<p><strong>ಮುಂಬೈ</strong>: ಮೃತ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಹಾಗೂ ಅವರ ಹೆಸರಿನ ಲಾಕರ್ನಲ್ಲಿ ಇರುವ ಅಮೂಲ್ಯ ವಸ್ತುಗಳ ಕ್ಲೇಮ್ಗಳನ್ನು ಇತ್ಯರ್ಥಪಡಿಸಲು ಏಕರೂಪಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.</p>.<p>ಮೃತ ಗ್ರಾಹಕರು ನಾಮನಿರ್ದೇಶನ ಮಾಡಿರುವ ವ್ಯಕ್ತಿಗಳು ಸಲ್ಲಿಸುವ ಕ್ಲೇಮ್ಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ.</p>.<p class="title">‘ಪ್ರಕ್ರಿಯೆಯು ಏಕರೂಪಿ ಆದಾಗ, ಕ್ಲೇಮ್ಗಳು ಸರಳವಾಗಿ ಹಾಗೂ ಸುಲಭವಾಗಿ ಇತ್ಯರ್ಥ ಆಗುವ ನಿರೀಕ್ಷೆ ಇದೆ’ ಎಂದು ಮಲ್ಹೋತ್ರಾ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ – 1949ರ ಅನ್ವಯ, ಬ್ಯಾಂಕ್ ಠೇವಣಿಗಳಿಗೆ ಹಾಗೂ ಲಾಕರ್ಗಳಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ.</p>.<p class="title">ನಾಮನಿರ್ದೇಶಿತ ವ್ಯಕ್ತಿಗಳು, ಕಾನೂನುಬದ್ಧ ಹಕ್ಕುದಾರರು ಕ್ಲೇಮ್ ಅರ್ಜಿ ಸಲ್ಲಿಸಿದಾಗ ಅದನ್ನು ತ್ವರಿತವಾಗಿ, ಸುಲಭವಾಗಿ ಇತ್ಯರ್ಥಪಡಿಸಲು ಬ್ಯಾಂಕುಗಳು ಸರಳವಾದ ಪ್ರಕ್ರಿಯೆ ರೂಪಿಸಬೇಕು ಎಂದು ಆರ್ಬಿಐ ನೀತಿಯು ಹೇಳುತ್ತದೆ. ಆದರೆ ಪ್ರಕ್ರಿಯೆಗಳಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇದೆ.</p>.<p class="title">‘ಗ್ರಾಹಕರಿಗೆ ಒದಗಿಸುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಲ್ಲಿಸಬೇಕಿರುವ ದಾಖಲೆಗಳನ್ನು ನಿರ್ದಿಷ್ಟಪಡಿಸಲು ತೀರ್ಮಾನಿಸಲಾಗಿದೆ. ಈ ದಿಸೆಯಲ್ಲಿ ಕರಡು ಸುತ್ತೋಲೆಯೊಂದನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಶೀಘ್ರವೇ ಹೊರಡಿಸಲಾಗುತ್ತದೆ’ ಎಂದು ಆರ್ಬಿಐ ಹೇಳಿದೆ.</p>.<p class="title">ಈಗ ಇಂತಹ ಕ್ಲೇಮ್ ಇತ್ಯರ್ಥಪಡಿಸಲು ಬ್ಯಾಂಕ್ಗಳು ಕೇಳುವ ದಾಖಲೆಗಳಲ್ಲಿ ಏಕರೂಪ ಇಲ್ಲದಿರಬಹುದು ಎನ್ನಲಾಗಿದೆ. ಅದೇ ರೀತಿ, ನಾಮನಿರ್ದೇಶನ ಇಲ್ಲದ ಖಾತೆಗಳಲ್ಲಿನ ಹಣವನ್ನು ಪಡೆಯುವ ವಿಚಾರದಲ್ಲಿಯೂ ಬೇರೆ ಬೇರೆ ಬ್ಯಾಂಕುಗಳು ಭಿನ್ನತೆಗಳು ಇರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮೃತ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಹಾಗೂ ಅವರ ಹೆಸರಿನ ಲಾಕರ್ನಲ್ಲಿ ಇರುವ ಅಮೂಲ್ಯ ವಸ್ತುಗಳ ಕ್ಲೇಮ್ಗಳನ್ನು ಇತ್ಯರ್ಥಪಡಿಸಲು ಏಕರೂಪಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.