<p><strong>ಹೈದರಾಬಾದ್</strong>: ಬೇರೆ ರಾಜ್ಯಗಳ ತೋತಾಪುರಿ ಮಾವಿನ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ ನಂತರವೂ, ತನ್ನ ನಿಲುವಿನಲ್ಲಿ ಬದಲಾವಣೆ ತರದೆ ಇರಲು ಆಂಧ್ರಪ್ರದೇಶ ಸರ್ಕಾರವು ತೀರ್ಮಾನಿಸಿರುವಂತಿದೆ.</p>.<p>ಏಕೆಂದರೆ, ನಿರ್ಬಂಧ ವಿಧಿಸಿರುವ ಕ್ರಮವು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಸರ್ಕಾರ ಭಾವಿಸಿದೆ. ಕರ್ನಾಟಕದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ. ₹5ರಂತೆ ಮಾವು ಮಾರಾಟ ಮಾಡುವುದು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗೆ ಪೆಟ್ಟು ಕೊಡುವಂತಿದೆ ಎಂದು ಆಂಧ್ರ ಸರ್ಕಾರವು ಭಾವಿಸಿದೆ.</p>.<p>ಕರ್ನಾಟಕದಿಂದ ಬರುವ ಮಾವಿಗೆ ನಿಷೇಧ ವಿಧಿಸುವುದು ಅಗತ್ಯವಾಗಿತ್ತು. ನಿಷೇಧ ಹೇರದೆ ಇದ್ದಿದ್ದರೆ ಆಂಧ್ರಪ್ರದೇಶದ ರೈತರು ಪ್ರತಿಭಟನೆಗೆ ಮುಂದಾಗುತ್ತಿದ್ದರು, ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇತ್ತು ಎಂದು ಆಂಧ್ರಪ್ರದೇಶ ಸರ್ಕಾರದ ಮೂಲಗಳು ಹೇಳಿವೆ.</p>.<p>ಬೇರೆ ರಾಜ್ಯಗಳ ತೋತಾಪುರಿ ಮಾವು ಚಿತ್ತೂರಿಗೆ ತರುವಂತಿಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿ ಜೂನ್ 7ರಂದು ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ.ಗೆ ₹8ರಂತೆ ತೋತಾಪುರಿ ಮಾವು ಪೂರೈಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಬೇರೆ ರಾಜ್ಯಗಳ ತೋತಾಪುರಿ ಮಾವಿನ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ ನಂತರವೂ, ತನ್ನ ನಿಲುವಿನಲ್ಲಿ ಬದಲಾವಣೆ ತರದೆ ಇರಲು ಆಂಧ್ರಪ್ರದೇಶ ಸರ್ಕಾರವು ತೀರ್ಮಾನಿಸಿರುವಂತಿದೆ.</p>.<p>ಏಕೆಂದರೆ, ನಿರ್ಬಂಧ ವಿಧಿಸಿರುವ ಕ್ರಮವು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಸರ್ಕಾರ ಭಾವಿಸಿದೆ. ಕರ್ನಾಟಕದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ. ₹5ರಂತೆ ಮಾವು ಮಾರಾಟ ಮಾಡುವುದು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗೆ ಪೆಟ್ಟು ಕೊಡುವಂತಿದೆ ಎಂದು ಆಂಧ್ರ ಸರ್ಕಾರವು ಭಾವಿಸಿದೆ.</p>.<p>ಕರ್ನಾಟಕದಿಂದ ಬರುವ ಮಾವಿಗೆ ನಿಷೇಧ ವಿಧಿಸುವುದು ಅಗತ್ಯವಾಗಿತ್ತು. ನಿಷೇಧ ಹೇರದೆ ಇದ್ದಿದ್ದರೆ ಆಂಧ್ರಪ್ರದೇಶದ ರೈತರು ಪ್ರತಿಭಟನೆಗೆ ಮುಂದಾಗುತ್ತಿದ್ದರು, ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇತ್ತು ಎಂದು ಆಂಧ್ರಪ್ರದೇಶ ಸರ್ಕಾರದ ಮೂಲಗಳು ಹೇಳಿವೆ.</p>.<p>ಬೇರೆ ರಾಜ್ಯಗಳ ತೋತಾಪುರಿ ಮಾವು ಚಿತ್ತೂರಿಗೆ ತರುವಂತಿಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿ ಜೂನ್ 7ರಂದು ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ.ಗೆ ₹8ರಂತೆ ತೋತಾಪುರಿ ಮಾವು ಪೂರೈಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>