<p><strong>ಕಲಬುರ್ಗಿ:</strong> ಬರದಿಂದ ತೊಗರಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಲಿದ್ದು, ತೊಗರಿಬೇಳೆಯ ಬೆಲೆ ಗಗನಮುಖಿಯಾಗುವ ಸಾಧ್ಯತೆ ಹೆಚ್ಚಿದೆ.</p>.<p>ರಾಜ್ಯದಲ್ಲಿ ತೊಗರಿ ಬೆಳೆಯ ಪ್ರದೇಶ 9 ಲಕ್ಷ ಹೆಕ್ಟೇರ್ ಇದ್ದು, ‘ತೊಗರಿ ಕಣಜ’ ಎಂದೇ ಪ್ರಸಿದ್ಧಿ ಹೊಂದಿರುವ ಕಲಬುರ್ಗಿ ಜಿಲ್ಲೆ ಒಂದರಲ್ಲಿಯೇ 4.53 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿದೆ.</p>.<p>‘ಜಿಲ್ಲೆಯಲ್ಲಿ ಸರಾಸರಿ ತೊಗರಿ ಉತ್ಪಾದನೆಯ ಪ್ರಮಾಣ ಎಕರೆಗೆ ನಾಲ್ಕುವರೆ ಕ್ವಿಂಟಲ್ ಇದ್ದು, ಈ ವರ್ಷ 5.04 ಲಕ್ಷ ಟನ್ ಇಳುವರಿ ನಿರೀಕ್ಷಿಸಲಾಗಿತ್ತು. ಶೇ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಉತ್ಪಾದನೆಯೂ ಗಣನೀಯವಾಗಿ ಕುಂಠಿತವಾಗಲಿದೆ’ ಎನ್ನುವುದು ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಅವರ ವಿವರಣೆ.</p>.<p>‘ಬೆಳೆ ಹಾನಿ ಒಂದೆಡೆಯಾದರೆ, ತೇವಾಂಶದ ಕೊರತೆಯಿಂದ ಬಹುತೇಕ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಹೂವು ಉದುರಿದ್ದು, ಕೆಲವೆಡೆ ಕಾಯಿಕಟ್ಟಿದ್ದರೂ ಅವು ಹುಲುಸಾಗಿಲ್ಲ’ ಎನ್ನುತ್ತಾರೆ ಅವರು.</p>.<p>‘ಹೂವಾಡುವ ಹಂತದಲ್ಲಿ ಮಳೆಯಾಗಿದ್ದರೆ ತೇವಾಂಶ ಹೆಚ್ಚಿ ಉತ್ತಮ ಬೆಳೆ ಬರುತ್ತಿತ್ತು. ಈಗ ರಾಶಿ ಮಾಡಿದ್ದು, ಇಳುವರಿ ಅತ್ಯಂತ ಕಡಿಮೆ ಬಂದಿದೆ. ಬಿತ್ತನೆಗೆ ಮಾಡಿರುವ ಖರ್ಚೂ ಸಹ ಬರುವುದಿಲ್ಲ’ ಎಂದು ತಾಲ್ಲೂಕಿನ ಕೆರೆಭೋಸಗಾ ಗ್ರಾಮದ ರೈತ ಸೋಮಶೇಖರ ಮುಗಳಿ ಅಳಲು ತೋಡಿಕೊಂಡರು.</p>.<p>‘ಮಾರುಕಟ್ಟೆಯಲ್ಲಿ ಸದ್ಯ ತೊಗರಿ ಧಾರಣೆ ಪ್ರತಿ ಕ್ವಿಂಟಲ್ಗೆ ₹4,500 ಇದೆ. ಇದೇ ದರದಲ್ಲಿ ಲೆಕ್ಕ ಹಾಕಿದರೆ ಕಲಬುರ್ಗಿ ಜಿಲ್ಲೆಯಲ್ಲೇ ₹1,100 ಕೋಟಿಗೂ ಅಧಿಕ ಮೊತ್ತದ ತೊಗರಿ ಬೆಳೆ ನಷ್ಟವಾಗಿದೆ’ ಎನ್ನುವುದು ಅಧಿಕಾರಿಗಳ ಅಂದಾಜು.</p>.<p>ಈಗ ತೊಗರಿಯ ರಾಶಿ ಆರಂಭಗೊಂಡಿದೆ. ಎಪಿಎಂಸಿಗಳಿಗೆ ನವೆಂಬರ್ನಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಆವಕವಾಗುತ್ತಿದ್ದು, ಡಿಸೆಂಬರ್ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಆವಕದ ಪ್ರಮಾಣ ಹೆಚ್ಚಿರುತ್ತದೆ.</p>.