<p><strong>ಮೈಸೂರು:</strong> ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ ₹ 700 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್–3 ಯೋಜನೆ ಅಡಿಯಲ್ಲಿ, ಆರು ವಿಮಾನಗಳ ಹಾರಾಟಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಸಿರು ನಿಶಾನೆ ದೊರೆತಿದೆ.</p>.<p>ಉಡಾನ್–1 ಯೋಜನೆ ಅಡಿಯಲ್ಲಿ 2017ರ ಸೆಪ್ಟೆಂಬರ್ನಿಂದ ಟ್ರೂ ಜೆಟ್ ವಿಮಾನಯಾನ ಸಂಸ್ಥೆಯ ವಿಮಾನವು ನಿತ್ಯವೂ ಮೈಸೂರು–ಚೆನ್ನೈ ನಡುವೆ ಹಾರಾಟ ನಡೆಸಿದೆ. ಉಡಾನ್–3 ಅಡಿಯಲ್ಲಿ, ಅಲಯನ್ಸ್ ಏರ್ ಸಂಸ್ಥೆಯು ಮೈಸೂರು–ಬೆಂಗಳೂರು–ವಿಜಯವಾಡ–ವಿಶಾಖಪಟ್ಟಣಂ ನಡುವೆ ಜೂನ್ 7 ರಿಂದ ವಿಮಾನ ಹಾರಾಟ ಆರಂಭಿಸಿದೆ.</p>.<p>‘ಅಲಯನ್ಸ್ ಏರ್ ಸಂಸ್ಥೆ ಮೈಸೂರು–ಕೊಚ್ಚಿ, ಮೈಸೂರು–ಗೋವಾ, ಮೈಸೂರು–ಹೈದರಾಬಾದ್ ನಡುವೆ ವಿಮಾನ ಹಾರಾಟದ ಪರವಾನಗಿ ಪಡೆದಿದ್ದು, ಜುಲೈನಿಂದ ಹಂತ ಹಂತವಾಗಿ ಸೇವೆ ಆರಂಭಿಸುವುದು. ಟ್ರೂ ಜೆಟ್ ಸಂಸ್ಥೆಯು ಮೈಸೂರು–ಬೆಳಗಾವಿ–ತಿರುಪತಿ–ಹೈದರಾಬಾದ್ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿದೆ.</p>.<p>ಜುಲೈ ಅಂತ್ಯ ಇಲ್ಲವೇ, ಆಗಸ್ಟ್ ಆರಂಭದಲ್ಲಿ ತನ್ನ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಮೈಸೂರು–ಹೈದರಾಬಾದ್ ನಡುವೆ ವಿಮಾನ ಹಾರಾಟಕ್ಕಾಗಿ ಇಂಡಿಗೊ ಸಂಸ್ಥೆ ಅನುಮತಿ ಪಡೆದುಕೊಂಡಿದ್ದು, ಎಂದಿನಿಂದ ಹಾರಾಟ ಆರಂಭಿಸಲಿದೆ ಎಂಬುದನ್ನು ಇದುವರೆಗೂ ಖಚಿತಪಡಿಸಿಲ್ಲ’ ಎಂದು ವಿಮಾನ ನಿಲ್ದಾಣದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p class="Subhead">280 ಎಕರೆ ಜಮೀನು ಭೂಸ್ವಾಧೀನ: ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ 280 ಎಕರೆ ಜಮೀನು ಬೇಕಾಗಿದೆ. ಅಗತ್ಯ ಭೂಮಿ ಕೊಡಲು ರಾಜ್ಯ ಸರ್ಕಾರವೂ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಜಿಲ್ಲಾಡಳಿತ, ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.</p>.<p>‘ಏಕಕಾಲಕ್ಕೆ ಅಂದಾಜು 1,500 ಜನರು ವಿಮಾನ ನಿಲ್ದಾಣಕ್ಕೆ ಬಂದು ಹೋದರೂ ಕಿಂಚಿತ್ ಸಮಸ್ಯೆಯಾಗದಂತೆ ಸಕಲ ಸೌಲಭ್ಯ ಕಲ್ಪಿಸಲು ಬೃಹತ್ ಟರ್ಮಿನಲ್ ನಿರ್ಮಾಣ, 1740 ಮೀಟರ್ ಉದ್ದವಿರುವ ರನ್ ವೇ ಯನ್ನು 2750 ಮೀಟರ್ವರೆಗೂ ವಿಸ್ತರಿ<br />ಸುವುದು, ಈ ಭಾಗದ ಕೃಷಿ, ಕೈಗಾರಿಕಾ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಅನುಕೂಲವಾಗುವಂತೆ ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣ, ಪರ್ಯಾಯ ಟ್ಯಾಕ್ಸಿ ಮಾರ್ಗದ ನಿರ್ಮಾಣವೂ ಉದ್ದೇಶಿತ ವಿಸ್ತರಣೆ–ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿದೆ. ₹ 700 ಕೋಟಿ ಮೊತ್ತದ ಡಿಪಿಆರ್’ ಸಿದ್ಧಗೊಂಡಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ತುರ್ತಾಗಿ 115 ಎಕರೆ ಭೂಮಿ ಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯೂ ಪ್ರಕಟಗೊಂಡಿದೆ. ರಾಜ್ಯ ಸರ್ಕಾರವು, ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಪರಿಹಾರ ಕೊಟ್ಟು, ಈ ಜಮೀನನ್ನು ನಮಗೆ ಹಸ್ತಾಂತರಿಸಿದರೆ, ಶೀಘ್ರವಾಗಿಯೇ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ ₹ 700 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್–3 ಯೋಜನೆ ಅಡಿಯಲ್ಲಿ, ಆರು ವಿಮಾನಗಳ ಹಾರಾಟಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಸಿರು ನಿಶಾನೆ ದೊರೆತಿದೆ.