<p><strong>ನವದೆಹಲಿ (ಪಿಟಿಐ):</strong> ‘ಕೊರೊನಾ–2’ ವೈರಸ್ನಿಂದಾಗಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಕಾರಣಕ್ಕೆ ಕೇಂದ್ರ ಸರ್ಕಾರವು ತೆರಿಗೆ, ಕಂಪನಿ ಕಾಯ್ದೆ ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದಂತೆ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.</p>.<p>ಆದಾಯ ತೆರಿಗೆ ವಿವರ ಸಲ್ಲಿಕೆ, ಜಿಎಸ್ಟಿ ರಿಟರ್ನ್, ಆಧಾರ್ ಜತೆ ಪ್ಯಾನ್ ಜೋಡಣೆ ಮತ್ತು ತೆರಿಗೆ ವಿವಾದ ಇತ್ಯರ್ಥಕ್ಕೆ ಆರಂಭಿಸಿರುವ ’ವಿವಾದ್ ಸೆ ವಿಶ್ವಾಸ್ ಯೋಜನೆಯ ಗಡುವನ್ನು ಮೂರು ತಿಂಗಳವರೆಗೆ (ಮಾರ್ಚ್ 31ರಿಂದ ಜೂನ್ 30) ವಿಸ್ತರಿಸಿದೆ.</p>.<p>ಬ್ಯಾಂಕ್ ಖಾತೆಯಲ್ಲಿ ಪ್ರತಿ ತಿಂಗಳೂ ಕನಿಷ್ಠ ಸರಾಸರಿ ಮೊತ್ತ (ಎಎಂಬಿ) ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುತ್ತಿದ್ದ ಶುಲ್ಕ ರದ್ದುಪಡಿಸಲಾಗಿದೆ. ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕ್ನ ಎಟಿಎಂನಿಂದ ಹಣ ಪಡೆಯುವುದು ಮೂರು ತಿಂಗಳವರೆಗೆ ಉಚಿತವಾಗಿರುತ್ತದೆ.</p>.<p>2018–19ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಿಸಲಾಗಿದೆ. ವಿಳಂಬ ಪಾವತಿಗೆ ವಿಧಿಸಲಾಗುತ್ತಿದ್ದ ಶೇ 12ರಷ್ಟು ಬಡ್ಡಿ ದರವನ್ನು ಶೇ 9ಕ್ಕೆ ತಗ್ಗಿಸಲಾಗಿದೆ.</p>.<p>ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಜಿಎಸ್ಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಕೂಡ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಜಿಎಸ್ಟಿ ರಿಟರ್ನ್ಸ್ಗಳನ್ನು ತಡವಾಗಿ ಸಲ್ಲಿಸುವುದಕ್ಕೆ ವಿಧಿಸಲಾಗುತ್ತಿದ್ದ ದಂಡ ರದ್ದುಪಡಿಸಲಾಗಿದೆ. ವಾರ್ಷಿಕ ₹ 5 ಕೋಟಿಗಿಂತ ಕಡಿಮೆ ಮೊತ್ತದ ವಹಿವಾಟು ನಡೆಸುವ ಕಂಪನಿಗಳ ವಿಳಂಬ ರಿಟರ್ನ್ಸ್ಗೆ ವಿಧಿಸಲಾಗುತ್ತಿದ್ದ ಶುಲ್ಕ, ದಂಡ ಅಥವಾ ಬಡ್ಡಿ ಕೈಬಿಡಲಾಗಿದೆ.</p>.<p>ಆಧಾರ್ ಜತೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಜೋಡಿಸಲು ಇದೇ 31ಕ್ಕೆ ಕೊನೆಗೊಳ್ಳಲಿದ್ದ ಗಡುವನ್ನೂ ಜೂನ್ 30ಕ್ಕೆ ವಿಸ್ತರಿಸಲಾಗಿದೆ.</p>.<p class="Subhead">ಕಂಪನಿ ನಿಯಮ ಸಡಿಲಿಕೆ: ಕಂಪನಿ ಕಾಯ್ದೆಯ ನಿಯಮಗಳಲ್ಲಿಯೂ ಅನೇಕ ಸಡಿಲಿಕೆ ಪ್ರಕಟಿಸಲಾಗಿದೆ.</p>.<p>ಕಡ್ಡಾಯವಾಗಿ ನಡೆಸಬೇಕಾಗಿದ್ದ ನಿರ್ದೇಶಕ ಮಂಡಳಿ ಸಭೆ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಂಪನಿಗಳು ಸಲ್ಲಿಸಬೇಕಾಗಿದ್ದ ರಿಟರ್ನ್ ನಿಬಂಧನೆಗಳಿಗೆ ವಿನಾಯ್ತಿ ನೀಡಲಾಗಿದೆ.</p>.