ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನ ಮಧ್ಯಭಾಗದಲ್ಲಿ ಲಾಕ್ಡೌನ್ ಘೋಷಿಸಿತು. ಕೃಷಿ ಚಟುವಟಿಕೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಇದ್ದರೂ ಕಾರ್ಮಿಕರ ಕೊರತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ನ್ಯಾಷನಲ್ ಬಲ್ಕ್ ಹ್ಯಾಂಡ್ಲಿಂಗ್ ಕಾರ್ಪೊರೇಷನ್ (ಎನ್ಬಿಎಚ್ಸಿ) ಅಂದಾಜು ಮಾಡಿದೆ.