ವರ್ಷದ ಕೊನೆಯಲ್ಲಿ ನಿಂತು, ಇಡೀ ವರ್ಷದಲ್ಲಿ ದೇಶದ ಹಣಕಾಸಿನ ಲೋಕದಲ್ಲಿ ಆಗಿಹೋದ ಪ್ರಮುಖ ವಿದ್ಯಮಾನಗಳ ಅವಲೋಕನ ನಡೆಸಲು ಯತ್ನಿಸಿದರೆ ಬೇವು–ಬೆಲ್ಲಗಳೆರಡರ ಅನುಭವ ದಕ್ಕುತ್ತದೆ. ವರ್ಷದ ಆರಂಭದಲ್ಲಿ ಬೇವು–ಬೆಲ್ಲ ನೀಡುವುದರ ಹಿಂದಿನ ಆಶಯವು ಆಧ್ಯಾತ್ಮಿಕ ಮಹತ್ವವನ್ನಷ್ಟೇ ಅಲ್ಲದೆ, ಆರ್ಥಿಕ ಜಗತ್ತಿನಲ್ಲಿಯೂ ಎಷ್ಟೊಂದು ಅರ್ಥವನ್ನು ಹೊಂದಿದೆಯಲ್ಲ ಎಂಬ ಸೋಜಿಗ ಉಂಟಾಗುತ್ತದೆ