<p>‘ದೇಶದಲ್ಲಿ ಬಹುತೇಕ ಎಲ್ಲೆಡೆ ಆರ್ಥಿಕ ಚಟುವಟಿಕೆ ಮತ್ತು ಜನಜೀವನ ನಿರ್ಬಂಧ ಜಾರಿಗೆ ಬಂದಿರುವುದರಿಂದ ಸಾರ್ವಜನಿಕರು, ವ್ಯಾಪಾರಸ್ಥರು, ಉದ್ಯಮ ಸಮೂಹಕ್ಕೆ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯ ಕಾರಣಕ್ಕೆ ಗಡುವು ವಿಸ್ತರಿಸಲಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p class="Subhead">ವಿವಾದ್ ಸೆ ವಿಶ್ವಾಸ್: ತೆರಿಗೆ ವಿವಾದ ಇತ್ಯರ್ಥಕ್ಕೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಗಡುವು ವಿಸ್ತರಣೆಯ ಪ್ರಯೋಜನ ಪಡೆದುಕೊಳ್ಳುವವರು ಅಸಲಿನ ಮೇಲೆ ಶೇ 10ರಷ್ಟು ಬಡ್ಡಿ ಪಾವತಿಸುವ ಅಗತ್ಯ ಇಲ್ಲ.</p>.<p>ಆದಾಯ ತೆರಿಗೆ ಕಾಯ್ದೆಯಡಿ ನೀಡಲಾಗುತ್ತಿದ್ದ ವಿವಿಧ ನೋಟಿಸ್ಗಳ ಜಾರಿ ದಿನವನ್ನೂ ವಿಸ್ತರಿಸಲಾಗಿದೆ.</p>.<p><strong>ಜೂನ್ 30ರವರೆಗೆ ಗಡುವು ವಿಸ್ತರಣೆ</strong></p>.<p><strong>* 2018–19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ</strong></p>.<p><strong>* ಜಿಎಸ್ಟಿ ರಿಟರ್ನ್ ಸಲ್ಲಿಕೆ</strong></p>.<p><strong>* ಆಧಾರ್ ಜತೆ ಪ್ಯಾನ್ ಜೋಡಣೆ</strong></p>.<p><strong>* ತೆರಿಗೆ ವಿವಾದ ಇತ್ಯರ್ಥದ ’ವಿವಾದ್ ಸೆ ವಿಶ್ವಾಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ಕೊರೊನಾ–2’ ವೈರಸ್ನಿಂದಾಗಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಕಾರಣಕ್ಕೆ ಕೇಂದ್ರ ಸರ್ಕಾರವು ತೆರಿಗೆ, ಕಂಪನಿ ಕಾಯ್ದೆ ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದಂತೆ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.</p>.<p>ಆದಾಯ ತೆರಿಗೆ ವಿವರ ಸಲ್ಲಿಕೆ, ಜಿಎಸ್ಟಿ ರಿಟರ್ನ್, ಆಧಾರ್ ಜತೆ ಪ್ಯಾನ್ ಜೋಡಣೆ ಮತ್ತು ತೆರಿಗೆ ವಿವಾದ ಇತ್ಯರ್ಥಕ್ಕೆ ಆರಂಭಿಸಿರುವ ’ವಿವಾದ್ ಸೆ ವಿಶ್ವಾಸ್ ಯೋಜನೆಯ ಗಡುವನ್ನು ಮೂರು ತಿಂಗಳವರೆಗೆ (ಮಾರ್ಚ್ 31ರಿಂದ ಜೂನ್ 30) ವಿಸ್ತರಿಸಿದೆ.</p>.<p>ಬ್ಯಾಂಕ್ ಖಾತೆಯಲ್ಲಿ ಪ್ರತಿ ತಿಂಗಳೂ ಕನಿಷ್ಠ ಸರಾಸರಿ ಮೊತ್ತ (ಎಎಂಬಿ) ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುತ್ತಿದ್ದ ಶುಲ್ಕ ರದ್ದುಪಡಿಸಲಾಗಿದೆ. ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕ್ನ ಎಟಿಎಂನಿಂದ ಹಣ ಪಡೆಯುವುದು ಮೂರು ತಿಂಗಳವರೆಗೆ ಉಚಿತವಾಗಿರುತ್ತದೆ.</p>.<p>2018–19ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಿಸಲಾಗಿದೆ. ವಿಳಂಬ ಪಾವತಿಗೆ ವಿಧಿಸಲಾಗುತ್ತಿದ್ದ ಶೇ 12ರಷ್ಟು ಬಡ್ಡಿ ದರವನ್ನು ಶೇ 9ಕ್ಕೆ ತಗ್ಗಿಸಲಾಗಿದೆ.