</p>.<p>ಮೃತ ಗ್ರಾಹಕರು ನಾಮನಿರ್ದೇಶನ ಮಾಡಿರುವ ವ್ಯಕ್ತಿಗಳು ಸಲ್ಲಿಸುವ ಕ್ಲೇಮ್ಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ.</p>.<p class="title">‘ಪ್ರಕ್ರಿಯೆಯು ಏಕರೂಪಿ ಆದಾಗ, ಕ್ಲೇಮ್ಗಳು ಸರಳವಾಗಿ ಹಾಗೂ ಸುಲಭವಾಗಿ ಇತ್ಯರ್ಥ ಆಗುವ ನಿರೀಕ್ಷೆ ಇದೆ’ ಎಂದು ಮಲ್ಹೋತ್ರಾ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ – 1949ರ ಅನ್ವಯ, ಬ್ಯಾಂಕ್ ಠೇವಣಿಗಳಿಗೆ ಹಾಗೂ ಲಾಕರ್ಗಳಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ.</p>.<p class="title">ನಾಮನಿರ್ದೇಶಿತ ವ್ಯಕ್ತಿಗಳು, ಕಾನೂನುಬದ್ಧ ಹಕ್ಕುದಾರರು ಕ್ಲೇಮ್ ಅರ್ಜಿ ಸಲ್ಲಿಸಿದಾಗ ಅದನ್ನು ತ್ವರಿತವಾಗಿ, ಸುಲಭವಾಗಿ ಇತ್ಯರ್ಥಪಡಿಸಲು ಬ್ಯಾಂಕುಗಳು ಸರಳವಾದ ಪ್ರಕ್ರಿಯೆ ರೂಪಿಸಬೇಕು ಎಂದು ಆರ್ಬಿಐ ನೀತಿಯು ಹೇಳುತ್ತದೆ. ಆದರೆ ಪ್ರಕ್ರಿಯೆಗಳಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇದೆ.</p>.<p class="title">‘ಗ್ರಾಹಕರಿಗೆ ಒದಗಿಸುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಲ್ಲಿಸಬೇಕಿರುವ ದಾಖಲೆಗಳನ್ನು ನಿರ್ದಿಷ್ಟಪಡಿಸಲು ತೀರ್ಮಾನಿಸಲಾಗಿದೆ. ಈ ದಿಸೆಯಲ್ಲಿ ಕರಡು ಸುತ್ತೋಲೆಯೊಂದನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಶೀಘ್ರವೇ ಹೊರಡಿಸಲಾಗುತ್ತದೆ’ ಎಂದು ಆರ್ಬಿಐ ಹೇಳಿದೆ.</p>.<p class="title">ಈಗ ಇಂತಹ ಕ್ಲೇಮ್ ಇತ್ಯರ್ಥಪಡಿಸಲು ಬ್ಯಾಂಕ್ಗಳು ಕೇಳುವ ದಾಖಲೆಗಳಲ್ಲಿ ಏಕರೂಪ ಇಲ್ಲದಿರಬಹುದು ಎನ್ನಲಾಗಿದೆ. ಅದೇ ರೀತಿ, ನಾಮನಿರ್ದೇಶನ ಇಲ್ಲದ ಖಾತೆಗಳಲ್ಲಿನ ಹಣವನ್ನು ಪಡೆಯುವ ವಿಚಾರದಲ್ಲಿಯೂ ಬೇರೆ ಬೇರೆ ಬ್ಯಾಂಕುಗಳು ಭಿನ್ನತೆಗಳು ಇರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>