<p><strong>ನವದೆಹಲಿ: </strong>ವೇತನೇತರ ಆದಾಯದ ಮೇಲೆ ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣವನ್ನು ಶೇ 25ರಷ್ಟು ಕಡಿಮೆ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದ್ದಾರೆ.</p>.<p>ಈ ಕ್ರಮದಿಂದಾಗಿ ₹50,000 ಕೋಟಿಯಷ್ಟು ಹಣದ ದ್ರವ್ಯತೆ ಉಂಟಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಕಡಿಮೆ ಮಾಡಲಾಗಿರುವ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ದರವು ಬಡ್ಡಿ ಪಾವತಿ, ಒಪ್ಪಂದಗಳಲ್ಲಿನ ಪಾವತಿ, ವೃತ್ತಿಪರ ಶುಲ್ಕಗಳು, ಲಾಭಾಂಶ, ಕಮಿಷನ್ ಹಾಗೂ ದಳ್ಳಾಲಿ ಆದಾಯಗಳಲ್ಲಿ ಅನ್ವಯವಾಗುತ್ತದೆ. ನಾಳೆಯಿಂದಲೇ ಟಿಡಿಎಸ್ ದರ ಕಡಿತ ಜಾರಿಯಾಗಲಿದ್ದು, 2020–21 ಹಣಕಾಸು ವರ್ಷ ಪೂರ್ತಿ ಅನ್ವಯವಾಗಲಿದೆ.</p>.<p>2019–20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆಯ ದಿನವನ್ನು 2020ರ ಜುಲೈ 31 ಮತ್ತು ಅಕ್ಟೋಬರ್ 31ರಿಂದ ನವೆಂಬರ್ 30ರ ವರೆಗೂ ವಿಸ್ತರಿಸಲಾಗಿದೆ. ತೆರಿಗೆ ಲೆಕ್ಕಪರಿಶೋಧನೆಗೆ ಅಂತಿಮ ಅವಧಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.</p>.<p>ತೆರಿಗೆ ಇಲಾಖೆಯಿಂದ ಬಾಕಿ ಇರುವ ಮರುಪಾವತಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಇಲಾಖೆಗೆ ತಿಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದತ್ತಿ ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳು, ಸಹಭಾಗಿತ್ವದಂತಹ ಕಾರ್ಪೊರೇಟ್ ಹೊರತಾದ ಉದ್ಯಮಗಳು ಒಳಗೊಂಡಿರಲಿವೆ.</p>.<p>ಹೆಚ್ಚುವರಿ ಹಣ ಅಥವಾ ದಂಡ ಪಾವತಿ ಇಲ್ಲದೆಯೇ ವಿವಾದ್ ಸೇ ವಿಶ್ವಾಸ್ ಯೋಜನೆ ಮೂಲಕ ತೆರಿಗೆ ಪಾವತಿಸುವ ಅವಕಾಶವನ್ನು ಡಿಸೆಂಬರ್ 31ರ ವರೆಗೂ ವಿಸ್ತರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ವೇತನೇತರ ಆದಾಯದ ಮೇಲೆ ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣವನ್ನು ಶೇ 25ರಷ್ಟು ಕಡಿಮೆ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದ್ದಾರೆ.</p>.<p>ಈ ಕ್ರಮದಿಂದಾಗಿ ₹50,000 ಕೋಟಿಯಷ್ಟು ಹಣದ ದ್ರವ್ಯತೆ ಉಂಟಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಕಡಿಮೆ ಮಾಡಲಾಗಿರುವ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ದರವು ಬಡ್ಡಿ ಪಾವತಿ, ಒಪ್ಪಂದಗಳಲ್ಲಿನ ಪಾವತಿ, ವೃತ್ತಿಪರ ಶುಲ್ಕಗಳು, ಲಾಭಾಂಶ, ಕಮಿಷನ್ ಹಾಗೂ ದಳ್ಳಾಲಿ ಆದಾಯಗಳಲ್ಲಿ ಅನ್ವಯವಾಗುತ್ತದೆ. ನಾಳೆಯಿಂದಲೇ ಟಿಡಿಎಸ್ ದರ ಕಡಿತ ಜಾರಿಯಾಗಲಿದ್ದು, 2020–21 ಹಣಕಾಸು ವರ್ಷ ಪೂರ್ತಿ ಅನ್ವಯವಾಗಲಿದೆ.</p>.<p>2019–20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆಯ ದಿನವನ್ನು 2020ರ ಜುಲೈ 31 ಮತ್ತು ಅಕ್ಟೋಬರ್ 31ರಿಂದ ನವೆಂಬರ್ 30ರ ವರೆಗೂ ವಿಸ್ತರಿಸಲಾಗಿದೆ. ತೆರಿಗೆ ಲೆಕ್ಕಪರಿಶೋಧನೆಗೆ ಅಂತಿಮ ಅವಧಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.</p>.<p>ತೆರಿಗೆ ಇಲಾಖೆಯಿಂದ ಬಾಕಿ ಇರುವ ಮರುಪಾವತಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಇಲಾಖೆಗೆ ತಿಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದತ್ತಿ ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳು, ಸಹಭಾಗಿತ್ವದಂತಹ ಕಾರ್ಪೊರೇಟ್ ಹೊರತಾದ ಉದ್ಯಮಗಳು ಒಳಗೊಂಡಿರಲಿವೆ.</p>.<p>ಹೆಚ್ಚುವರಿ ಹಣ ಅಥವಾ ದಂಡ ಪಾವತಿ ಇಲ್ಲದೆಯೇ ವಿವಾದ್ ಸೇ ವಿಶ್ವಾಸ್ ಯೋಜನೆ ಮೂಲಕ ತೆರಿಗೆ ಪಾವತಿಸುವ ಅವಕಾಶವನ್ನು ಡಿಸೆಂಬರ್ 31ರ ವರೆಗೂ ವಿಸ್ತರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>