<p><strong>ಲಖನೌ: </strong>ಕೋವಿಡ್–19 ಸಾಂಕ್ರಾಮಿಕದಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್ಎಂಇ) ವಲಯವು ಹೆಚ್ಚಿನ ಹಾನಿ ಅನುಭವಿಸಿದೆ. ಹಾಗಾಗಿ ಈ ವಲಯಕ್ಕೆ ಪರಿಹಾರದ ಪ್ಯಾಕೇಜ್ ನೀಡುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.</p>.<p>ಪರಿಹಾರ ಪ್ಯಾಕೇಜ್ನ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲವು ಯೋಜನೆ ರೂಪಿಸಬೇಕಿದೆ. ಇದರಿಂದಾಗಿ ನಾವು ಹೆಚ್ಚು ಅಗತ್ಯ ಇರುವವರಿಗೆ ಕೇಂದ್ರೀಕೃತ ಮತ್ತು ಸರಿಯಾದ ಪರಿಹಾರವನ್ನು ನೀಡಬಹುದಾಗಿದೆ ಎಂದು ಅಸೋಚಾಂ ಅಧ್ಯಕ್ಷ ವಿನೀತ್ ಅಗರ್ವಾಲ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ಮುಂದೆ ಕೆಲವು ಸಲಹೆಗಳನ್ನೂ ಅವರು ಇಟ್ಟಿದ್ದಾರೆ. </p>.<p>* ಬ್ಯಾಂಕುಗಳು ಎಂಎಸ್ಎಂಇಗಳಿಗೆ ನೀಡುವ ದುಡಿಯುವ ಬಂಡವಾಳದ ಪ್ರಮಾಣವನ್ನು ಶೇಕಡ 20ರಷ್ಟು ಹೆಚ್ಚಿಸಬೇಕು. ಆದರೆ ಇದಕ್ಕೆ ಯಾವುದೇ ಹೆಚ್ಚುವರಿ ಮೇಲಾಧಾರ ವಿಧಿಸಬಾರದು.</p>.<p>* ಎಂಎಸ್ಎಂಇಗಳ ವಸೂಲಾಗದ ಸಾಲದ (ಎನ್ಪಿಎ) ಮರು ವರ್ಗೀಕರಣ ಆಗಬೇಕು.</p>.<p>* ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ನಡೆಸುವವರಿಗೂ ಕೆಲವು ಪರಿಹಾರ ಘೋಷಿಸಬೇಕು. ದುಡಿಯುವ ಬಂಡವಾಳದ ಸಾಲ ಹಾಗೂ ನೇರ ಪ್ರಯೋಜನಗಳನ್ನು ನೀಡಬೇಕು.</p>.<p>* ಕಳೆದ ಬಾರಿ ಗ್ರಾಮೀಣ ಭಾಗಕ್ಕೆ ಕೆಲವೊಂದು ಪರಿಹಾರ ಘೋಷಿಸಲಾಗಿತ್ತು. ಈ ಬಾರಿಯೂ ಅದೇ ರೀತಿಯ ಕೊಡುಗೆ ಘೊಷಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಕೋವಿಡ್–19 ಸಾಂಕ್ರಾಮಿಕದಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್ಎಂಇ) ವಲಯವು ಹೆಚ್ಚಿನ ಹಾನಿ ಅನುಭವಿಸಿದೆ. ಹಾಗಾಗಿ ಈ ವಲಯಕ್ಕೆ ಪರಿಹಾರದ ಪ್ಯಾಕೇಜ್ ನೀಡುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.</p>.<p>ಪರಿಹಾರ ಪ್ಯಾಕೇಜ್ನ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲವು ಯೋಜನೆ ರೂಪಿಸಬೇಕಿದೆ. ಇದರಿಂದಾಗಿ ನಾವು ಹೆಚ್ಚು ಅಗತ್ಯ ಇರುವವರಿಗೆ ಕೇಂದ್ರೀಕೃತ ಮತ್ತು ಸರಿಯಾದ ಪರಿಹಾರವನ್ನು ನೀಡಬಹುದಾಗಿದೆ ಎಂದು ಅಸೋಚಾಂ ಅಧ್ಯಕ್ಷ ವಿನೀತ್ ಅಗರ್ವಾಲ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ಮುಂದೆ ಕೆಲವು ಸಲಹೆಗಳನ್ನೂ ಅವರು ಇಟ್ಟಿದ್ದಾರೆ. </p>.<p>* ಬ್ಯಾಂಕುಗಳು ಎಂಎಸ್ಎಂಇಗಳಿಗೆ ನೀಡುವ ದುಡಿಯುವ ಬಂಡವಾಳದ ಪ್ರಮಾಣವನ್ನು ಶೇಕಡ 20ರಷ್ಟು ಹೆಚ್ಚಿಸಬೇಕು. ಆದರೆ ಇದಕ್ಕೆ ಯಾವುದೇ ಹೆಚ್ಚುವರಿ ಮೇಲಾಧಾರ ವಿಧಿಸಬಾರದು.</p>.<p>* ಎಂಎಸ್ಎಂಇಗಳ ವಸೂಲಾಗದ ಸಾಲದ (ಎನ್ಪಿಎ) ಮರು ವರ್ಗೀಕರಣ ಆಗಬೇಕು.</p>.<p>* ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ನಡೆಸುವವರಿಗೂ ಕೆಲವು ಪರಿಹಾರ ಘೋಷಿಸಬೇಕು. ದುಡಿಯುವ ಬಂಡವಾಳದ ಸಾಲ ಹಾಗೂ ನೇರ ಪ್ರಯೋಜನಗಳನ್ನು ನೀಡಬೇಕು.</p>.<p>* ಕಳೆದ ಬಾರಿ ಗ್ರಾಮೀಣ ಭಾಗಕ್ಕೆ ಕೆಲವೊಂದು ಪರಿಹಾರ ಘೋಷಿಸಲಾಗಿತ್ತು. ಈ ಬಾರಿಯೂ ಅದೇ ರೀತಿಯ ಕೊಡುಗೆ ಘೊಷಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>