಣಾ ಕ್ಷೇತ್ರದ ಜಾಗತಿಕ ದೈತ್ಯ ‘ಬ್ಲ್ಯಾಕ್ರಾಕ್’ ಕಂಪನಿಯ ಸಿಇಒ ಲ್ಯಾರಿ ಫಿಂಕ್ ಭವಿಷ್ಯ ನುಡಿದರು.</p>.<p>ಅಲ್ಲದೆ, ಮುಂದಿನ ಕೆಲವು ವರ್ಷಗಳು ‘ಭಾರತದ ಯುಗ’ವಾಗಲಿದೆ ಎಂದೂ ಅವರು ಹೇಳಿದರು. ಬ್ಲ್ಯಾಕ್ರಾಕ್ ಕಂಪನಿಯು ಭಾರತದ ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಜೊತೆ ಆಸ್ತಿ ನಿರ್ವಹಣೆ ಮತ್ತು ಸಂಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದಿದೆ.</p>.<p class="bodytext">ಜನರು ತಮ್ಮಲ್ಲಿನ ಹಣವನ್ನು ಬಂಡವಾಳ ಮಾರುಕಟ್ಟೆಗಳಲ್ಲಿ ತೊಡಗಿಸಬೇಕು, ಹಣವನ್ನು ಅವರು ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಬಾರದು ಎಂದು ಫಿಂಕ್ ಕರೆ ನೀಡಿದರು.</p>.<p class="bodytext">ಅಮೆರಿಕದ ಉದಾಹರಣೆಯನ್ನು ನೀಡಿದ ಅವರು, ಬಂಡವಾಳ ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡಿದವರು ಬ್ಯಾಂಕ್ಗಳಲ್ಲಿ ಹಣ ಇರಿಸಿದ್ದವರಿಗಿಂತ ಹೆಚ್ಚು ಲಾಭ ಮಾಡಿಕೊಂಡರು ಎಂದು ಹೇಳಿದರು. ‘ಜಿಯೊ ಬ್ಲ್ಯಾಕ್ರಾಕ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p class="bodytext">ಈ ಕಾರ್ಯಕ್ರಮದಲ್ಲಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಜೊತೆ ಸಂವಾದ ನಡೆಸಿದರು. ವಾಣಿಜ್ಯ ವಹಿವಾಟು, ಬೇಡಿಕೆ ಮತ್ತು ಮಾಹಿತಿ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತವು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡ ಬಗೆಯ ಸ್ಫೂರ್ತಿದಾಯಕ ಎಂದರು.</p>.<p class="bodytext">ಎರಡು ಅಂಕಿಗಳ ಬೆಳವಣಿಗೆ ದರವನ್ನು ದೇಶದಲ್ಲಿ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ಅಂಬಾನಿ ಪ್ರತಿಪಾದಿಸಿದರು.</p>.<p class="bodytext">‘ಭಾರತವು ಹಿಂದಿನಿಂದಲೂ ಹಣ ಉಳಿತಾಯ ಮಾಡುವವರ ದೇಶ. ಆದರೆ ಭಾರತೀಯರು ಹಿಂದಿನ ವರ್ಷದಲ್ಲಿ 60 ಬಿಲಿಯನ್ ಡಾಲರ್ಗಿಂತ (₹5.42 ಲಕ್ಷ ಕೋಟಿ) ಹೆಚ್ಚಿನ ಮೊತ್ತವನ್ನು ಚಿನ್ನದ ಮೇಲೆ, 15 ಬಿಲಿಯನ್ ಡಾಲರ್ (₹1.35 ಲಕ್ಷ ಕೋಟಿ) ಮೊತ್ತವನ್ನು ಬೆಳ್ಳಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಹಣ ಉಳಿತಾಯ ಮಾಡುವ ಮನಃಸ್ಥಿತಿ ಇರುವವರಿಗೆ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸಿ, ಅವರ ಉಳಿತಾಯದ ಹಣವು ಅಲ್ಲಿಗೆ ಬರುವಂತೆ ಮಾಡುವ ಅವಕಾಶ ಜಿಯೊ ಬ್ಲ್ಯಾಕ್ರಾಕ್ಗೆ ಇದೆ’ ಎಂದು ಅಂಬಾನಿ ಹೇಳಿದರು.</p>.<p class="bodytext">ಕಾರ್ಯಕ್ರಮದಲ್ಲಿ ಮಾತನಾಡಿದ ಜಿಯೊ ಫೈನಾನ್ಶಿಯಲ್ ಸರ್ವಿಸಸ್ನ ಅಧ್ಯಕ್ಷ ಕೆ.ವಿ. ಕಾಮತ್, ‘ಮ್ಯೂಚುವಲ್ ಫಂಡ್ಗಳ ಮೂಲಕ ಹೂಡಿಕೆ ಮಾಡಿರುವ ಮೊತ್ತವು ಈಗ ₹80 ಲಕ್ಷ ಕೋಟಿ ಇರುವುದು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>