</p>.<p>ಉಡಾನ್–1 ಯೋಜನೆ ಅಡಿಯಲ್ಲಿ 2017ರ ಸೆಪ್ಟೆಂಬರ್ನಿಂದ ಟ್ರೂ ಜೆಟ್ ವಿಮಾನಯಾನ ಸಂಸ್ಥೆಯ ವಿಮಾನವು ನಿತ್ಯವೂ ಮೈಸೂರು–ಚೆನ್ನೈ ನಡುವೆ ಹಾರಾಟ ನಡೆಸಿದೆ. ಉಡಾನ್–3 ಅಡಿಯಲ್ಲಿ, ಅಲಯನ್ಸ್ ಏರ್ ಸಂಸ್ಥೆಯು ಮೈಸೂರು–ಬೆಂಗಳೂರು–ವಿಜಯವಾಡ–ವಿಶಾಖಪಟ್ಟಣಂ ನಡುವೆ ಜೂನ್ 7 ರಿಂದ ವಿಮಾನ ಹಾರಾಟ ಆರಂಭಿಸಿದೆ.</p>.<p>‘ಅಲಯನ್ಸ್ ಏರ್ ಸಂಸ್ಥೆ ಮೈಸೂರು–ಕೊಚ್ಚಿ, ಮೈಸೂರು–ಗೋವಾ, ಮೈಸೂರು–ಹೈದರಾಬಾದ್ ನಡುವೆ ವಿಮಾನ ಹಾರಾಟದ ಪರವಾನಗಿ ಪಡೆದಿದ್ದು, ಜುಲೈನಿಂದ ಹಂತ ಹಂತವಾಗಿ ಸೇವೆ ಆರಂಭಿಸುವುದು. ಟ್ರೂ ಜೆಟ್ ಸಂಸ್ಥೆಯು ಮೈಸೂರು–ಬೆಳಗಾವಿ–ತಿರುಪತಿ–ಹೈದರಾಬಾದ್ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿದೆ.</p>.<p>ಜುಲೈ ಅಂತ್ಯ ಇಲ್ಲವೇ, ಆಗಸ್ಟ್ ಆರಂಭದಲ್ಲಿ ತನ್ನ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಮೈಸೂರು–ಹೈದರಾಬಾದ್ ನಡುವೆ ವಿಮಾನ ಹಾರಾಟಕ್ಕಾಗಿ ಇಂಡಿಗೊ ಸಂಸ್ಥೆ ಅನುಮತಿ ಪಡೆದುಕೊಂಡಿದ್ದು, ಎಂದಿನಿಂದ ಹಾರಾಟ ಆರಂಭಿಸಲಿದೆ ಎಂಬುದನ್ನು ಇದುವರೆಗೂ ಖಚಿತಪಡಿಸಿಲ್ಲ’ ಎಂದು ವಿಮಾನ ನಿಲ್ದಾಣದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p class="Subhead">280 ಎಕರೆ ಜಮೀನು ಭೂಸ್ವಾಧೀನ: ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ 280 ಎಕರೆ ಜಮೀನು ಬೇಕಾಗಿದೆ. ಅಗತ್ಯ ಭೂಮಿ ಕೊಡಲು ರಾಜ್ಯ ಸರ್ಕಾರವೂ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಜಿಲ್ಲಾಡಳಿತ, ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.</p>.<p>‘ಏಕಕಾಲಕ್ಕೆ ಅಂದಾಜು 1,500 ಜನರು ವಿಮಾನ ನಿಲ್ದಾಣಕ್ಕೆ ಬಂದು ಹೋದರೂ ಕಿಂಚಿತ್ ಸಮಸ್ಯೆಯಾಗದಂತೆ ಸಕಲ ಸೌಲಭ್ಯ ಕಲ್ಪಿಸಲು ಬೃಹತ್ ಟರ್ಮಿನಲ್ ನಿರ್ಮಾಣ, 1740 ಮೀಟರ್ ಉದ್ದವಿರುವ ರನ್ ವೇ ಯನ್ನು 2750 ಮೀಟರ್ವರೆಗೂ ವಿಸ್ತರಿ<br />ಸುವುದು, ಈ ಭಾಗದ ಕೃಷಿ, ಕೈಗಾರಿಕಾ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಅನುಕೂಲವಾಗುವಂತೆ ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣ, ಪರ್ಯಾಯ ಟ್ಯಾಕ್ಸಿ ಮಾರ್ಗದ ನಿರ್ಮಾಣವೂ ಉದ್ದೇಶಿತ ವಿಸ್ತರಣೆ–ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿದೆ. ₹ 700 ಕೋಟಿ ಮೊತ್ತದ ಡಿಪಿಆರ್’ ಸಿದ್ಧಗೊಂಡಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ತುರ್ತಾಗಿ 115 ಎಕರೆ ಭೂಮಿ ಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯೂ ಪ್ರಕಟಗೊಂಡಿದೆ. ರಾಜ್ಯ ಸರ್ಕಾರವು, ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಪರಿಹಾರ ಕೊಟ್ಟು, ಈ ಜಮೀನನ್ನು ನಮಗೆ ಹಸ್ತಾಂತರಿಸಿದರೆ, ಶೀಘ್ರವಾಗಿಯೇ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>