<p><strong>ನವದೆಹಲಿ:</strong> ದುಬಾರಿ ದರ ಮತ್ತು ಕಳಪೆ ಗುಣಮಟ್ಟದ ಕಾರಣಕ್ಕೆ ಕರ್ನಾಟಕದಲ್ಲಿ 2018–19ನೆ ಸಾಲಿನಲ್ಲಿ 22 ಲಕ್ಷ ಟನ್ಗಳಷ್ಟು ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ.</p>.<p>ಹಿಂದಿನ ವರ್ಷ ರಾಜ್ಯದಲ್ಲಿ 2.84 ಕೋಟಿ ಟನ್ಗಳಷ್ಟು ಕಬ್ಬಿಣ ಅದಿರು ಉತ್ಪಾದಿಸಲಾಗಿತ್ತು. ಅದರಲ್ಲಿ 2.62 ಕೋಟಿ ಟನ್ ಮಾತ್ರ ಮಾರಾಟವಾಗಿದ್ದು, 22 ಲಕ್ಷ ಟನ್ ಮಾರಾಟವಾಗದೆ ಉಳಿದಿದೆ ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಘ (ಕೆಐಎಸ್ಎಂಎ) ತಿಳಿಸಿದೆ.</p>.<p>‘ದುಬಾರಿ ಬೆಲೆ ಮತ್ತು ಕಳಪೆ ಗುಣಮಟ್ಟದಿಂದ ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ ಎಂದು ಸಂಘದ ಕಾರ್ಯದರ್ಶಿ ರಮಣ ಕುಮಾರ್ ಹೇಳಿದ್ದಾರೆ.</p>.<p>ಕಬ್ಬಿಣ ಅದಿರಿನ ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮತ್ತು ಸ್ಥಳೀಯ ಅದಿರಿಗೆ ಆದ್ಯತೆ ನೀಡಬೇಕು ಎಂದು ಗಣಿಗಾರಿಕೆ ಅವಲಂಬಿಸಿದವರು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಗೆ ಇತ್ತೀಚಿಗೆ ಮನವಿ ಮಾಡಿಕೊಂಡಿದ್ದರು.</p>.<p>ಸುಪ್ರೀಂಕೋರ್ಟ್ ರಾಜ್ಯದಲ್ಲಿ 2011ರಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಿಷೇಧಿಸಿತ್ತು. ಆನಂತರ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿ, ಉತ್ಪಾದನೆಗೆ ಮಿತಿ ವಿಧಿಸುವುದರ ಜತೆಗೆ ಕೆಲ ನಿಬಂಧನೆಗಳನ್ನು ಹೇರಿತ್ತು.</p>.<p>ಇದರಿಂದ ಸಣ್ಣ ಉದ್ದಿಮೆದಾರರು ಮತ್ತು ಟ್ರಕ್ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ನಷ್ಟ ಉಂಟಾಗಿ, ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ (ಕೆಜಿಎವಿ) ಆರೋಪಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದುಬಾರಿ ದರ ಮತ್ತು ಕಳಪೆ ಗುಣಮಟ್ಟದ ಕಾರಣಕ್ಕೆ ಕರ್ನಾಟಕದಲ್ಲಿ 2018–19ನೆ ಸಾಲಿನಲ್ಲಿ 22 ಲಕ್ಷ ಟನ್ಗಳಷ್ಟು ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ.</p>.<p>ಹಿಂದಿನ ವರ್ಷ ರಾಜ್ಯದಲ್ಲಿ 2.84 ಕೋಟಿ ಟನ್ಗಳಷ್ಟು ಕಬ್ಬಿಣ ಅದಿರು ಉತ್ಪಾದಿಸಲಾಗಿತ್ತು. ಅದರಲ್ಲಿ 2.62 ಕೋಟಿ ಟನ್ ಮಾತ್ರ ಮಾರಾಟವಾಗಿದ್ದು, 22 ಲಕ್ಷ ಟನ್ ಮಾರಾಟವಾಗದೆ ಉಳಿದಿದೆ ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಘ (ಕೆಐಎಸ್ಎಂಎ) ತಿಳಿಸಿದೆ.</p>.<p>‘ದುಬಾರಿ ಬೆಲೆ ಮತ್ತು ಕಳಪೆ ಗುಣಮಟ್ಟದಿಂದ ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ ಎಂದು ಸಂಘದ ಕಾರ್ಯದರ್ಶಿ ರಮಣ ಕುಮಾರ್ ಹೇಳಿದ್ದಾರೆ.</p>.<p>ಕಬ್ಬಿಣ ಅದಿರಿನ ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮತ್ತು ಸ್ಥಳೀಯ ಅದಿರಿಗೆ ಆದ್ಯತೆ ನೀಡಬೇಕು ಎಂದು ಗಣಿಗಾರಿಕೆ ಅವಲಂಬಿಸಿದವರು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಗೆ ಇತ್ತೀಚಿಗೆ ಮನವಿ ಮಾಡಿಕೊಂಡಿದ್ದರು.</p>.<p>ಸುಪ್ರೀಂಕೋರ್ಟ್ ರಾಜ್ಯದಲ್ಲಿ 2011ರಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಿಷೇಧಿಸಿತ್ತು. ಆನಂತರ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿ, ಉತ್ಪಾದನೆಗೆ ಮಿತಿ ವಿಧಿಸುವುದರ ಜತೆಗೆ ಕೆಲ ನಿಬಂಧನೆಗಳನ್ನು ಹೇರಿತ್ತು.</p>.<p>ಇದರಿಂದ ಸಣ್ಣ ಉದ್ದಿಮೆದಾರರು ಮತ್ತು ಟ್ರಕ್ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ನಷ್ಟ ಉಂಟಾಗಿ, ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ (ಕೆಜಿಎವಿ) ಆರೋಪಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>