<p><strong>ನವದೆಹಲಿ:</strong> ಭವಿಷ್ಯ ನಿಧಿಗೆ (ಪಿಎಫ್) ಪ್ರತಿ ತಿಂಗಳೂ ತಾವು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಿ ಮನೆಗೆ ಹೆಚ್ಚು ಸಂಬಳ ತೆಗೆದುಕೊಂಡು ಹೋಗುವ ಆಯ್ಕೆ ಅವಕಾಶವನ್ನು ಉದ್ಯೋಗಿಗಳು ಸದ್ಯದಲ್ಲೇ ಪಡೆದುಕೊಳ್ಳಲಿದ್ದಾರೆ.</p>.<p>ಮೂಲವೇತನದ ಶೇ 12ರಷ್ಟು ಮೊತ್ತವನ್ನು ‘ಪಿಎಫ್ಗೆ’ ಶಾಸನಬದ್ಧವಾಗಿ ವಂತಿಗೆ ಸಲ್ಲಿಸುವುದನ್ನು ಶೇ 9ರವರೆಗೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ಆಯ್ಕೆ ಅವಕಾಶ ಒದಗಿಸುವುದು ಕೇಂದ್ರ ಕಾರ್ಮಿಕ ಇಲಾಖೆಯ ಉದ್ದೇಶವಾಗಿದೆ.</p>.<p>ಮನೆಗೆ ತೆಗೆದುಕೊಂಡು ಹೋಗುವ ಸಂಬಳ ಹೆಚ್ಚಿಸುವುದರಿಂದ ಉದ್ಯೋಗಿಗಳ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳಗೊಂಡು ಆರ್ಥಿಕತೆಗೆ ಚೇತರಿಕೆ ದೊರೆಯಲಿದೆ ಎನ್ನುವ ಚಿಂತನೆಯು ಈ ಪ್ರಸ್ತಾವದ ಹಿಂದೆ ಇದೆ.</p>.<p>ಈ ಪ್ರಸ್ತಾವ ಒಳಗೊಂಡಿರುವ ‘ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ–2019’ ಅನ್ನು ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ. ಮಾಲೀಕರ ವಂತಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇಂದ್ರ ಸಚಿವ ಸಂಪುಟವು ಈಗಾಗಲೇ ಈ ಮಸೂದೆಗೆ ಸಮ್ಮತಿ ನೀಡಿದೆ.</p>.<p>ಸದ್ಯಕ್ಕೆ ಮೂಲ ವೇತನದ ಶೇ 12ರಷ್ಟನ್ನು ಉದ್ಯೋಗಿಗಳು ಮತ್ತು ಮಾಲೀಕರು ಪ್ರತಿ ತಿಂಗಳೂ ಪ್ರತ್ಯೇಕವಾಗಿ ಭವಿಷ್ಯ ನಿಧಿಗೆ ಕಡ್ಡಾಯವಾಗಿ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಉದ್ಯೋಗಿಗಳ ತಿಂಗಳ ವಂತಿಗೆ ಕಡಿಮೆಯಾದರೆ ದೀರ್ಘಾವಧಿಯಲ್ಲಿ ಅವರ ‘ಪಿಎಫ್’ ಉಳಿತಾಯವೂ ಕಡಿಮೆಯಾಗುವ ಅಪಾಯ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭವಿಷ್ಯ ನಿಧಿಗೆ (ಪಿಎಫ್) ಪ್ರತಿ ತಿಂಗಳೂ ತಾವು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಿ ಮನೆಗೆ ಹೆಚ್ಚು ಸಂಬಳ ತೆಗೆದುಕೊಂಡು ಹೋಗುವ ಆಯ್ಕೆ ಅವಕಾಶವನ್ನು ಉದ್ಯೋಗಿಗಳು ಸದ್ಯದಲ್ಲೇ ಪಡೆದುಕೊಳ್ಳಲಿದ್ದಾರೆ.</p>.<p>ಮೂಲವೇತನದ ಶೇ 12ರಷ್ಟು ಮೊತ್ತವನ್ನು ‘ಪಿಎಫ್ಗೆ’ ಶಾಸನಬದ್ಧವಾಗಿ ವಂತಿಗೆ ಸಲ್ಲಿಸುವುದನ್ನು ಶೇ 9ರವರೆಗೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ಆಯ್ಕೆ ಅವಕಾಶ ಒದಗಿಸುವುದು ಕೇಂದ್ರ ಕಾರ್ಮಿಕ ಇಲಾಖೆಯ ಉದ್ದೇಶವಾಗಿದೆ.</p>.<p>ಮನೆಗೆ ತೆಗೆದುಕೊಂಡು ಹೋಗುವ ಸಂಬಳ ಹೆಚ್ಚಿಸುವುದರಿಂದ ಉದ್ಯೋಗಿಗಳ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳಗೊಂಡು ಆರ್ಥಿಕತೆಗೆ ಚೇತರಿಕೆ ದೊರೆಯಲಿದೆ ಎನ್ನುವ ಚಿಂತನೆಯು ಈ ಪ್ರಸ್ತಾವದ ಹಿಂದೆ ಇದೆ.</p>.<p>ಈ ಪ್ರಸ್ತಾವ ಒಳಗೊಂಡಿರುವ ‘ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ–2019’ ಅನ್ನು ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ. ಮಾಲೀಕರ ವಂತಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇಂದ್ರ ಸಚಿವ ಸಂಪುಟವು ಈಗಾಗಲೇ ಈ ಮಸೂದೆಗೆ ಸಮ್ಮತಿ ನೀಡಿದೆ.</p>.<p>ಸದ್ಯಕ್ಕೆ ಮೂಲ ವೇತನದ ಶೇ 12ರಷ್ಟನ್ನು ಉದ್ಯೋಗಿಗಳು ಮತ್ತು ಮಾಲೀಕರು ಪ್ರತಿ ತಿಂಗಳೂ ಪ್ರತ್ಯೇಕವಾಗಿ ಭವಿಷ್ಯ ನಿಧಿಗೆ ಕಡ್ಡಾಯವಾಗಿ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಉದ್ಯೋಗಿಗಳ ತಿಂಗಳ ವಂತಿಗೆ ಕಡಿಮೆಯಾದರೆ ದೀರ್ಘಾವಧಿಯಲ್ಲಿ ಅವರ ‘ಪಿಎಫ್’ ಉಳಿತಾಯವೂ ಕಡಿಮೆಯಾಗುವ ಅಪಾಯ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>