ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಸುರಕ್ಷತೆ ಮತ್ತು ಉಳಿತಾಯದ ಸಂಯೋಜನೆಯನ್ನು ಒಳಗೊಂಡ ಹೊಸ ‘ಎಲ್ಐಸಿ ಬಿಮಾ ಜ್ಯೋತಿ’ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯು ಪಾಲಿಸಿದಾರರಿಗೆ, ಯೋಜನೆಯ ಅವಧಿಯ ಅಂತ್ಯದಲ್ಲಿ ಒಂದಷ್ಟು ಮೊತ್ತವನ್ನು ನೀಡುವ ಖಾತರಿ ಒದಗಿಸುತ್ತದೆ. ಅಲ್ಲದೆ, ಯೋಜನೆಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನೂ ನೀಡಲಿದೆ.
ಪ್ರತಿ ಪಾಲಿಸಿ ವರ್ಷದ ಅಂತ್ಯದ ವೇಳೆಗೆ ಸಾವಿರ ರೂಪಾಯಿ ಕನಿಷ್ಠ ಖಾತರಿ ಹಣಕ್ಕೆ ₹ 50ರಂತೆ ಹೆಚ್ಚುವರಿ ಮೊತ್ತ ನೀಡಲಾಗುವುದು. ಕನಿಷ್ಠ ಖಾತರಿ ಮೊತ್ತ ₹ 1 ಲಕ್ಷ ಇದ್ದು, ಗರಿಷ್ಠ ಮಿತಿ ಇರುವುದಿಲ್ಲ.
ಏಜೆಂಟರ ಬಳಿ ಅಥವಾ ಇತರೆ ಮಧ್ಯವರ್ತಿಗಳು ಹಾಗೂ www.licinidia.in ಜಾಲತಾಣದ ಮೂಲಕವೂ ಈ ಯೋಜನೆಯನ್ನು ಖರೀದಿಸಬಹುದಾಗಿದೆ.