ಜಮೀನು, ನೀರಾವರಿ, ಬೆಳೆ ಪದ್ಧತಿಗೆ ಸಂಬಂಧಿಸಿದ ಹಲವು ಮಾನದಂಡಗಳ ಅಡಿ ಪರಿಶೀಲನೆ ನಡೆಸಲು ಉಪಗ್ರಹ ಆಧಾರಿತ ಚಿತ್ರಗಳನ್ನು ಬಳಸುತ್ತಿರುವ, ಆ ಮೂಲಕ ಸಾಲ ವಿತರಣೆ ಕುರಿತು ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳುವ ದೇಶದ ಮೊದಲ ಬ್ಯಾಂಕ್ ತಮ್ಮದು ಎಂದು ಅನೂಪ್ ಹೇಳಿದರು. ಈ ವ್ಯವಸ್ಥೆಯ ಅಡಿ, ಸಾಲ ನೀಡುವ ಮುನ್ನ ಬ್ಯಾಂಕ್ ಅಧಿಕಾರಿಗಳು ಜಮೀನಿನ ಪರಿಶೀಲನೆಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲ ಎಂದರು.