<p>ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ಸಾಲಿನಡಿ ₹40,314 ಕೋಟಿಯಷ್ಟು ಆಸ್ತಿ ನಗದೀಕರಣ ಮಾಡಿದೆ. </p>.<p>₹28,968 ಕೋಟಿ ಆಸ್ತಿ ನಗದೀಕರಣಕ್ಕೆ ಗುರಿ ಹೊಂದಲಾಗಿತ್ತು. ಇದಕ್ಕಿಂತಲೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಶುಲ್ಕ–ನಿರ್ವಹಣೆ–ವರ್ಗಾವಣೆ ಮಾದರಿಯಡಿ (ಟಿಒಪಿ) ₹15,968 ಕೋಟಿ, ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ ಮಾದರಿಯಡಿ ₹15,700 ಕೋಟಿ ಹಾಗೂ ಭದ್ರತೆ ಮಾದರಿಯಲ್ಲಿ ₹8,646 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.</p>.<p>2022–23ನೇ ಆರ್ಥಿಕ ವರ್ಷದಲ್ಲಿ ವಿವಿಧ ಮಾದರಿಯಡಿ ₹32,855 ಕೋಟಿ ನಗದೀಕರಿಸಲಾಗಿತ್ತು. ಇಲ್ಲಿಯವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಆಸ್ತಿ ನಗದೀಕರಣ ಮೊತ್ತವು ₹1 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.</p>.<p>ಆಸ್ತಿ ನಗದೀಕರಣದ ಮೂಲಕ ಹೆದ್ದಾರಿಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ಈ ಆಸ್ತಿಗಳ ಮೇಲೆ ಸರ್ಕಾರದ ಒಡೆತನವಿರುತ್ತದೆ. ಇದು ದೀರ್ಘಾವಧಿಯ ಗುತ್ತಿಗೆಯಾಗಿದ್ದು, ಅವಧಿ ಮುಗಿದ ಬಳಿಕ ಆಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ಸಾಲಿನಡಿ ₹40,314 ಕೋಟಿಯಷ್ಟು ಆಸ್ತಿ ನಗದೀಕರಣ ಮಾಡಿದೆ. </p>.<p>₹28,968 ಕೋಟಿ ಆಸ್ತಿ ನಗದೀಕರಣಕ್ಕೆ ಗುರಿ ಹೊಂದಲಾಗಿತ್ತು. ಇದಕ್ಕಿಂತಲೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಶುಲ್ಕ–ನಿರ್ವಹಣೆ–ವರ್ಗಾವಣೆ ಮಾದರಿಯಡಿ (ಟಿಒಪಿ) ₹15,968 ಕೋಟಿ, ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ ಮಾದರಿಯಡಿ ₹15,700 ಕೋಟಿ ಹಾಗೂ ಭದ್ರತೆ ಮಾದರಿಯಲ್ಲಿ ₹8,646 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.</p>.<p>2022–23ನೇ ಆರ್ಥಿಕ ವರ್ಷದಲ್ಲಿ ವಿವಿಧ ಮಾದರಿಯಡಿ ₹32,855 ಕೋಟಿ ನಗದೀಕರಿಸಲಾಗಿತ್ತು. ಇಲ್ಲಿಯವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಆಸ್ತಿ ನಗದೀಕರಣ ಮೊತ್ತವು ₹1 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.</p>.<p>ಆಸ್ತಿ ನಗದೀಕರಣದ ಮೂಲಕ ಹೆದ್ದಾರಿಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ಈ ಆಸ್ತಿಗಳ ಮೇಲೆ ಸರ್ಕಾರದ ಒಡೆತನವಿರುತ್ತದೆ. ಇದು ದೀರ್ಘಾವಧಿಯ ಗುತ್ತಿಗೆಯಾಗಿದ್ದು, ಅವಧಿ ಮುಗಿದ ಬಳಿಕ ಆಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>