‘ಆಹಾರ ಉತ್ಪನ್ನಗಳ ಹಣದುಬ್ಬರ, ಅದರಲ್ಲೂ ಮುಖ್ಯವಾಗಿ ತರಕಾರಿಗಳ ಹಣದುಬ್ಬರ ಪ್ರಮಾಣ, ತಗ್ಗುತ್ತಿದೆ. ಇದಕ್ಕೆ ಒಂದು ಪ್ರಮುಖ ಕಾರಣ ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಪರಿಹಾರ ಕಾಣುತ್ತಿರುವುದು’ ಎಂದು ಎಕ್ಸಿಸ್ ಕ್ಯಾಪಿಟಲ್ನ ಮುಖ್ಯ ಅರ್ಥಶಾಸ್ತ್ರಜ್ಞ ಪೃಥ್ವಿರಾಜ್ ಶ್ರೀನಿವಾಸ್ ಹೇಳಿದ್ದಾರೆ. ಹಣದುಬ್ಬರದ ಪ್ರಮಾಣವನ್ನು ಶೇ 2ರಿಂದ ಶೇ 6ರ ನಡುವೆ ನಿಯಂತ್ರಿಸುವುದು ಆರ್ಬಿಐನ ಗುರಿ. ಆದರೆ, 2020ರ ಏಪ್ರಿಲ್ನಿಂದ ಈಚೆಗೆ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ.