ಬೆಂಗಳೂರು: ಚಿನ್ನ ಮತ್ತು ವಜ್ರಾಭರಣ ಮಾರಾಟ ಕಂಪನಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್, ಶುಕ್ರವಾರ ತನ್ನ ಎಲ್ಲ ಮಳಿಗೆಗಳಲ್ಲಿ ಗ್ರಾಹಕರಿಗೆ ಸಸಿಗಳನ್ನು ವಿತರಿಸುವ ಮೂಲಕ ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದೆ.
ರಾಜ್ಯದಲ್ಲಿನ ಎಲ್ಲ ಮಳಿಗೆಗಳಿಗೆ ಶುಕ್ರವಾರ ಆಭರಣ ಖರೀದಿಗೆ ಭೇಟಿ ನೀಡಿದ ಎಲ್ಲ ಗ್ರಾಹಕರಿಗೆ ಸಸಿಗಳನ್ನು ವಿತರಿಸಲಾಗಿದೆ.
ಪ್ರತಿ ವರ್ಷ ಕಂಪನಿಯು ವಿಶ್ವ ಪರಿಸರ ದಿನವನ್ನು ಈ ಬಗೆಯಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದೆ. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗಿದೆ ಎಂದು ಕಂಪನಿ ತಿಳಿಸಿದೆ.