<p>ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ತೊಗರಿ ಉತ್ಪಾದನೆಯೂ ಹೆಚ್ಚಾಗಿತ್ತು. ಹೀಗಾಗಿ ರೈತರಿಂದ ₹6 ಸಾವಿರ ಬೆಂಬಲ ಬೆಲೆಯಡಿ ರಾಜ್ಯದಲ್ಲಿ 17 ಲಕ್ಷ ಕ್ವಿಂಟಲ್ ತೊಗರಿಯನ್ನು ಸರ್ಕಾರ ಖರೀದಿಸಿತ್ತು.</p>.<p>ಆದರೆ, 2015ರಲ್ಲಿ ತೀವ್ರ ಬರ ಆವರಿಸಿ ತೊಗರಿ ಉತ್ಪಾದನೆ ಕಡಿಮೆಯಾಗಿತ್ತು. ತೊಗರಿ ದರ ಪ್ರತಿ ಕ್ವಿಂಟಲ್ಗೆ ₹11,760 ಹಾಗೂ ತೊಗರಿ ಬೇಳೆಯ ದರ ಕೆ.ಜಿಗೆ ₹170 ತಲುಪಿತ್ತು. ಈ ವರ್ಷವೂ ಅಂಥದ್ದೇ ಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ವರ್ತಕರು.</p>.<p>***</p>.<p>ಆರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. 25 ಚೀಲ ಇಳುವರಿ ಬರಬೇಕಿತ್ತು. ಕೇವಲ ಆರು ಚೀಲ ಬಂದಿದೆ.</p>.<p><strong>–ಸೋಮಶೇಖರ ಮುಗಳಿ, ಕೆರಿಭೋಸಗಾ ರೈತ</strong></p>.<p>ಎಂಟು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಬೆಳವಣಿಗೆ ಕುಂಠಿತಗೊಂಡಿದ್ದು, ಹೂವು ಉದುರಿವೆ. ಕಾಯಿಯೂ ಕಟ್ಟಿಲ್ಲ. ಈಗ ಬೆಳೆ ಒಣಗುತ್ತಿದೆ.</p>.<p><strong>–ಬಾಬಾಮಿಯಾ, ಕಲಬುರ್ಗಿ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಬರದಿಂದ ತೊಗರಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಲಿದ್ದು, ತೊಗರಿಬೇಳೆಯ ಬೆಲೆ ಗಗನಮುಖಿಯಾಗುವ ಸಾಧ್ಯತೆ ಹೆಚ್ಚಿದೆ.</p>.<p>ರಾಜ್ಯದಲ್ಲಿ ತೊಗರಿ ಬೆಳೆಯ ಪ್ರದೇಶ 9 ಲಕ್ಷ ಹೆಕ್ಟೇರ್ ಇದ್ದು, ‘ತೊಗರಿ ಕಣಜ’ ಎಂದೇ ಪ್ರಸಿದ್ಧಿ ಹೊಂದಿರುವ ಕಲಬುರ್ಗಿ ಜಿಲ್ಲೆ ಒಂದರಲ್ಲಿಯೇ 4.53 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿದೆ.</p>.<p>‘ಜಿಲ್ಲೆಯಲ್ಲಿ ಸರಾಸರಿ ತೊಗರಿ ಉತ್ಪಾದನೆಯ ಪ್ರಮಾಣ ಎಕರೆಗೆ ನಾಲ್ಕುವರೆ ಕ್ವಿಂಟಲ್ ಇದ್ದು, ಈ ವರ್ಷ 5.04 ಲಕ್ಷ ಟನ್ ಇಳುವರಿ ನಿರೀಕ್ಷಿಸಲಾಗಿತ್ತು. ಶೇ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಉತ್ಪಾದನೆಯೂ ಗಣನೀಯವಾಗಿ ಕುಂಠಿತವಾಗಲಿದೆ’ ಎನ್ನುವುದು ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಅವರ ವಿವರಣೆ.</p>.<p>‘ಬೆಳೆ ಹಾನಿ ಒಂದೆಡೆಯಾದರೆ, ತೇವಾಂಶದ ಕೊರತೆಯಿಂದ ಬಹುತೇಕ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಹೂವು ಉದುರಿದ್ದು, ಕೆಲವೆಡೆ ಕಾಯಿಕಟ್ಟಿದ್ದರೂ ಅವು ಹುಲುಸಾಗಿಲ್ಲ’ ಎನ್ನುತ್ತಾರೆ ಅವರು.