ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿ ತೀರ ಪ್ರದೇಶ, ಎನ್ಆರ್ಬಿಸಿ, ಟಿಎಲ್ಬಿಸಿ ಕಾಲುವೆ ಅಚ್ಚುಕಟ್ಟು ಪ್ರದೇಶ, ಕೆರೆ ಹಾಗೂ ಕೊಳವೆಬಾವಿ ನೀರಾವರಿ ಆಶ್ರಯಿಸಿ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಈರುಳ್ಳಿ ಬೆಳೆಯುತ್ತಾರೆ. 2017ರಲ್ಲಿ ಕ್ವಿಂಟಲ್ಗೆ ₹ 5 ಸಾವಿರಕ್ಕೆ ಏರಿಕೆಯಾಗಿದ್ದ ಈರುಳ್ಳಿ ದರ 2018ರಲ್ಲಿ ಕುಸಿದಿತ್ತು. ಈ ವರ್ಷ ಒಂದು ತಿಂಗಳಿಗೂ ಹೆಚ್ಚು ಸಮಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರುಗತಿಯಲ್ಲಿ ಇದೆ. ಬೆಂಗಳೂರು, ಹೈದರಾಬಾದ್, ಮಹಾರಾಷ್ಟ್ರ, ಬೆಳಗಾವಿ, ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ರಾಯಚೂರು ಎಪಿಎಂಸಿಯಿಂದ ಈರುಳ್ಳಿ ಪೂರೈಕೆ ಮಾಡಲಾಗುತ್ತಿದೆ.