ಚೆನ್ನೈ: ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ತನ್ನ ನೂತನ ಶಾಖೆಗಳನ್ನು ಆರಂಭಿಸಿದೆ.
ಮಧುರೈನ ಉಸಿಲಾಂಪಟ್ಟಿ ಮತ್ತು ಚೆನ್ನೈ ಬಳಿಯ ಮಾಥುರ್ ಹಾಗೂ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಆತ್ಮಕೂರಲ್ಲಿ ಹೊಸ ಶಾಖೆಗಳನ್ನು ಉದ್ಘಾಟಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಈ ಹೊಸ ಶಾಖೆಗಳ ಉದ್ಘಾಟನೆಯೊಂದಿಗೆ ಬ್ಯಾಂಕ್ನ ಒಟ್ಟು ಶಾಖೆಗಳ ಸಂಖ್ಯೆ 834ಕ್ಕೇರಿದೆ. 2023ರ ಡಿಸೆಂಬರ್ 31ಕ್ಕೆ ಬ್ಯಾಂಕ್ನ ಒಟ್ಟು ವಹಿವಾಟು ₹1.58 ಲಕ್ಷ ಕೋಟಿಯಾಗಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ ₹412 ಕೋಟಿ ನಿವ್ವಳ ಲಾಭ ಗಳಿಸಿದೆ.