</p>.<p>‘ಹೂವಾಡುವ ಹಂತದಲ್ಲಿ ಮಳೆಯಾಗಿದ್ದರೆ ತೇವಾಂಶ ಹೆಚ್ಚಿ ಉತ್ತಮ ಬೆಳೆ ಬರುತ್ತಿತ್ತು. ಈಗ ರಾಶಿ ಮಾಡಿದ್ದು, ಇಳುವರಿ ಅತ್ಯಂತ ಕಡಿಮೆ ಬಂದಿದೆ. ಬಿತ್ತನೆಗೆ ಮಾಡಿರುವ ಖರ್ಚೂ ಸಹ ಬರುವುದಿಲ್ಲ’ ಎಂದು ತಾಲ್ಲೂಕಿನ ಕೆರೆಭೋಸಗಾ ಗ್ರಾಮದ ರೈತ ಸೋಮಶೇಖರ ಮುಗಳಿ ಅಳಲು ತೋಡಿಕೊಂಡರು.</p>.<p>‘ಮಾರುಕಟ್ಟೆಯಲ್ಲಿ ಸದ್ಯ ತೊಗರಿ ಧಾರಣೆ ಪ್ರತಿ ಕ್ವಿಂಟಲ್ಗೆ ₹4,500 ಇದೆ. ಇದೇ ದರದಲ್ಲಿ ಲೆಕ್ಕ ಹಾಕಿದರೆ ಕಲಬುರ್ಗಿ ಜಿಲ್ಲೆಯಲ್ಲೇ ₹1,100 ಕೋಟಿಗೂ ಅಧಿಕ ಮೊತ್ತದ ತೊಗರಿ ಬೆಳೆ ನಷ್ಟವಾಗಿದೆ’ ಎನ್ನುವುದು ಅಧಿಕಾರಿಗಳ ಅಂದಾಜು.</p>.<p>ಈಗ ತೊಗರಿಯ ರಾಶಿ ಆರಂಭಗೊಂಡಿದೆ. ಎಪಿಎಂಸಿಗಳಿಗೆ ನವೆಂಬರ್ನಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಆವಕವಾಗುತ್ತಿದ್ದು, ಡಿಸೆಂಬರ್ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಆವಕದ ಪ್ರಮಾಣ ಹೆಚ್ಚಿರುತ್ತದೆ.</p>.<p>ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ತೊಗರಿ ಉತ್ಪಾದನೆಯೂ ಹೆಚ್ಚಾಗಿತ್ತು. ಹೀಗಾಗಿ ರೈತರಿಂದ ₹6 ಸಾವಿರ ಬೆಂಬಲ ಬೆಲೆಯಡಿ ರಾಜ್ಯದಲ್ಲಿ 17 ಲಕ್ಷ ಕ್ವಿಂಟಲ್ ತೊಗರಿಯನ್ನು ಸರ್ಕಾರ ಖರೀದಿಸಿತ್ತು.</p>.<p>ಆದರೆ, 2015ರಲ್ಲಿ ತೀವ್ರ ಬರ ಆವರಿಸಿ ತೊಗರಿ ಉತ್ಪಾದನೆ ಕಡಿಮೆಯಾಗಿತ್ತು. ತೊಗರಿ ದರ ಪ್ರತಿ ಕ್ವಿಂಟಲ್ಗೆ ₹11,760 ಹಾಗೂ ತೊಗರಿ ಬೇಳೆಯ ದರ ಕೆ.ಜಿಗೆ ₹170 ತಲುಪಿತ್ತು. ಈ ವರ್ಷವೂ ಅಂಥದ್ದೇ ಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ವರ್ತಕರು.</p>.<p>***</p>.<p>ಆರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. 25 ಚೀಲ ಇಳುವರಿ ಬರಬೇಕಿತ್ತು. ಕೇವಲ ಆರು ಚೀಲ ಬಂದಿದೆ.</p>.<p><strong>–ಸೋಮಶೇಖರ ಮುಗಳಿ, ಕೆರಿಭೋಸಗಾ ರೈತ</strong></p>.<p>ಎಂಟು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಬೆಳವಣಿಗೆ ಕುಂಠಿತಗೊಂಡಿದ್ದು, ಹೂವು ಉದುರಿವೆ. ಕಾಯಿಯೂ ಕಟ್ಟಿಲ್ಲ. ಈಗ ಬೆಳೆ ಒಣಗುತ್ತಿದೆ.</p>.<p><strong>–ಬಾಬಾಮಿಯಾ, ಕಲಬುರ್ಗಿ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>