‘ಸ್ಥಳೀಯ ದಿನಸಿ ಅಂಗಡಿಗಳ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾಗುವ ‘ಕೃಷಿಭೂಮಿ ಫಲಗೊಳಿಸಿ’ ನೆರವು ಕಾರ್ಯಕ್ರಮವು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾಗಿದೆ.ಗ್ರಾಹಕರು ಜೊಮ್ಯಾಟೊ, ಸ್ವಿಗ್ಗಿ, ಮತ್ತು ಡಂಜೊ ಮೂಲಕ ತಾಜಾ ತರಕಾರಿ ಮತ್ತು ಹಣ್ಣುಗಳ ಖರೀದಿಗೆ ಬೇಡಿಕೆ ಸಲ್ಲಿಸಬಹುದಾಗಿದೆ’ ಎಂದು ನಿಂಜಾಕಾರ್ಟ್ನ ಸಿಇಒ ತಿರುಕುಮಾರನ್ ನಾಗರಾಜನ್ ತಿಳಿಸಿದ್ದಾರೆ.