</p>.<p>ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಜಿಎಸ್ಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಕೂಡ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಜಿಎಸ್ಟಿ ರಿಟರ್ನ್ಸ್ಗಳನ್ನು ತಡವಾಗಿ ಸಲ್ಲಿಸುವುದಕ್ಕೆ ವಿಧಿಸಲಾಗುತ್ತಿದ್ದ ದಂಡ ರದ್ದುಪಡಿಸಲಾಗಿದೆ. ವಾರ್ಷಿಕ ₹ 5 ಕೋಟಿಗಿಂತ ಕಡಿಮೆ ಮೊತ್ತದ ವಹಿವಾಟು ನಡೆಸುವ ಕಂಪನಿಗಳ ವಿಳಂಬ ರಿಟರ್ನ್ಸ್ಗೆ ವಿಧಿಸಲಾಗುತ್ತಿದ್ದ ಶುಲ್ಕ, ದಂಡ ಅಥವಾ ಬಡ್ಡಿ ಕೈಬಿಡಲಾಗಿದೆ.</p>.<p>ಆಧಾರ್ ಜತೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಜೋಡಿಸಲು ಇದೇ 31ಕ್ಕೆ ಕೊನೆಗೊಳ್ಳಲಿದ್ದ ಗಡುವನ್ನೂ ಜೂನ್ 30ಕ್ಕೆ ವಿಸ್ತರಿಸಲಾಗಿದೆ.</p>.<p class="Subhead">ಕಂಪನಿ ನಿಯಮ ಸಡಿಲಿಕೆ: ಕಂಪನಿ ಕಾಯ್ದೆಯ ನಿಯಮಗಳಲ್ಲಿಯೂ ಅನೇಕ ಸಡಿಲಿಕೆ ಪ್ರಕಟಿಸಲಾಗಿದೆ.</p>.<p>ಕಡ್ಡಾಯವಾಗಿ ನಡೆಸಬೇಕಾಗಿದ್ದ ನಿರ್ದೇಶಕ ಮಂಡಳಿ ಸಭೆ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಂಪನಿಗಳು ಸಲ್ಲಿಸಬೇಕಾಗಿದ್ದ ರಿಟರ್ನ್ ನಿಬಂಧನೆಗಳಿಗೆ ವಿನಾಯ್ತಿ ನೀಡಲಾಗಿದೆ.</p>.<p>‘ದೇಶದಲ್ಲಿ ಬಹುತೇಕ ಎಲ್ಲೆಡೆ ಆರ್ಥಿಕ ಚಟುವಟಿಕೆ ಮತ್ತು ಜನಜೀವನ ನಿರ್ಬಂಧ ಜಾರಿಗೆ ಬಂದಿರುವುದರಿಂದ ಸಾರ್ವಜನಿಕರು, ವ್ಯಾಪಾರಸ್ಥರು, ಉದ್ಯಮ ಸಮೂಹಕ್ಕೆ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯ ಕಾರಣಕ್ಕೆ ಗಡುವು ವಿಸ್ತರಿಸಲಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p class="Subhead">ವಿವಾದ್ ಸೆ ವಿಶ್ವಾಸ್: ತೆರಿಗೆ ವಿವಾದ ಇತ್ಯರ್ಥಕ್ಕೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಗಡುವು ವಿಸ್ತರಣೆಯ ಪ್ರಯೋಜನ ಪಡೆದುಕೊಳ್ಳುವವರು ಅಸಲಿನ ಮೇಲೆ ಶೇ 10ರಷ್ಟು ಬಡ್ಡಿ ಪಾವತಿಸುವ ಅಗತ್ಯ ಇಲ್ಲ.</p>.<p>ಆದಾಯ ತೆರಿಗೆ ಕಾಯ್ದೆಯಡಿ ನೀಡಲಾಗುತ್ತಿದ್ದ ವಿವಿಧ ನೋಟಿಸ್ಗಳ ಜಾರಿ ದಿನವನ್ನೂ ವಿಸ್ತರಿಸಲಾಗಿದೆ.</p>.<p><strong>ಜೂನ್ 30ರವರೆಗೆ ಗಡುವು ವಿಸ್ತರಣೆ</strong></p>.<p><strong>* 2018–19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ</strong></p>.<p><strong>* ಜಿಎಸ್ಟಿ ರಿಟರ್ನ್ ಸಲ್ಲಿಕೆ</strong></p>.<p><strong>* ಆಧಾರ್ ಜತೆ ಪ್ಯಾನ್ ಜೋಡಣೆ</strong></p>.<p><strong>* ತೆರಿಗೆ ವಿವಾದ ಇತ್ಯರ್ಥದ ’ವಿವಾದ್ ಸೆ ವಿಶ್ವಾಸ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>