‘ಆರ್ಥಿಕತೆಯು ಈಗಷ್ಟೇ ಬೆಳವಣಿಗೆ ಹಾದಿಗೆ ಮರಳಿದೆ. ಹೀಗಾಗಿ, ದರವು ಮತ್ತೆ ಹೆಚ್ಚಾಗಲಾರದು. ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಯಿಂದಾಗಿ ಹಣದುಬ್ಬರವು ಉಂಟಾಗಿದೆ ಎನ್ನುವುದು ನನ್ನ ಭಾವನೆ. ಒಮ್ಮೆ ಈ ಅಡಚಣೆ ನಿವಾರಣೆ ಆದರೆ ಹಿಂದಿನ ಬಾರಿಯ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯ ಸಂದರ್ಭದಲ್ಲಿ ಕಂಡಷ್ಟು ಏರಿಕೆಯನ್ನು ಹಣದುಬ್ಬರವು ಕಾಣದೇ ಇರಬಹುದು’ ಎಂದು ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರು ಈಚೆಗಷ್ಟೇ ಹೇಳಿದ್ದಾರೆ.